1/21/15

                           ಶುಭಾಷಯಗಳು 
ಎಸ್ ವಿ ಪಿ ಕನ್ನಡ ಆಧ್ಯನ ಸಂಸ್ಥೆಯ ಮುಖ್ಯಸ್ಥರಾಗಿ ಆಧಿಕಾರ ವಹಿಸಿಕೊಂಡಿರುವ  ಪ್ರೊ .ಬಿ  ಶಿವರಾಮ ಶೆಟ್ಟಿ ಇವರಿಗೆ ಬಿತ್ತಿ ಸಂಪಾದಕೀಯ ಬಳಗದ ವತಿಯಿಂದ ಮನಪೂರ್ವಕವಾದ ಅಭಿನಂದನೆಗಳು



ಸುಮ್ಮನೆ ಬರೆದುಕೊಂಡದ್ದು..!
ಚುಮು ಚುಮು ಚಳಿಯ ಮುಂಜಾವಿನಲ್ಲಿ ಸಾವಿನಂತ ನಿದ್ದೆಯಲ್ಲೂ ಅದೊಂದು ಹಾಳು ಕನಸು ಬೀಳದಿದ್ದರೆ ಎಚ್ಚರಗೊಳ್ಳುತ್ತಿರಲಿಲ್ಲವೇನೋ? ಕಣ್ಣು ಬಿಟ್ಟರೆ ಹಗ್ಗದಲ್ಲಿ ನೇತಾಡುತ್ತಾ ಮತ್ತೊಂದು ದಿನವನ್ನು ಹತ್ಯೆಮಾಡಲು ಕಾಯುತ್ತಿರುವ ಕ್ಯಾಲೆಂಡರ್! ಅದಾಗಲೇ ಮಸಣದಲ್ಲಿ ಉರಿಯುವ ಬೆಂಕಿಯಂತ ಈ ಹಾಳು ಸೂರ್ಯನಿಗೆ ಹಲ್ಲುಜ್ಜದ ಎಂಜಲು ಉಗಿಯಬೇಕೆನ್ನುವಷ್ಟರಲ್ಲಿ ಅಮ್ಮನ ಮಾಮೂಲು ಸುಪ್ರಭಾತ. ಅಪ್ಪನದ್ದು ಮಿಲಿಟ್ರಿ ನಡಿಗೆ. ಇನ್ನು ತಂಗಿಯದ್ದು ಜಾತ್ರೆಯ ಅಂಗಡಿಗಳ ಸಾಲು ನೆನಪಿಸುವ ಮೇಕಪ್ಪು! ಇವಿಷ್ಟನ್ನು ಹೊಂದಿಸಿಕೊಂಡು ಹೊರಡುವಷ್ಟರಲ್ಲಿ ಅರ್ಧ ಸುಟ್ಟ ಹೆಣದಂತೆ ಹಳತಾಗಿರುವ ಬೈಕ್! ಅದನ್ನು ಏರಿ ಕ್ಯಾಂಪಸ್ಗೆ ಬಂದರೆ, ಅರೆ! ಅದ್ಭುತ. ರಂಗು ರಂಗಿನ ಬಾನಿನಲ್ಲಿ ಬೇಕೆಂದರಲ್ಲಿ ಅಡ್ಡಾಡುವ ಬಾನಾಡಿಗಳಂತಹ, ಶುದ್ಧ ಕನಸ್ಸನ್ನು ಹೊತ್ತು ಸಾಗುತ್ತಿರುವ ದೀಪಗಳ ಸಾಲುಗಳಂತಹ ಮನಸ್ಸುಗಳ ಮೆರವಣಿಗೆ.ಹೀಗೆ ಪ್ರತೀ ದಿನದ ಹತ್ಯೆಯಲ್ಲೂ ಮರುದಿನದ ಗಂಗೋತ್ರಿಯ ಹರಿವಿಗೆ ಹೊಸತನ ದೊರಕುತ್ತಿರುತ್ತದೆ. ಇದೇನು ಇಂದು ನಿನ್ನೆಯದ್ದಲ್ಲ. ಸಾವಿರ ಸಾವಿರ ದಿನಗಳಲ್ಲೂ ಆಕಾಶ ಮತ್ತು ಚಂದ್ರನಿಗಿದ್ದಂತಹ ಗಟ್ಟಿ ಸಂಬಂಧ ಗಂಗೋತ್ರಿಯ ನೆಲದ್ದು. ಧೋ.. ಎಂದು ಭೋರ್ಗರೆವ ಹಾಳು ಮಳೆಗೂ ಕ್ಯಾಂಪಸ್ಸಿನಲ್ಲಿ ಕಲರವ ಇದ್ದೇ ಇರುತ್ತದೆ. ಇನ್ನು 'ಮಿಂಚು ಗುಡುಗುಗಳು' ಮಾಮೂಲು ದಾರಿಗಳಲ್ಲಿ, ಕ್ಯಾಂಟೀನು, ಬಸ್ಸ್ಟ್ಯಾಂಡ್ಗಳಲ್ಲಿ ದಿನಾ ಎದುರಾಗುತ್ತವೆ ಅಲ್ಲವೇ ಗೆಳೆಯರೆ. ಕುಣಿದು ಕುಪ್ಪಳಿಸುವುದಕ್ಕೆ, ಗೆಳೆಯರ ಹೆಗಲಿನಲ್ಲಿ ಪುಟ್ಟ ಮಗುವಾಗಿ ಕಣ್ಣೀರು ಸುರಿಸುವುದಕ್ಕೆ, ಅವಳಿಗಾಗಿ ಕಾಯುತ್ತಾ ಕಾಲ ಸವೆಸುವುದಕ್ಕೆ, ಅವಳಿಗಾಗಿಯೇ ಲೈಬ್ರೆರಿ, ಕ್ಯಾಂಟೀನ್, ಕ್ಲಾಸುಗಳಲ್ಲಿ ಅಡ್ಡಾಡುವುದಕ್ಕೆಲ್ಲಾ ಅವಕಾಶ ನೀಡುವುದು ಇದೇ ಗಂಗೋತ್ರಿ. ಗಂಗೋತ್ರಿಯ ಹಸಿವೇ ಅಂತಹದ್ದು. ಅಕ್ಷರದಿಂದ ಹಿಡಿದು ಅನ್ನದವರೆಗೆ, ದು:ಖದಿಂದ ಆರಂಭಿಸಿ ಕೇಕೆ ಹಾಕುವವರೆಗೆ, ಕಾಯುವ ಕಷ್ಟದಿಂದ ತೊಡಗಿ ಅವಳು ಕಾಣಿಸುವ ಸುಖಗಳಿಗೆಯವರೆಗೆ, ಕೊನೆಗೆ ಹಾಳು ನಿದ್ದೆಯಿಂದ ಎದ್ದು ನಮ್ಮ ಎಂದಿನ ಇನಿಯ-ಹಳೆಯ ಕಂಬಳಿ ಸುತ್ತಿ ಮಲಗುವವರೆಗೆ ಒಂದಿಡೀ ಕಾಲ ಚಕ್ರ ಸುತ್ತುವ ಹಾದಿಯಲ್ಲೆಲ್ಲಾ ಗಂಗೋತ್ರಿಯ ಮಣ್ಣಿನ ಸುವಾಸನೆ ಇದ್ದೇ ಇರುತ್ತದೆ ಗೆಳೆಯರೆ.  ಮುಂದಿನ ದಿನಕ್ಕೆ ಆ ಹಸಿವು ಹಾಗೆ ಮುಂದುವರಿದಿರುತ್ತದೆ. ಬೇಕಿದ್ದರೆ ಹೊಟ್ಟೆಯ ಮೇಲೆ ಕೈಯಿಟ್ಟು ಆಲಿಸಿ ನೋಡಿ!!ಇದೆಲ್ಲಾ ನೆನಪಾದದ್ದು ಇದೇ ನಿನ್ನೆಯೆಂಬ ಶವದ ಮುಂದೆ ಕುಳಿತು 'ಮುಖಪುಟ' ನೋಡುತ್ತಿದ್ದಾಗ. ಇದೇ ಪುಟ್ಟ ಗೆಳೆಯನೊಬ್ಬ ಬಂದು ಪೆನ್ನಿನಿಂದ ಒಂದಕ್ಷರ ಕೆತ್ತಿಕೊಡಿ ಎಂದಾಗ. ಅರೆ, ನಾನು ಹೀಗೆ ಮನಸ್ಸಿನ ಮಾತಿಗೆ ಅಕ್ಷರದಲ್ಲಿ ಬಸಿರು ಮೂಡಿಸದೆ ಕಾಲವೆಷ್ಟಾಯಿತು? ಅಗೋ ಅಲ್ಲೇ ಅವಳ ಗೆಜ್ಜೆಯ ಸದ್ದು. ಹೂಂ ಅಂದದ್ದೂ ಸರಿಹೋಯಿತು. ಬರೆದು ಬಿಡಲೇ, ಅದು ನನ್ನ ಕೆಲಸ, ಊಟ ಮಾಡಿದಂತೆ, ಹೊಗೆಯಾಡಿದಂತೆ! ಆಗಬೇಕೆಂದರೆ ಬರೆಯಬೇಕು, ಅದನ್ನು ಯಾರಾದರೂ ಓದಿದಾಗ, ಓದುತ್ತಿರುವಾಗ ದೂರದಲ್ಲಿ ನಿಂತು, ನನ್ನ ಅಕ್ಷರದ ಘಮ ಹೀರುತ್ತಿರುವ ಮುಖಗಳ ಮುಗುಳ್ನಗುವನ್ನು ಕಂಡಾಗ ಆಗುವ ಸುಖ, ಅಸಲು ಸಾವಿನಲ್ಲೂ ಇರಲಿಕ್ಕಿಲ್ಲ ಗೆಳೆಯರೆ! ಹಾಗಾಗಿ ಸುಮ್ಮ ಸುಮ್ಮನೆ ಮನಸ್ಸಿನ ಮಾತಿಗೆ ಆಕಾರಗಳನ್ನು ಸೇರಿಸಿ ಮುಂದಿಟ್ಟುಬಿಡಿ, ಓದುವ ಕಣ್ಣುಗಳಿಗೆಲ್ಲಾ ಅದು ಸಾವಿರಾರು ರೂಪಗಳನ್ನು ಕೊಟ್ಟೀತು, ಯಾರಿಗೊತ್ತು! ನಿಮ್ಮ ಹೆಸರಿಗೆ ಹೆಸರು ಬಂದೀತು! ಯಾವುದೂ ಆಗದಿದ್ದರೆ ಪೆನ್ನಿನ ಶಾಯಿ ಮುಗಿದು, ಹೊಸ ಪೆನ್ನಾದರೂ ಕಿಸೆಯಲ್ಲಿ ರಾರಾಜಿಸೀತು!ಹೀಗಂದುಕೊಂಡೇ ನಾನು ರಾತ್ರಿ ಬರೆಯಲು ಹೊರಟಿದ್ದು. ಬರೆದ ಶೀಷರ್ಿಕೆಯ ಮೊದಲ ಅಕ್ಷರಕ್ಕೇ ಪೆನ್ನು ಒಲ್ಲೆನೆಂದಿತು. ಹಾ, ಇನ್ನು ಈ ಕರೆಂಟೋ, ಅವಳ ನೋಟದಂತೆ ಚಶ್ಮಾದೊಳಗಿನಿಂದ ಕಣ್ಣುಮಿಟುಕಿಸಿದಂತೆ ಹಾಗೆ ಬಂದು ಹೀಗೆ ಹೋಯಿತು! ಹೊರಗೆ ಬಾನಿನಲ್ಲಿ ಚಂದ್ರನೂ ಇಲ್ಲದನ್ನು ಕಂಡು, ಅವನಿಗೂ ಬೈದು, ಕಂಬಳಿ ಸುತ್ತಿ ಮಕಾಡೆ ಮಲಗಿ ಕಣ್ಣುಮುಚ್ಚಿದೆ. ಬೆಳಗ್ಗೆ ಎದ್ದರೆ ಹೊಸ ಮುಂಜಾವು. ಅಂಗಡಿಗೆ ಬಂದು ತೆಗೆದುಕೊಂಡ ಹೊಸ ಪೆನ್ನಿನ ಶಾಯಿಯಲ್ಲೇ, ನಿನ್ನೆ ಉಳಿದುಹೋದ ಅಕ್ಷರಕ್ಕೆ, ಅಕ್ಷರ ಜೋಡಿಸುತ್ತಿದ್ದೇನೆ. ಆ ಹಾಳು ಕನಸಿಗೂ ಮತ್ತೊಂದು ಹೊಸ ಕನಸು ಪೋಣಿಸುವಂತಿದ್ದರೆ ಹೇಗಿರುತ್ತಿತ್ತು, ಅಬ್ಬಾ... ಇರಲಿ, ಹೊಸ ಕನಸಿನ ಮುಂಜಾವು ಹೀಗೆ ಎದುರಾಗಿದೆ, ಇನ್ನು ಅವಳೂ ಎದುರಾದಾಳು! ನೀವೆಲ್ಲರೂ ಕಂಡ ಕನಸಿನ ಬದುಕಿಗೆ ಗೆಜ್ಜೆ ಕಟ್ಟಿಕೊಳ್ಳಿ. ಕಣ್ಣೂ ನಿಮ್ಮದೇ, ಕನಸೂ ನಿಮ್ಮದೇ. ಕಂಡ ಕನಸ್ಸನ್ನು ಹೀಗೆ ಬರೆದುಕೊಳ್ಳಿ, ಬರವಣಿಗೆಯ ಸುಖ ನಿಮಗೆ ನೀವೇ ಅನುಭವಿಸಿಕೊಳ್ಳಿ...
ಯಶುಕುಮಾರ್. ಡಿ ಸಂಶೋಧನಾರ್ಥಿ  ಕನ್ನಡ ವಿಭಾಗ
ಗಾಂಧಿಯ ದೂರದೃಷ್ಠಿಯಲ್ಲಿ ಮೋಡಿ ನಡೆದಿತೆ?

       ಗಾಂಧಿ ಎಂದ ಕ್ಷಣ ನಾವೆಲ್ಲರೂ 'ರಾಷ್ಟ್ರಪಿತ' ಎನ್ನುವ ಕಲ್ಪನೆಯನ್ನು ಇಟ್ಟುಕೊಂಡಿದ್ದೇವೆ. ಮಾತ್ರವಲ್ಲ ಗಾಂಧಿಯವರ ದೂರದೃಷ್ಠಿ ಎಲ್ಲರಿಗೂ ಎಲ್ಲಾ ಸಮಯದಲ್ಲೂ ಅನ್ವಯವಾಗುವಂತದು. ಗಾಂಧೀಜಿಯವರು ಕಂಡ ಕನಸು ಸ್ವಾತಂತ್ರ್ಯೋತ್ತರ ಭಾರತವನ್ನು ಮಾದರಿ ರಾಜ್ಯವಾಗಿ ನಿರೂಪಿಸುವ ಮಹತ್ವಕಾಂಕ್ಷೆಯನ್ನು ಹೊಂದಿದವರು. ಸಾಕಷ್ಟು ಸುಧಾರಣೆಯ ಬಳಿಕ ರಾಮರಾಜ್ಯದ ಕಲ್ಪನೆಯ ಕನಸು ಹೊಂದಿದ್ದರು, ಇದನ್ನು ಇಂದಿನ ಯುವ ಜನಾಂಗಕ್ಕೆ ಊಹಿಸಲು ಅಸಾಧ್ಯ. ಯಾಕೆಂದರೆ ಗಾಂಧೀಜಿ ಯವರು ಕೆಲವರಿಗೆ ಆದರ್ಶ ವ್ಯಕ್ತಿಯಾದರೆ ಇನ್ನು ಕೆಲವರಿಗೆ ಗಾಂಧೀಜಿ ಯವರ ಬಗ್ಗೆ ತುಂಬಾ ಹಗುರವಾಗಿ ಮಾತನಾಡುವುದನ್ನು ನೋಡುತ್ತೇವೆ. ಯಾಕೆಂದರೆ ಇಂದಿನವರಿಗೆ ಗಾಂಧೀಜಿ ಬೇಡ, ಮೋದಿ ಬೇಕು. ಹೀಗಾಗಲು ಹಲವಾರು ಕಾರಣವಿರಬಹುದು. ಕೆಲವರು ' ಮೋದಿ ಎಂಬ ಎದೆಯೊಳಗಿನ ಕೂಸು' ಹೆಸರೆತ್ತಿದ ಕ್ಷಣ ಸಿಡಿಮಿಡಿಗೊಳ್ಳುವ, ಉರಿದು ಬೀಳುವ ಯುವ ಜನಾಂಗದ ಬಿಸಿನೆತ್ತರು ಉಕ್ಕುತ್ತಿದೆ. ಈ ಉಕ್ಕುವ ರಕ್ತವನ್ನು ಬಳಕೆ ಹೇಗೆ ಮಾಡಬೇಕು ಎನ್ನುವುದು ಗೊತ್ತಿಲ್ಲ? ಯಾಕೆಂದರೆ ಮೋದಿ ಬಗ್ಗೆ ತಿಳಿದಿರುವ ನಾವು ಮೋದಿ ಸರಕಾರ ರೂಪಿಸುತ್ತಿರುವ ಒಂದು ಮಹತ್ವಕಾಂಕ್ಷೆ ಯೋಜನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಲಬೇಕು. ಅದುವೆ 'ಸ್ವಚ್ಚ ಭಾರತ್' ಅಭಿಯಾನದಲ್ಲಿ ಯುವ ಜನಾಂಗದ ಪಾತ್ರ ಬಹಳ ಮಹತ್ತರವಾದದು. ಯಾಕೆಂದರೆ ಸಿಕ್ಕ ಸಿಕ್ಕ ಕಡೆಗಳಲ್ಲಿ ಕಸಗಳನ್ನು ಮತ್ತು ಬೇಡದ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುವ ಜಾಯಮಾನ ಇಂದಿನ ಯುವ ಪೀಳಿಗೆಯಲ್ಲಿದೆ. ಅಷ್ಟು ಮಾತ್ರವಲ್ಲ ಇಲ್ಲಿ ಕಸ ಹಾಕಬಾರದು ಎಂಬ ಸೂಚನ ಫಲಕ ಇದ್ದ ಜಾಗದಲ್ಲೆ ಉದ್ದೇಶ ಪೂರ್ವಕವಾಗಿ ಕಸವನ್ನು ಹಾಕುತ್ತೇವೆ. ಇದಕ್ಕೆ ಕಾರಣ ಅರಿವಿನ ಕೊರತೆ ಅಲ್ಲ, ಹೇಗಾದರೂ ಹೀಗೆ ಅಲ್ಲವೆ? ಎನ್ನುವ ಬೇಜಾವಬ್ದಾರಿ. ಈ ಯೊಜನೆಯನ್ನು ಜಾರಿಗೆ ತಂದ ಬಳಿಕ ಯುವ ಜನಾಂಗ ಬದಲಾದಿತು ಮತ್ತು ಸ್ವಚ್ಚ ದೇಶದ ಕಲ್ಪನೆಯು ಅವರ ಮನಸ್ಸುಗಳಲ್ಲಿ ಮೂಡಿತು ಎನ್ನುವ ಚಿಕ್ಕ ಆಸೆಯನ್ನು ಇಟ್ಟುಕೊಳ್ಳ ಬಹುದು.
       ಹಾಗೆ ಎಂದು ಜನತೆ ಕನಸು ಕಾಣುತ್ತಾ ಸುಮ್ಮನೆ ಕುಳಿತುಕೊಳ್ಳುವುದು ಸರಿಯಲ್ಲ. ಯಾಕೆಂದರೆ ತಮ್ಮ ಶ್ರಮ ಕೂಡ ದೇಶಕ್ಕೆ ಅಮೂಲ್ಯವಾದದ್ದು ಎನ್ನುವುದನ್ನು ಮರೆಯಬಾರದು 'ಸ್ವಚ್ಚ' ಎಂದ ಕ್ಷಣ ಎಲ್ಲವೂ ಅದರಲ್ಲಿಯೂ ದೇಹ, ಮನಸ್ಸು, ನದಿಮೂಲ, ಜಲಮೂಲ, ಮಣ್ಣು ಎಲ್ಲವೂ ಸ್ವಚ್ಚವಾಗಬೇಕಲ್ಲ ಮಾತ್ರವಲ್ಲ ಯೋಚನೆಯ ಧಾಟಿ, ಹೀಗೆನೆ ನಮ್ಮ ದೇಶ ಸುಭೀಕ್ಷ ದೇಶವಾಗಲು 2019ರ ಗುರಿಯನ್ನು ಹೊಂದಿರುವ ಪ್ರಜೆಗಳು, ಕಾರ್ಯಮಗ್ನರಾಗಬೇಕು ಈ ಕ್ಷಣದಿಂದ ಅಲ್ಲವೆ?
ಹೀಗೆ ಹೇಳಿದ ತಕ್ಷಣ ಇದಕ್ಕಾಗಿ ನಾವು ಏನು ಮಾಡಬೇಕು? ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಮೂಡಬಹುದು. ಇದಕ್ಕೆ ಉತ್ತರ ಕೂಡ ಯುವ ಜನಾಂಗದಲ್ಲಿ ಅಸ್ಪಷ್ಟವಾಗಿರಬಹುದು. ಯಾಕೆಂದರೆ ದೇಶದ ಕಲ್ಪನೆ ಅವರಿಗೆ ಇಲ್ಲದೆ ಇರಬಹುದು. ಆದರೆ ನಮ್ಮ ಮನೆ, ನಮ್ಮ ಊರು ಇವುಗಳ ಕಲ್ಪನೆ ಸಾಮಾನ್ಯವಾಗಿ ಇರುತ್ತದೆ. ಮೊದಲು ಯುವ ಜನಾಂಗ ಕೆಲವೊಂದು ಚಟಗಳನ್ನು ಬಿಡಬೇಕು. ಮಾತ್ರವಲ್ಲ ತಮ್ಮ ಮನೆಯ ಸುತ್ತಮುತ್ತ ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಸ್ವಚ್ಚ ಎಂದ ತಕ್ಷಣ ಗುಡಿಸುವುದು, ನೆಲ ಒರೆಸುವುದು ಅಲ್ಲ. ಮನೆಯ ಪರಿಸರವನ್ನು ಸ್ವಚ್ಚ ಗೊಳಿಸುವುದು ಬಳಿಕ ತಮ್ಮ ಸುತ್ತಮುತ್ತಲಿನ ಮನೆಯವರಲ್ಲಿ ಜಾಗೃತಿಯನ್ನು ಮೂಡಿಸುವುದು ಮುಖ್ಯ. ಬಳಿಕ ತಿಳುವಳಿಕೆಯನ್ನು ನೀಡುವುದು ಮಾತ್ರವಲ್ಲ ತಾವು ಕೂಡ ಅದರಲ್ಲಿ ಭಾಗವಹಿಸಬೇಕು. ಇಷ್ಟು ಎಂದ ಮಾತ್ರಕ್ಕೆ ಎಲ್ಲಾ ಜವಾಬ್ದಾರಿಗಳು ಮುಗಿಯಿತು ಎಂದು ತಿಳಿಯವಾರದು.
       ಇನ್ನಷ್ಟು ಕೆಲಸಗಳು ಬಾಕಿ ಉಳಿದಿವೆ. ಅದರಲ್ಲಿ ನದಿ ಮೂಲ ಸ್ವಚ್ಚಗೊಳಿಸುವುದು ಅದರಲ್ಲಿ ಗಂಗಾ ನದಿಯನ್ನು ಸ್ವಚ್ಚಗೊಳಿಸುವುದು ತುಂಬಾ ಗಂಭೀರವಾದ ವಿಚಾರ. ನದಿಯನ್ನು ಮಲಿನ ಮಾಡುವ ಮತ್ತು ಎಲ್ಲೆಂದರಲ್ಲಿ ಕಸ ಹಾಕುವವರಿಗೆ ತಡೆಯೊಡ್ದಲಾದಿತೇ? ಎನ್ನುವ ಪ್ರಶ್ನೆ ಮನಸಿನ ಆಳದಲ್ಲಿ ಮೂಡುತ್ತದೆ. ಯಾಕೆಂದರೆ ಇದಕ್ಕೆ ನಮ್ಮ ದೇಶದ ಇತಿಹಾಸ ಪುಟಗಳನ್ನು ತಿರುವಿ ಹಾಕುವಾಗ ಸಾಕಷ್ಟು ಘಟನೆಗಳು ಉದಾಹರಣೆಯಾಗಿ ಸಿಗುತ್ತವೆ. ಇದನ್ನೆಲ್ಲ  ಗಮನಿಸಿದಾಗ ಮುಂದೆ ಏನಾಗಬಹುದು ಎನ್ನುವ ತಿಮರ್ಾನಕ್ಕೆ ಕೆಲವರಂತೂ ಬಂದಿರಬಹುದು. ಇದನ್ನು ಪುಷ್ಠಿಕರಿಸಲು ಪ್ರಮುಖವಾದ ಘಟನೆಗಳು ಕಣ್ಣ ಮುಂದೆ ಗರಿಬಿಚ್ಚಿ ಕುಣಿಯುತ್ತದೆ. ಆ ಘಟನೆಗಳು ಮುಂದೆ ಏನಾದೀತು ಎನ್ನುವ ಬಗ್ಗೆ ಭವಿಷ್ಯವನ್ನು ನುಡಿಯಬಹುದು, ಹಾಗೆಂದ ಮಾತ್ರಕ್ಕೆ 'ಸ್ವಚ್ಚ ಭಾರತ ಅಭಿಯಾನ' ಯಶಸ್ವಿಯಾಗಲಿಕ್ಕಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಇದಕ್ಕಾಗಿಯೇ ಒಂದಷ್ಟು ಕಾಲಾವಧಿ ಹೆಚ್ಚು ತೆಗೆದುಕೊಳ್ಳಬಹುದು ಅಷ್ಟೆ. ಯಾಕೆಂದರೆ ನಮ್ಮ ದೇಶ ಮುಂದುವರಿಯುತ್ತಿರುವ ರಾಷ್ಟ್ರ. ಆದ್ದರಿಂದ ಇದು ಜನರ ಪಾಲುಗೊಳ್ಳುವಿಕೆಯನ್ನು ಒಳಗೊಂಡಿದೆ. ಇದರಲ್ಲಿ ಶೇಕಡ 20ರಷ್ಟು ಜನ ನಿಧಾನವಾಗಿ ಸೇರಿಕೊಳ್ಳುವವರು. ಇನ್ನು ಉಳಿದ ಜನರು ಭಾಗವಹಿಸದೇ ಇರಬಹುದು. ಇಷ್ಟೆಂದ ಮಾತ್ರಕ್ಕೆ ಸಾಧ್ಯವಿಲ್ಲ ಎಂದು ಅರ್ಥ ಅಲ್ಲ. ಅದಕ್ಕೆ ತಾಳ್ಮೆ, ಸಹನೆ, ಅಗತ್ಯ. ಈ ಎರಡು ಅಂಶಗಳು ಯುವ ಜನಾಂಗದಲ್ಲಿ ಇಲ್ಲ. ಆದ್ದರಿಂದ ಒಮ್ಮೆ ಭಾಗವಹಿಸಿದ ವ್ಯಕ್ತಿ ಮತ್ತೊಮ್ಮೆ ಭಾಗವಹಿಸೀಯಾನು ಎಂಬ ನಂಬಿಕೆ ಇಲ್ಲ. ಯಾಕೆಂದರೆ ಮಾನವನಿಗೆ ಇರುವ ಸ್ವಾರ್ಥ ಪ್ರಜ್ಞೆ ಎಲ್ಲವನ್ನು ನುಂಗಿ ನೀರು ಕುಡಿಯುತ್ತದೆ. ಇಂದಿನ ಯುವ ಜನಾಂಗ ಲಾಭದ ದೃಷ್ಟಿಯಿಂದ ನೋಡಿದರೆ, ಅದು ಯೋಜನೆ ಯಾವುದೇ ಇರಲಿ' ನೀರ ಮೇಲೆ ಮಾಡಿದ ಹೋಮವಾದೀತು' ಎಂದರೆ ತಪ್ಪಲ್ಲ. ಯಾಕೆಂದರೆ ಯುವ ಜನಾಂಗಕ್ಕೆ ಅಂಟಿರುವ ಮಹಾನ್ ವ್ಯಾಧಿ ಎಂದರೆ 'ಸ್ವಾರ್ಥ'. ಅದು ದೇಶವನ್ನು ಕೂಡ ಅಧೋಗತಿಗೆ ತಳ್ಳುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗೆನೆ ಇದರಿಂದ ಜನರನ್ನು ಬಂಧ ಮುಕ್ತಗೊಳಿಸಿದರೆ ಸ್ವಾರ್ಥ ಹೋಗಿ ದೇಶಾಭಿಮಾನ ಮೂಡಿತು. ಮಾತ್ರವಲ್ಲ ಆ ಶಕ್ತಿ ಇರುವುದು ಮೋದಿಯವರ ಭಾಷಣದಲ್ಲಿ ಎಂಬುದಂತು ಸತ್ಯ.  'ಭಾರತ ಸ್ವಚ್ಚವಾಗಲಿ' ನಾವೆಲ್ಲರೂ ಕೈ ಜೋಡಿಸೋಣ ಎಂದು ಇಷ್ಟು ಹೇಳಿದ ಮಾತ್ರಕ್ಕೆ ಯುವ ಜನಾಂಗಕ್ಕೆ ಅರ್ಥವಾಗಬೇಕಲ್ಲ? ಇವರುಗಳು ಅದರ ಬಗ್ಗೆ ಯೋಚಿಸಬೇಕಲ್ಲ. ಆದರೆ ಗಾಂಧೀಜಿ ಯವರ ಕನಸನ್ನು ನನಸು ಮಾಡಿಯಾರು ಎನ್ನುವ ಅಶಾಭಾವನೆಯಿಂದ ವಿರಾಮ ನೀಡುತ್ತಿದ್ದೇನೆ.

                                 ಲೋಕೇಶ್ ಕುಂಚಡ್ಕ
                                  ಪ್ರಥಮ ಎಂ.ಎ. ಕನ್ನಡ

ಏಕಾಂಗಿಯಾಗುತ್ತಿರುವ ಬಾಲ್ಯ ಜೀವನ
'ಕೂಡಿ ಬಾಳಿದರೆ ಸ್ವರ್ಗ ಸುಖ' ಎಂಬ ಸುಂದರವಾದ, ಅರ್ಥವತ್ತಾದ ಗಾದೆ ಮಾತೊಂದಿದೆ. ಈ ಗಾದೆಯನ್ನು ಇಲ್ಲಿ ಉಲ್ಲೇಖಿಸಲು ಕಾರಣವೇನೆಂದರೆ, ಒಂದು ಕಾಲವಿತ್ತು ಅದೇನು ಭಾರಿ ಹಿಂದಿನ ಕಾಲವಲ್ಲ ಕೆಲವೇ ದಶಕಗಳ ಹಿಂದೆ. ಆ ಕಾಲದಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ಅವಿಭಕ್ತ ಕುಟುಂಬ ಪದ್ದತಿ ವ್ಯವಸ್ತೆಯಲ್ಲಿತ್ತು. ಈ ಕುಟುಂಬ ವ್ಯವಸ್ಥೆಯಲ್ಲಿಹಿರಿಯರಿಂದ ಕಿರಿಯರವರೆಗೆ ಒಟ್ಟಾಗಿ ಜೀವನ ನಡೆಸುತ್ತಿದ್ದರು. ಅ ಕುಟುಂಬ ಬಹಳ ಚೆನ್ನಾಗಿರುತ್ತಿತ್ತು. ಅಲ್ಲಿ ಹಿರಿಯ ಮುಖಂಡನ ಮಾತಿಗೆ ಬೆಲೆಯಿತ್ತು. ಆಚಾರ-ವಿಚಾರ, ರೂಢಿ-ಸಂಪ್ರದಾಯ, ಸಂಸ್ಕೃತಿ ಹಾಗೂ ಜೀವನದ ಮೌಲ್ಯಗಳನ್ನು ರೂಢಿಸಿಕೊಂಡು ಕುಟುಂಬದ ಎಲ್ಲರೂ ಜೊತೆಯಾಗಿ ಸುಖ-ಸಂತೋಷಗಳಿಂದ ಬದುಕಿ ಬಾಳುತ್ತಿದ್ದರು.
ಆಗಿನ ಕಾಲದ ಮಕ್ಕಳು ಆಟವಾಡುತ್ತಾ, ಕೂಟಕೂಡುತ್ತಾ, ಬೀಳುತ್ತಾ-ಏಳುತ್ತಾ ಯಾವುದೇ ನೋವಾದರೂ ಲೆಕ್ಕಿಸದೆ, ಶಾಲೆಯಲ್ಲಿ ಶಿಕ್ಷರಿಂದ ಬೈಗುಳ, ಪೆಟ್ಟು ತಿನ್ನುತ್ತಾ ದೃಢಕಾಯರಾಗಿ, ದೃಢಮನಸ್ಸಿನವರಾಗಿ ಚಿಕ್ಕಂದಿನಿಂದಲೇ ಬೆಳೆಯುತ್ತಿದ್ದರು. ಏಕಾಂಗಿತನ ಅವರ ಬಾಳಲ್ಲಿ ಎಂದೂ ಬಂದಿಲ್ಲ. ಮನುಷ್ಯ ಭಾವನಾ ಜೀವಿ. ಅವನಿಗೆ ಒಬ್ಬಂಟಿಗನಾಗಿ ಬಾಳಲು ಬಹಳ ಕಷ್ಟ ಎಂಬುದು ಸತ್ಯ.
ಈ ಲೆಖನದ ಶೀಷರ್ಿಕೆ "ಏಕಾಂಗಿಯಾಗುತ್ತಿರುವ ಬಾಲ್ಯ ಜೀವನ" ಅಂದರೆ ಇಂದು ಆಧುನಿಕ ಲೋಕದಲ್ಲಿ ಮಕ್ಕಳು ಏಕಾಂಗಿಯಾಗುತ್ತಿರುವುದನ್ನು ನಾವು ಕಾಣಬಹುದು. ಮಾಧ್ಯಮ ಲೋಕ ಮತ್ತು ಸಾಮಾಜಿಕ ಜಾಲತಾಣಗಳ ಮಾಯೆಗೆ ಸಿಲುಕಿರುವುದರಿಂದ ಸ್ನೇಹಿತರೊಟ್ಟಿಗೆ ಹಾಗೂ ಸಮಾಜದ ಜನರೊಟ್ಟಿಗೆ ಬೆರೆಯಲು, ವಿಚಾರಗಳನ್ನು, ಭಾವನೆಗಳನ್ನು ಹಂಚಿಕೊಳ್ಳಲು ಸಮಯವಿಲ್ಲ. ಒಬ್ಬಳು ತಾಯಿ ಮಗುವಿಗೆ ಜನ್ಮ ಕೊಟ್ಟು ಕೆಲವೆ ದಿನಗಳಲ್ಲಿ "ಪ್ಲೇ ಹೋಂ" ಗಳಲ್ಲಿ ಬಿಟ್ಟುತಾಯಿ-ತಂದೆಗಳಿಬ್ಬರೂ ಕೆಲಸಕ್ಕೆ ಹೋಗುತ್ತಾರೆ. ಅವರ ಮುಖವನ್ನೂ ಮಗು ನೊಡುವುದು ಅಪೂರ್ವವಾಗಿದೆ. ತಾಯಿಯ ಎದೆಹಾಲು ಮಕ್ಕಳಿಗೆ ಅಮೃತ ಸಮಾನ. ಆದರೆ ಈಗಿನ ಒತ್ತಡದ ಜೀವನದಲ್ಲಿ ಅದೂ ದೊರಕದಾಗಿದೆ. ಇದು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 3 ವರ್ಷ ಆದ ಕೂಡಲೆ ಮಕ್ಕಳನ್ನು ಶಿಕ್ಷಣ ಪಡೆಯಲು ಕಳುಹಿಸುತ್ತಾರೆ. ಆ ಒತ್ತಡ ಮಕ್ಕಳ ಮೇಲೆ ಗಾಢ ಪರಿಣಾಮ ಬಿರುತ್ತದೆ. ಶಾಲೆಯಿಂದ ಮನೆಗೆ ಬಂದರೆ ಒಬ್ಬಂಟಿತನ ಕಾಡುತ್ತದೆ.
ಸಮ್ಮೋಹಿನಿ ತಜ್ಞರ ಪ್ರಕಾರ ಒಬ್ಬ ವ್ಯಕ್ತಿ ಒಬ್ಬಂಟಿಯಾಗಿ ಶೂನ್ಯ ವ್ಯವಸ್ತೆಯಲ್ಲಿದ್ದಾಗ ಅಥವಾ ಮೈಮರೆತು ಯೋಚನೆಯಲ್ಲಿ ಇರುವಾಗ ಅನೇಕ ತರಹದ ಮಾನಸಿಕ ಕಾಯಿಲೆಗಳು ಆವರಿಸಿಕೊಳ್ಳುತ್ತವಂತೆ ಹಾಗೆಯೇ ಒಬ್ಬಂಟಿಯಾಗಿದ್ದಾಗ ದುರ್ಬಲ, ಋಣಾತ್ಮಕ ಚಿಂತನೆಗಳು ಆಳವಾಗಿ ಆವರಿಸಿ ಮನೋಸ್ತೆರ್ಯವನ್ನು ಕುಗ್ಗಿಸಬಹುದು, ಮಾನಸಿಕ ದೌರ್ಬಲ್ಯತೆ ಉಂಟಾಗಬಹುದು. ಏಕಾಂಗಿತನ ಬದುಕನ್ನು ಕುಂಟಿತಗೊಳಿಸಬಹುದು, ಮಾತಿನ ಕೌಶಲ್ಯತೆಗೆ ತೊಂದರೆಯಾಗಬಹುದು. ಎಲ್ಲರೊಟ್ಟಿಗೆ   ಕೂಡಿ ಬಾಳುವುದರಲ್ಲಿ ಇರುವ ಸುಖ ಏಕಾಂಗಿತನದ ಬದುಕಿನಲ್ಲಿಲ್ಲ. ಈಗಿನ ಬಹುತೇಕ ಮಕ್ಕಳ ಜೀವನದಲ್ಲಿ ಏಕಾಂಗಿತನಕ್ಕೆ ಒಗ್ಗಿ ಮನೋಸ್ತೆರ್ಯ ಕುಗ್ಗಿ, ಆತ್ಮ ವಿಶ್ವಾಸದ ಕೊರತೆಯುಂಟಾಗಿ ಆತ್ಮಹತ್ಯೆ, ಮಾನಸಿಕ ಖಿನ್ನತೆ, ಜಿಗುಪ್ಸೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಹಾಗಾಗಿ ಎಲ್ಲರೊಟ್ಟಿಗೆ ಬೆರೆತು ಕುಣಿದು ಕುಪ್ಪಳಿಸಿ, ಆಡಿಬೆಳೆದು ಸಧೃಡರಾಗಿ ಬೆಳೆಯಲು ಅವಕಾಶ ಕಲ್ಪಿಸೋಣ
ಬೆಳ್ಳಿಯಪ್ಪ
ಪ್ರಥಮ ಎಂ.ಎ ಕನ್ನಡ ವಿಭಾಗ
ಲೈಫು ಇಷ್ಟೇನೆ!!
ಜೀವನ ಅಂದ್ರೇನೆ ಎಷ್ಟು ವಿಚಿತ್ರ ಅಲ್ವಾ!! ಜೀವನ; ಜೀವನ ಏನಿದು ಜೀವನ?? ಬರೀ ದುಃಖ!! ಬರೀ ಸುಖ!! ಸುಖ ದುಃಖಗಳ ಸಮ್ಮಿಲನ. ಬಹುಷಃ ಮೂರನೇ ವ್ಯಾಖ್ಯಾನ ಸರಿ ಅನಿಸುತ್ತೆ. ಮುಸ್ಸಂಜೆಯ ಈ ಹೊತ್ತಲ್ಲಿ ಜೀವನದ ಬಗ್ಗೆ ಬರಿತಿರೋ ನಾನು ಜೀವನದ ಬಗ್ಗೆ ತಿಳ್ಕೊಂಡಿರೋದಾದ್ರುನು ಎಷ್ಟು? ಬರೀ ಜೀವನದ ಯಾವುದೋ ಒಂದು ಮಜಲನ್ನು ಇದೇ ಜೀವನ ಅಂತ ತಿಳ್ಕೊಂಡಿರೋರು ಎಷ್ಟು ಜನನೋ! ಹಾಗೆ ಜೀವನದ ಬಾಗಿಲು ಮುಚ್ಚಿ ಹೋಗಿದೆ ಅಂತ ಸಾವಿನ ಮನೆಯ ಕದ ತಟ್ಟೋರು ಅದೆಷ್ಟು ಮಂದಿನೋ? ಏನೇ ಇರ್ಲಿ ಏಳು ಬೀಳಿನ ಹಾದಿಯಲ್ಲಿ ಏಳಿಗೆಯನ್ನೇ ಬಯಸೋ ಜನ ನಾವು; ಹಾಗೇ ಜನರೇಶನ್ ನಮ್ದು ಅಪ್ಪ ಅಮ್ಮನೇ ಕಿರಿ ಕಿರಿ ಅನ್ನೋ ಈ ಕಾಲದ ಮಕ್ಕಳಿಗೆ ಜೀವನ ಅಂದ್ರೆ ಏನು ಅಂತ ತಿಳಿಹೇಳುವಷ್ಟು ಟೈಮ್ ಇಲ್ದಿರೋ ಪೇರೆಂಟ್ಸ್! ಈ ನಾಲ್ಕು ದಿನಗಳ ನಮ್ಮ ಜೀವನದ ಆಟದಲ್ಲಿ ಎಷ್ಟೋ ಮಂದಿ ಬತರ್ಾರೆ; ಹೋಗ್ತಾರೆ; ಟಿ.ವಿ ಸೀರಿಯಲ್ ತರಾ! ಅಲ್ವಾ? ಇವೆಲ್ಲವುಗಳ ನಡುವೆ ಕಳೆದು ಹೋಗೋ ಈ ನಾಲ್ಕು ದಿನಗಳ ಲೈಫು......... ಲೈಫು ಇಷ್ಟೇನೆ!!!
ಸ್ವಾತಿ
ದ್ವಿತೀಯ ಎಂ.ಎ ಅರ್ಥಶಾಸ್ತ್ರ ವಿಭಾಗ
ಕಥಾ ಕಮ್ಮಟ 
ಇತ್ತೀಚೆಗೆ ಕಾರಂತ ಕಲಾಭವನದಲ್ಲಿ ನಡೆದ ಕಥಾ ಕಮ್ಮಟಕ್ಕೆ ಹೋಗಿದ್ದೆ. ಅಲ್ಲಿಂದಲೇ ನನ್ನ ಚಿಕ್ಕಮ್ಮನ ಮನೆಗೆ ತೆರಳಿದೆ. ಅದೇ ಸಮಯದಲ್ಲಿ ಅವರ ಊರಿನ ದೇವಸ್ಥಾನದ ಜೀಣರ್ೋದ್ಧಾರದ ಕೆಲಸ ನಡೆಯುತ್ತಿತ್ತು. ಅದನ್ನು ಕಾಣಲು ಎಂದು ನಾನು ಮತ್ತು ಚಿಕ್ಕಮ್ಮನ ಮಗಳು ಸ್ಮಿತಾ ಹೊರಟೆವು. ಹೀಗೆ ಹೋಗುತ್ತಿರುವಾಗ ದೇವಸ್ಥಾನದ ಕುರಿತಂತೆ ನನ್ನ ಕೆಲವು ಪ್ರಶ್ನೆಗಳನ್ನು ತೆರೆದಿಟ್ಟೆ. ಅವಳು ಅದಕ್ಕೆ ಉತ್ತರಿಸುತ್ತಲೇ ನಡೆದುಕೊಂಡು ಬರುತ್ತಿದ್ದಳು.ದಾರಿ ಬದಿಯ ಮನೆಯ ನಾಯಿಗಳು ಬೊಗಳಲು ಆರಂಭಿಸಿದವು. ಮನೆಯಲ್ಲಿದ್ದ ಮಹಿಳೆಯೊಬ್ಬರು ಹೊರಬಂದು 'ಹ್ಞಾಂ... ದೂರ ಹೊಂಟ್ರೀ... ಎಂದರು. ಕೂಡಲೇ, ದೇವಸ್ಥಾನಕ್ಕೆ ಎಂದು ಸ್ಮಿತಾ ಪ್ರತ್ಯುತ್ತರಿಸಿದಳು. ನನ್ನನ್ನು ಕಂಡ ಆ ಮಹಿಳೆಯ ಮುಖದಲ್ಲಿ, ಏನೋ ಗೊಂದಲ, ಏನೋ ಅನುಮಾನ, ಇದನ್ನು ಕಂಡ ನಾನು ಮುಂದೆ ನಡೆದು ಹೋಗುತ್ತಿದ್ದಂತೆ ಹಿಂತಿರುಗಿ ನೋಡಿದೆ. ಆ ಮಹಿಳೆ ಅಲ್ಲೇ ನಿಂತು ನನ್ನನ್ನು ನೋಡುತ್ತಿದ್ದರು. ಪರಿಸ್ಥಿತಿಯ ಅರಿವಾಗಿ ನಾನು ಅಲ್ಲೇ ನಿಂತು, ಇವಳು ನನ್ನ ಸ್ವಂತ ಚಿಕ್ಕಮ್ಮನ ಮಗಳು ಎಂದೆ. ಆ ಕ್ಷಣ ಅವರ ಮುಖದಲ್ಲಿ ಮೂಡಿದ ಸಮಾಧಾನಕರ ನಗುವನ್ನು ಕಂಡು ನನಗೂ ಸಮಾಧಾನವಾಯಿತು. ಹೀಗೆ ಮುಂದೆ ನಡೆದು ದೇವಾಸ್ಥಾನಕ್ಕೆ ತಲುಪಿದೆವು. ದೇವಸ್ಥಾನವನ್ನೆಲ್ಲಾ ವೀಕ್ಷಿಸಿ ಮನೆಗೆ ಹಿಂತಿರುಗಿದೆವು.
ದೀಪಕ್ ಎನ್ ದುರ್ಗ
ದ್ವಿತೀಯ ಎಂ.ಎ ಕನ್ನಡ ವಿಭಾಗ
ಕಣ್ಮರೆಯಾಗುತ್ತಿದ್ದ ಈಚಲು ಓಲೆಯ ಚಾಪೆಗಳು
ಸುಮಾರು ಹತ್ತು ಇಪ್ಪತ್ತು ವರ್ಷದ ಹಿಂದೆ ಇದ್ದ ಈಚಲು ಓಲೆಯ ಚಾಪೆಗಳು ಇಂದು ಎಲ್ಲಿ ಹೋದವು ಬಲ್ಲಿರಾ? ಕುಡುಬಿ ಜನಾಂಗದ ಹೆಂಗಸರು ಈಚಲು ಓಲೆಯ ಚಾಪೆ ಹೆಣೆಯುವುದರಲ್ಲಿ ನಿಪುಣರು. ಈಗ ಇದು ಇವರ ಕೈಯಿಂದ ಇಳಿದು ಹೋಗಿದೆ. ಕುಡುಬಿ ಮಹಿಳೆಯರು ಹೆಣೆವ ಚಾಪೆ ಅವರ ಬದುಕಿನ ಉಪ ಕಸುಬು. ಅವರದು ತಾಳಿಕೆ ಬಾಳಿಕೆಗೆ ಹೆಸರಾದ ಚಾಪೆ. ಅವರು ಎರಡು ಬಗೆಯ ಚಾಪೆಗಳನ್ನು ಹೆಣೆಯುತ್ತಾರೆ. ಒಂದು ಈಚಲ ಒಲಿಯಿಂದ ಇನ್ನೊಂದು ದೋರೆ ಹುಲ್ಲಿನಿಂದ ಹೆಣೆಯುವಂತದ್ದು. ದೂರದ ಕಾಡುಗಳಲ್ಲಿ ಅಲೆದು ಚಾಪೆಗೆ ಬೇಕಾದ ಮೂಲ ವಸ್ತುವನ್ನು ಸಂಗ್ರಹಿಸುತ್ತಾರೆ. ತಾವು ಹೆಣೆದ ಚಾಪೆಗಳನ್ನು ಮಹಿಳೆಯರೇ ಊರ ಸಂತೆಯಲ್ಲಿ ಅಗ್ಗದ ಬೆಲೆಗೆ ಮಾರಿ ಬರುತ್ತಾರೆ. ಚಾಪೆ ಹೆಣೆಯುವುದು ಅವರಿಗೆ ಬಿಡುವಿನ ವೇಳೆಯ ಕಸುಬು ಶ್ರಮಜೀವಿಗಳಾದ ಕುಡುಬಿ ಮಹಿಳೆಯರು ತೋಟ, ಗದ್ದೆಗಳಲ್ಲಿ ದಿನ ಬಹುಪಾಲು ದುಡಿಯುತ್ತಾರೆ. ಮನೆಯಲ್ಲಿ ಮನೆಕೆಲಸ ಮಾಡುತ್ತಾ ಉಳಿದ ಬಿಡುವಿನ ಕೊಂಚ ಕಾಲ ಚಾಪೆಯ 'ಪಟ್ಟಿ' ಹೆಣೆಯುವುದರಲ್ಲಿ ನಿರತರಾಗುತ್ತಾರೆ. ದೋರೆಹುಲ್ಲನ್ನು ಮಹಿಳೆಯರೇ ಮುಂಜಾನೆ ದೂರದ ಗುಡ್ಡಗಳಿಗೆ ತೆರಳಿ ಬುಡಸವರಿ ತರುತ್ತಾರೆ. ಈಚಲು ಮರದ ಒಲಿ(ಓಲೆ) ತರುವುದಕ್ಕೆ ಗಂಡಸರ ನೆರವು ಬೇಕು. ತಂದ ಓಲೆಯ ತುದಿ ಬುಡವನ್ನು ಒಪ್ಪವಾಗಿ ಕತ್ತರಿಸಿ ಹದವಾಗಿ ಬಿಸಿಲಿಗೆ ಒಣಗಿಸಿ ಸಿದ್ದಗೊಳಿಸಿದುದನ್ನು ಬಿಡುವಾದಾಗಲೆಲ್ಲ ಕುಳಿತು ಚಾಪೆ ಹೆಣೆಯುತ್ತಾರೆ. ಇದು ಅವರಿಗೆ ಹವ್ಯಾಸ ಮಾತ್ರ ಹಲವು ದಿನಗಳ ಪ್ರಯತ್ನದ ಫಲವಾಗಿ ಮೂಡಿ ಬಂದ ಚಾಪೆಗೆ ಸಿಗುವುದು ಏಳೆಂಟು ರೂಪಾಯಿ ಈಗ ಅಪರೂಪವಾಗಿ ಹಿಂದಿನ ತಲೆಮಾರಿನ ಮಹಿಳೆಯರು. ಚಾಪೆ ಹೆಣೆಯುತ್ತಾರೆ. ಈಗ ಅದರ ಬೆಲೆ ನೂರರಿಂದ ನೂರರ್ವತ್ತರವರೆಗೆ ಇದೆ. ಈಗ ಯಂತ್ರ ನಿಮರ್ಿತ ನುಣುಪಾದ ಪ್ಲಾಸ್ಟಿಕ್ ಚಾಪೆಗಳು ಮಾಕರ್ೆಟ್ಗೆ ಇಳಿದಿದ್ದು ಕುಡುಬಿಯರ ಚಾಪೆಯನ್ನು ಕೇಳುವವರೆ ಇಲ್ಲ. ಹೀಗಾಗಿ ಚಾಪೆ ನೇಯುವ ಕೈಗಳಿಗೆ ವಿರಾಮವಾಗಿದೆ. ಅಲ್ಲದೆ ಆಧುನಿಕ ಯುಗದಲ್ಲಿ ಕುಡುಬಿ ಜನರು ಹಿಂದಿನ ತಮ್ಮ ಕುಶಲ ಕಲೆಯನ್ನು ಉಳಿಸಿಕೊಂಡು ಬಂದದ್ದು ಕೆಲವರೇ ಆದ್ದರಿಂದ ಇದು ತೆರೆಮರೆಯಲ್ಲಿ ಕಣ್ಮರೆಯಾಗುತ್ತಿದೆ.
ಅಕ್ಷತಾ
ದ್ವಿತೀಯ ಎಂ.ಎ ಕನ್ನಡ ವಿಭಾಗ
ಕಣಂತೂರ್
ಅವನು ಬಾರದೆ ಹೋದರೆ ನನಗೇನೊ ಬೇಜಾರು. ಏನೋ ಕಳೆದುಕೊಂಡೆ ಎನ್ನುವ ಅನುಭವ. ಆದರೆ ಆ ಅನುಭವ ಒಂದು ದಿನಕ್ಕೆ ಮಾತ್ರ ಏಕೆಂದರೆ ಮರುದಿನ ಬಂದೇ ಬರುತ್ತಾನೆ. ಮೊಟ್ಟೆಯೊಳಗಿನ ಹಳದಿ ಬಣ್ಣದಂತಿರುವ ಆ ಕುಮಾರ ಅವನೆ ಕಣಂತೂರ್. ಅವನು ಹೋಗುವ ವೇಗ ಕಂಡು ಮೊದ ಮೊದಲು ದಂಗಾದರೂ, ಇಂದು ನನಗೆ ಪ್ರಯಾಣದ ವೇಳೆಯಲ್ಲಿ ಅದರ ಶಬ್ದವೇ ಜೋಗುಳ. ಹೌದು ನಾನು ಹೇಳುತ್ತಿರುವುದು 'ಕಣಂತೂರ್ ಎಕ್ಸ್ಪ್ರೆಸ್ಸ್' ಬಸ್ಸ್ನ ಬಗ್ಗೆ.ಆ ಬಸ್ಸ್ ಬರದೇ ಹೋದರೆ, ನೋಡದೇ ಹೋದರೆ, ಒಳಗೊಳಗೆ ನನಗೇನೋ ತಳಮಳ. ಅದೆಷ್ಟು ಸೊಗಸು ಅದರ ಚಲನೆ. ಕಾಡಿನರಾಜ ಸಿಂಹದಂತೆ ರೋಡ್ನಲ್ಲಿ ತಾನೇ ಸಿಂಹ ಎಂಬ ಸಿಂಹಘರ್ಜನೆಯನ್ನು ಮಾಡುತ್ತಾ ನುಗ್ಗುವ ಪರಿ ಅಮೋಘ. ಒಂದು ಸಣ್ಣ ಸಂದು ಸಿಕ್ಕಿದರೂ ಒಳನುಗ್ಗಿಕೊಂಡು ಬರುವ ಚಾಲಕನ ಚತುರತೆ, ಚುರುಕುತನ ಕಂಡು ಬೆರಗಾದೆ. ರೋಡ್ನಲ್ಲಿ ಬರುವಾಗ ಎದುರು ಸಿಂಹವೇ ಬಂತು ಎಂದು ವಾಹನಗಳು ಇಲಿಗಳಂತೆ ಬದಿಗೆ ಸರಿಯುವುದು. ಕಣ್ಣಲ್ಲಿ ನಗು, ಕೈಯಲ್ಲಿ ಸನ್ನೆ ಮಾಡಿಯೇ ಮುಂದೆ ಬರುವ ವಾಹನದ ಚಾಲಕರನ್ನು ಮಂತ್ರಮುಗ್ಧಗೊಳಿಸುತ್ತಾನೆ. ತನ್ನ ಹಿಡಿತದಲ್ಲಿ ಬಸ್ ಇದ್ದರೂ ಕೆಲವೊಂದು ಬಾರಿ ಕಣಂತೂರ್ ಆಸ್ಪತ್ರೆಗೂ ದಾಖಲಾದ ಸಂಗತಿ ಉಂಟು. ಏನೇ ಆದರೂ ನನ್ನ ಹಾಗೂ ಕಣಂತೂರ್ ಬಸ್ಸ್ನ ಒಡನಾಟ ಒಂದು ಸುಂದರವಾದ ಅನುಭವ. ಹಲವಾರು ಸ್ನೇಹ ಸಂಬಂಧದ ಬೆಸುಗೆ.'ಎಕ್ಸ್ಪ್ರೆಸ್ಸ್' ಎಂಬ ಪದಕ್ಕೆ ತಕ್ಕಂತೆ ಮಿಂಚಿನ ವೇಗದಲ್ಲಿ ಸಾಗುವ ಕಣಂತೂರ್ ಇತರ ವಾಹನಗಳ ಕಡೆಯೂ ನಿಗ ಇಟ್ಟು ಸುಗಮ ಪ್ರಯಾಣ ಮಾಡಲಿಯೆಂದು ನನ್ನ ಆಶಯ. ಇನ್ನು ನನ್ನ ಹಾಗೂ ಕಣಂತೂರ್ ಬಸ್ಸ್ನ ಸ್ನೇಹ ಒಡನಾಟ ಆರು ತಿಂಗಳು ಮಾತ್ರ. ಐ ಮಿಸ್ ಯು ಕಣಂತೂರ್.
ಯತೀಶ್
ದ್ವಿತೀಯ ಎಂ.ಎ
ವಂಚನೆ
ಹನಿ ಹನಿಯಾಗಿ ಸುರಿದೆ, ಜೇನ ಮಳೆಯಂತೆ
ಕನಸು ಕಂಗಳಿಗೆ ನಿನ್ನೊಲುಮೆಯ ಧಾರೆಯ
ಹರೆಯದ ಮುಗ್ಧ ಮನಸಿಗೇನು ಗೊತ್ತು
ನೀನೊಂದು ಹಜ್ಜೇನೆಂದು
ಅಲೆ ಅಲೆಯಾಗಿ ತೇಲಿ ಬಂದೆ 
ನನ್ನೊಳಗೆ ತಂಗಾಳಿಯಂತೆ 
ಬಾಳೆಂಬ ಬೆಳದಿಂಗಳಲಿ
ಬೆಳಕ ಚೆಲ್ಲಿ ಮರೆಯಾದೆ
ಕೋಲ್ಮಿಂಚಿನಂತೆ
ಮುತ್ತಿನ ಸುರಿಮಳೆ
ನಿನ್ನೊಲುಮೆಯಾ... ಸವಿಕನಸಿಗೆ
ಅರಳಿದೆ ಆಸೆಯ ಹೊಂಗನಸು
ತಡಕಾಡುತಿದೆ ಕೈ ಜಾರಿದ... ಪ್ರೀತಿಗಾಗಿ 
ಜಯಶ್ರೀ ದಿನೇಶ್
ಆರೋಗ್ಯ ಕೇಂದ್ರ ಮಂಗಳೂರು ವಿ.ವಿ

ನಿರುತ್ತರೆ
ಬೆಳೆದಳಿವಳು....ಮಮತೆಯಿರದ ತವರಲ್ಲಿ...
ಕರುಣೆಯಿರದ ಒಡಲಲ್ಲಿ...ಸ್ನೇಹವಿರದ ಸಂಗಡದಲಿ...
ಆಂತರಿಕ ವೇದನೆಯ ನಗುಮೊಗದಿ ಬಚ್ಚಿಟ್ಟು...
ಸಹನಮೂತರ್ಿಯ ರೀತಿ ಮ್ಯೆತಳೆದು ನಿಂತವಳು..
ಬಾಲ್ಯದಲೇ ಬಯಕೆಗಳ ಬದಿಗೊತ್ತಿ ಈಕೆ..
ನೀರವ ವೇದನೆಯ ನಸುನಗುತ ಮರೆತು..
ಜರೆಮಾತುಗಳನು ಸಹಿಸುತಲೇ ಇದ್ದು....
ಮೂಕಯಾತನೆಯ ಅನುಭವಿಸಿದವಳಿವಳು...
ಧಾರೆಯೆರೆದರು ಈಕೆ ಭಾರವೆಂಬಂತೆ..
ಕೋರಳಾಣಿಸಿ ನಿಂತಳು ಮಂಗಳ ಸೂತ್ರಕೆ 
ಅಶ್ರು ಉರುಳಿತು ನೇತ್ರದಿ ತವರಿನ ಅಗಲುವಿಕೆಗೆ 
ಪರಿಕಲ್ಪನೆ ಇತ್ತೇ ತವರಿನಾ ಮನೆಯವರಿಗೆ?!

ಪತಿಸೇವೆಗೆಂದೇ ಅಣಿಯಾದವಳಿವಳು
ಸಿಗಬಹುದೇನೋ ಪ್ರೀತಿಯೆಳೆಯೊಂದು 
ಎಂಬಾಸೆ ಮನದೊಳಗೆ ಚಿಗುರೊಡೆದು ಬೆಳೆದಿರಲು 
ವಂಚಿಸಿತು ವಿಧಿ ಸರ್ವವಿಧದಿಂದಲೂ 
ನಿಸ್ವಾರ್ಥ ಪ್ರೀತಿಯ ಬಯಸಿ ಬಂದಾಕೆಯನು 
ನೀರಸ ನಿರಾಶೆಯು ಮೆಲ್ಲನೆ ಸ್ವಾಗತಿಸಿತು...
ಮುರುಟಿಹೋದ ನಿರೀಕ್ಷೆಯು ಘಾಸಿಗೊಳಿಸಿತು ಮನವನು 
ತಡೆದು ನಿಂತಳು ಈಕೆ ತನ್ನೆಲ್ಲಾ ದುಖವನು...
ಯಾಂತ್ರಿಕತೆಯಾಯಿತು  ಜೀವನ ಕಾಲಸವೆಯುತ್ತಿದ್ದಂತೆ 
ಇಂದಿಗೊ ಕಣ್ಣೀರಿನ ಹೊಳೆ ಆ ಸುಪ್ತ ಮನದೊಳಗೆ
ಅರಿತವರಿರುವರೆ ಈಕೆಯ ಸಹನೆಯನು 
ಸಾದ್ಯವಾಗದು ಎಂದಿಗೂ ಈಕೆಯನು ಅಳೆಯಲು
ಅಂಬರಮಣಿ ಈಕೆ ಎಲ್ಲಾ ರೀತಿಯಲಿ 
ಸ್ಪಂದಿಸುವ ಹ್ರದಯವಿರದ 'ಏಕಾಂಗಿ'ಮೌನಿಯು
ವೈದೇಹಿಯಂತೆ ಮಹಾವನಿತೆಯಲ್ಲದಿದ್ದರೂ 
ಅಂಶುವಿನಂತೆ ಮನೆಬೆಳಗಿದಳು 
ಎಂದೂ ಮನಬಿಚ್ಚಿ ಸಂಕಟವ ತೋರದವಳಿವಳು 
ನುಚ್ಚು ನೂರಾದ ಕನಸ ಒಂದುಗೂಡಿಸಲು ಯತ್ನಿಸುವಳು 
ಆತ್ಮಸಂಯಮದ ಪ್ರತಿರೂಪ ಎಂಬಂತೆ 
ನಿರುತ್ತರೆ ಈಕೆ...... ಇಂದಿಗೂ..... ಇನ್ನೆಂದಿಗೂ ......
ಶ್ರೀಲತಾ ಎಂ.ಕೆ
ಪ್ರಥಮ ಎಂ. ಎ ಇಂಗ್ಲಿಷ್ ವಿಭಾಗ

ನಮ್ಮೆದೆಯ ಕವಿತೆಗಳು
ಚಾತಕರಾಗುತ್ತಿದ್ದೀರಾ ನೀವು?
ಈ ಬೆಳಕು ಸೋರಿ ಹೋಗುತ್ತಿರುವ ದಿಗಂತದಂಚಲ್ಲಿ 
ಈ ಅಂಚಲ್ಲಿ ಕುಳಿತು-
ಆ ಕಡೆಯಿಂದಲೋ ಹುಟ್ಟಿಬಂದಾನೆನ್ನುವ ಚಂದ್ರನ 
ಕಾಯುತ್ತಿದ್ದೀರಾ ನೀವು?
ಈ ಕೆಂಪು ಹನಿಗಳ ಕುಡಿದು 
ನಾಳಿನ ಹೃತ್ಕುಕ್ಷಿಗಳಿಗೆ ನೆತ್ತರು ಚುಂಬಿಸುತ್ತ
ಬದುಕ ಮಿಡಿಸುತ್ತಿದ್ದೀರೇನು?
ನಾವೆಲ್ಲಾ ಕೇಳಲಾಗದ ಪುಟ್ಟಸ್ವರಗಳೊಡೆಯರೆ
ನೀವು ಕೂಡ ನಮ್ಮ ಹಾಗೆ 
ಈ ಕಪ್ಪು ರೆಂಬೆಗಳ ತುಂಬ ಚೈತ್ರ ತುಂಬಲಾರದವರು
ದಿನದಂತೆ ಕಂತುವ ಈ ದಿನಗಳ 
ಲಗಾಮು ಹಿಡಿದು ನಿಲ್ಲಿಸಲಾಗದವರು.
ಬದಲಾಗದಂತೆ ಕಾಣುವ ಆದರೂ 
ದಿನಾ ಬದಲಾಗುವ ಸ್ಥಿತಿಯ ಯಾಂತ್ರಿಕತೆಯಲ್ಲಿ 
ಹಳತರಿಂದ ಕಳಚಲಾಗದೆ
ಹೊಸತನವ ತಡೆಯಲಾಗದೆ
ಹೀಗೆ ಕಾಲದ ಗೋಡೆಯ ಮೇಲೆ
ಕಪ್ಪಾಗಿ ನಿಲ್ಲುವ ಚಿತ್ರಗಳು ನೀವು-
ನಮ್ಮೆಲ್ಲರ ಎದೆಯ ಕಪ್ಪು ಕವಿತೆಗಳು.
ಪದ್ಮಿನಿ
ಸಿಬ್ಬಂದಿವರ್ಗ ಮಂಗಳೂರು ವಿ.ವಿ
ಮಾತೆ
ಓ ಮಾತೆ.......
ಇದೇಕೆ ನೀ ಹೀಗಾದೆ.....
ಇದ್ದೆನು ನಾನಂದು ಜೋತಾಡುವ ಕಬ್ಬಿಣದ ತೊಟ್ಟಿಲಲ್ಲಿ
ಕಿಲ ಕಿಲ ನಗುವ ನನ್ನ ನಗುವ ಮೋರೆಯನ್ನು ಕಂಡು 
ಬಳಿ ಬಂದುನಿಂತೆದ್ದರು ಅದೆಷ್ಟೋ ಮಂದಿ
ಕೆನ್ನೆ ಕೈಗಳ ತಟ್ಟಿ ಬಾರದ ನಗು ಬರಿಸಿ
ದೂರ ಸರಿದಿದ್ದರು ಅದೆಷ್ಟೋ ಮಂದಿ
ನನ್ನ ಮನಸ್ಸಿನ ಭಾವನೆಗಳನ್ನು ಅರಿಯದ ಜನ
ನನಗೆ ನಗುವನ್ನು ಬರಿಸಿ ಹೇಗೆ ದೂರ ಸರಿದರು.
ಸ್ವಚ್ಛಂದ ಮನದಿ ಹರುಷವ ಉಕ್ಕಿಸುವ
ನನ್ನ ಸನಿಹದಿ ಕುಳಿತಿದ್ದಳು ಆ ಮಾತೆ.
ಕೇಳಿದ್ದಳು, ಸಹಿಸಿದ್ದಳು ಎಷ್ಟೋ ಹೀನ ನುಡಿಗಳನ್ನು
ಅಂತಿದ್ದ ತಾಯಿ ಇದೇಕೆ ಹೀಗಾದಳು.
ಹೋದಲ್ಲಿ ಬಂದಲ್ಲಿ ತಪ್ಪು ಹುಡುಕುತ್ತಾ 
ಯಾರು ಮಾಡದ ಅಪರಾಧ ಮಾಡಿದೆ ಎಂಬಂತೆ....
ತಲೆಯೆತ್ತಿ ನಡೆದರೆ ತಲೆಬಾಗಿ ನಡೆವಂತೆ
ಪಿಸು ಮಾತನಾಡಿದರೆ ಮೌನಿಯಾಗಿರುವಂತೆ
ಯಾವ ಗೆಳತಿಯನ್ನು ಸೇರಲು ಬಿಡದೆ 
ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಬಿಡದೆ 
ಇದೆಲ್ಲವೂ ಏಕೆ? ನಾನು ಹೆಣ್ಣೆಂಬ ಕಾರಣಕ್ಕೋ?
ಮತಿಹೀನ ಜನರ ನಿಂದೆಯ ನುಡಿಗೋ?
ಪ್ರಕೃತಿಯ ವರವೋ? ಕಾಲವೋ?
ಹೆಣ್ಣಿನ ಬಾಳಿನ ಶಾಪವೋ!.
ಪ್ರವೀಣಾ ಪ್ರಜಾರಿ
ಪ್ರಥಮ ಎಂ ಎ ಕನ್ನಡ ವಿಭಾಗ
ಮುಂಜಾನೆಯಿಂದ ಮುಸ್ಸಂಜೆ
ಮುಂಜಾನೆ ಬೆಳಕು ಮೂಡಿದಾಗ
ತಂಗಾಳಿ ತಣ್ಣನೆ ಬೀಸಿದಾಗ
ಮೇಘವು ಮೆಲ್ಲನೆ ಮಳೆಯಾದಾಗ
ಚಿಗುರೆಲೆಯಲ್ಲಿ ಇಬ್ಬನಿ ನಗುವಾಗ
ಹಕ್ಕಿಗಳ ಚಿಲಿಪಿಲಿಯ ಸ್ವರ ಕೇಳಿದಾಗ
ಏಕಾಂಗಿಯಾಗಿ ನಾ ನಿಂತಿರುವಾಗ 
ನಿನ್ನ ಪ್ರೀತಿಯ ನೆನಪಾದಾಗ 
ನಿನ್ನ ನೋಡಲು ನನ್ನ ಹೃದಯ ಹಂಬಲಿಸಿದಾಗ
ಅದೇಕೋ ಕಾಣೆ ಕಣ್ಣೀರು ತುಂಬಿತು...
ಮನಸಿನ ನೋವಿನ ಮುಗಿಲು
ಕರಗಿ ಕಣ್ಣೀರಾಯಿತು...
ಮುಖದಲ್ಲೊಂದು ಹೂ ನಗು ಮೂಡಿತು...
ನನ್ನ ಕಣ್ಣಿನಿಂದ ನಿನ್ನ ರೂಪ ಮರೆಯಾದಾಗ 
ಮನದ ಮುಗಿಲು 
ಮತ್ತೊಮ್ಮೆ ಕವಿಯಿತು...
ಆ ಮುಂಜಾನೆಯು ನೋವಿನಲ್ಲಿಯೇ 
ಮುಸ್ಸಂಜೆಯತ್ತ ಸರಿಯಿತು.
ದೀಪಿಕಾ. ಎನ್. ಸಿ
ದ್ವಿತೀಯ ಎಂ ಎ ವಾಣ್ಯಿಜ್ಯ ವಿಭಾಗ

ಜವ್ವನಿಗೆದ ಗೊಬ್ಬು
ಮೂಡಯಿಡ್ ಪುಟ್ಯೆ ಆಯೆ 
ದೇವೆರೆಗ್ ಸೊಲ್ಮೆಲು ಸಂದಾವೊಂದು
ಆಯೆನ ಜವ್ವನಿಗೆದ ಗೊಬ್ಬುನು ಪತ್ತೊಂದು
ಪೂಲೆನ್ ಮೋಕೆಡ್ ಅರಲ್ಪಾಯೆ
ಚಿಲಿಪಿಲಿ ಪುಟ್ಟಯರೆ ಪಕ್ಕಿಲೆನ್ ಲಕ್ಕಯೆ
ಆಯೆನ ಪೊಲರ್ುಗು ಭೂಮಿಲಾ ನಾಚೊಂಡು
ಆಯೆನ ನೊಟ್ಟಿಗೆ ಬತ್ತಿನ ತಂಪು ಗಾಳಿಲು 
ಆ ತಂಪುಗ್ ಮರ ತರೆಯಾಡಂಡ್
ಐನ್ ತೂವೊಂದು ಎನ್ನಲ್ಲ ತರೆಯಾಡ್ಂಡ್
ಪಡ್ಡಯಿಡ್ ಕಂತಿನಾಯೆ
ಆಯೆ ಪೊಯೆಂದ್ ಗೂಡು ಸೆರೊಂಡ ಮಾತಲ
ಆಯೆ ಪಿರ ಬಪರ್ಿನ ಸಾದಿನ್ ತೂವೊಂದು ಉಲ್ಲೆ!
      ಅಂಕಿತಾ ನಾಯ್ಕ್
ದ್ವಿತೀಯ ಎಂ ಎ ಕನ್ನಡ ವಿಭಾಗ

ಗೆಳತಿ
ನನಗಿಂತ ಒಳ್ಳೆಯ ಸ್ನೇಹಿತೆ
ನಿನಗೆ ಸಿಕ್ಕಿದರೆ
ಧೈರ್ಯವಾಗಿ ಸಾಗುಮುಂದೆ
ತಡೆಯಲಾರೆ ನಿನ್ನನ್ನು
ದ್ವೇಷಿಸಲಾರೆ ಎಂದಿಗೂ
ಆದರೆ
ಒಂದು ಮಾತ್ರ ನೆನಪಿರಲಿ
ಅವಳು ನಿನ್ನನ್ನು ಅಥರ್ೈಸಿಕೊಳ್ಳುವಲ್ಲಿ ಸೋತರೆ
ನಿನ್ನ ಸ್ನೇಹವನ್ನು ತಿರಸ್ಕರಿಸಿದರೆ
ನನ್ನ ಪ್ರೀತಿಯ ಗೆಳತಿ ದುಃಖಿಸದಿರು
ನಿನ್ನ ಕಣ್ಣುಗಳನ್ನು ಕಂಬನಿ ಒದ್ದೆ ಮಾಡದಿರಲಿ
ಒಂದು ನಿಮಿಷ ಹಿಂತಿರುಗಿ ನೋಡು
ಅಂದು ಕಾಣುವೆ ನಿನಗೆ ನಾನು
ಮುಗುಳುನಗೆಯೊಂದಿಗೆ ಅಲ್ಲಿ....
ದೂರದಲ್ಲಿ ಕಂಡ ಬೆಳಕನ್ನು
ಅರಸಿ ನೀನು ಹೋದಾಗ
ಇಲ್ಲಿ ಈ ಇರುಳಲ್ಲಿ
ನಾನು ಒಂಟಿಯಾಗಿ ಹೋದೆ
ಆದರೂ ದುಃಖವಿಲ್ಲ ನನಗೆ
ಆ ಬೆಳಕು ನಿನಗೆ ಸಿಗುವುದಾದರೆ.....
ಚೇತನಾ ಎಚ್ ಆರ್
ಪ್ರಥಮ ಎಂ ಎ ಕನ್ನಡ ವಿಭಾಗ
ಗೆಳೆಯನಿಗೆ
ಕೆಟ್ಟವಳು ನಾನಲ್ಲ ಗೆಳೆಯಾ....
ಅದಾವ ದೃಷ್ಠಿಯಲ್ಲಿ ನನ್ನ ಕೆಟ್ಟವಳೆಂದು ಬಗೆದೆ ನೀ?
ಮಾತಾಡಿಲ್ಲವೆ? ನಾ ಮುನಿದೆನೆ?
ಕೆಟ್ಟತನದ ಅರ್ಥ ಅರಿಯದವಳಲ್ಲ ನಾನು
ಆದರೆ ನನ್ನ ಕೆಟ್ಟತನಕ್ಕೆ ನಿನ್ನ ನಾ ಯಾವತ್ತೂ ಒಳಪಡಿಸಿಲ್ಲ
ನಿನ್ನ ಕನಸುಗಳೆಲ್ಲಾ ನನಸಾಗಲಿ ಎಂದು ದೇವರಲ್ಲಿ ಪ್ರಾಥರ್ಿಸಿದೆ
ನಿನ್ನ ನಾನು, ನನಗರಿಯದೆ ನೋಯಿಸಿರಬಹುದು
ಆದರೆ ಗೆಳೆಯಾ.....
ಅಲ್ಲಿ ನನ್ನದು ಯಾವುದೇ ಸ್ವಾರ್ಥ, ವಂಚನೆ, ಕೆಟ್ಟತನ ಇರಲಿಲ್ಲಾ
ಗೆಳೆಯ ಒಂದು ಕಾಲದಲ್ಲಿ...
ನನ್ನ ನೋವು ದುಃಖ ದುಮ್ಮಾನಗಳಿಗೆ ನೀ ಕಿವಿಯಾಗಿದ್ದೆ
ನಿನ್ನ ಕಷ್ಟ ನಷ್ಟಗಳಿಗೆ ನಾ ಭಾಗಿಯಾಗಿದ್ದೆ
ನಿನ್ನ ಪ್ರತಿಯೊಂದು ಜಯದಲ್ಲಿ ನಾ ಹೃದಯದಿಂದ ನಕ್ಕಿದ್ದೆ
ನಿನ್ನ ಸುಖ ಸಂತೋಷಗಳಲ್ಲಿ ನನ್ನ ನಾ ಮರೆತಿದ್ದೆ
ನಮ್ಮೊಳಗೆ ಯಾವುದೇ ಮುಚ್ಚು ಮರೆಯಿರಲಿಲ್ಲಾ, ಅದ ನೀ ಅರಿತಿದ್ದೆ
ಆದರೂ..... ಆದರೂ... ನಾನು ಕೆಟ್ಟವಳು ಎನಿಸಿಕೊಂಡೆ
ನನ್ನ ನೆನೆದಾಗ ನಿನಗೇನೋ ಅನಿಸಬಹುದು
ಆದರೂ ಈ ಕೆಟ್ಟವಳು ನಿನ್ನ ನಗು ಮೊಗವನ್ನು
ಹುಸಿ ಮುನಿಸನ್ನು, ಕೀಟಲೆಗಳನ್ನು ತುಂಟಾಟವನು
ನೆನೆ-ನೆನೆದು....
ನೀನು ಈ ನನ್ನ ಪರಿಶುದ್ಧ ಸ್ನೇಹವನ್ನು ಅರಸಿ ಮತ್ತೆ ಬರುವುದಿಲ್ಲವೆಂದು
ತಿಳಿದೂ  ತಿಳಿದೂ... ನಾನು ಕಾದಿರುವೆ...
ಕೊನೆಯದಾಗಿ ನಿನ್ನ ಪರಿಶುದ್ಧ ಮನಸ್ಸಿನಿಂದ
ಈ ಕೆಟ್ಟವಳನ್ನು ಕ್ಷಮಿಸಿಬಿಡು ಓ ಗೆಳೆಯಾ....

-     ಅರ್ಚನಾ ಎಸ್. ಶೆಟ್ಟಿ
ಪ್ರಥಮ ಎಂ.ಎ. ಕನ್ನಡ ವಿಭಾಗ
ನನ್ನ ಪ್ರೀತಿಯ ಅಣ್ಣ

ನನ್ನ ಪ್ರೀತಿಯ ಅಣ್ಣ
ನೋಡಲು ಚೆಲುವಗಾರನಾತ
ಗುಳಿಕೆನ್ನೆಯ ಸುಂದರನಾತ
ಕೇಳುವರು ಎಲ್ಲರು ಯಾರು ಆತನೆಂದು
ಹೇಳುವೆನು ನಾನು, ನನ್ನ ಪ್ರೀತಿಯ ಅಣ್ನನಾತ

ಪ್ರೀತಿ ತುಂಬಿದ ಹೃದಯ ಅವನದು
ಗುಬ್ಬಿಯಂತೆ ಪ್ರೀತಿಸುವ ತಂಗಿಯನು
ಹೂವು ತುಂಬಿದ ಮರವಾಗಿ
ಯಾವಗಲೂ ತಂಗಿಗೆ ನೇರಳಾಗಿರುವಾತ

ದೈರ್ಯವಂತನಾತ....
ದೇಶ ಕಾಯುವ ಧೀರ ವೀರನಾತ
ದಿನವೂ ಕಾಯುವೆ ಈಗ ಬರುವನೆಂದು
ಆದರೂ ಮನದಲ್ಲಿ ಸಂತೋಷವಿದೆ
ದೇಶವನ್ನು ಕಾಯುವ ಸೈನಿಕನೆಂದು

ಪರಿಚಯ
ಪ್ರಥಮ ಎಂ.ಲಿಬ್
ಲೈಬ್ರರಿ ಸೈನ್ಸ್
ಹಗುರ - ಭಾರ
ಕೆಲವೊಮ್ಮೆ ಹಗುರ ವಿಚಾರಗಳೂ
ಅನಿಸುತ್ತವೆ ಬಲು ಭಾರ
ಪರ್ವತವನ್ನೇರಿ ಕುಳಿತವನು
ಸೂಜಿಯ ಮೇಲೆ ಕೂರಲಾರ

ಪ್ರಾಣಿಪ್ರಿಯ !
ಪ್ರಾಣಿಗಳು ಅವನ
ಪ್ರೀತಿಗೆ ಪಾತ್ರ
ಆದರೆ ಅವುಗಳು
ಸತ್ತು ಹೋಗಿದ್ದರೆ ಮಾತ್ರ...!
  ರಾತ್ರಿಯ ನಲ್ಲೆ
ರಾತ್ರಿ ಹಾಡು ಹಾಡುತ್ತಾ,
ಕೆನ್ನೆಗೆ ಮುತ್ತಿಕ್ಕುವ ನಲ್ಲೆ...
ಅಪಾರ್ಥ ಮಾಡ್ಕೋಬೇಡಿ ಸ್ವಾಮಿ
ಅದು ಹೆಣ್ಣು ಸೊಳ್ಳೆ....!!!

                                         ವಿಶ್ವನಾಥ್. ಎನ್.
                                         ಪ್ರಥಮ ಎಂ. ಎ. ಕನ್ನಡ

ಪ್ರತಿಭೆಯ ಮಾತು
ಆಹಾಹಾ.... ಆಹಾಹಾ...
ಆಹಾಹಾ ಹಾಹಾ....ಆ
ಆಹಾ ಗಹಾ...ಹಾ....ಆಹಾಹಾ ಹಾಹಾ
ಏನಾಗಲಿ ಪ್ರತಿಬೆ ತೋರು ನೀ
ಗೌರವಿಸುವ ಮಂಗಳಗಂಗೋತ್ರಿಯಲಿ
ಹೊ ಹೊ ಹೋ....
ಕಲೆಯನ್ನು ಕೊಲ್ಲಬೇಡ ನಿನ್ನಲ್ಲಿ
ಆಹಾಹಾ...ಆಹಾಹಾ...
ಅಡಗಿರೋ ಕಲೆಯನು
ಹೊರಗೊಡು ನೀ ಇನ್ನೂ
ಇಂತ ಸಮಯವೇ... ಸ್ಥೈರ್ಯವೇ...
ಅಂಜುವಾ ಮನಸಲಿ....
ತುಂಬುವಂತೆ ಮನಕೆ, ಮಾಡಿತಲ್ವಾ
ನಮಗೆ ಈ ವಿ.ವಿ ಯ
ಮಂಗಳಾ ವಿ.ವಿ ಯು
ಸಂತೋಷಾ ಕೊಡುತಿರೋ
ಕಲೆಗೆಂದೂ ಬೆಲೆಯಿದೆ....
ಸಾಧಿಸಿ ತೋರುವ ಸ್ಪೂತರ್ಿಯೂ ನಮಗಿದೆ
ಪ್ರೀತಿಯಾ ಹಂಚುತಾ....
ಜೀವನಾ ಮಾರ್ಗಕೋ....
ಕರೆದೊಯ್ಯುವಾ ವಿಧ್ಯೆಯೇ ಒಳಗಿದೆ
ಹರಸುವಾ ಗುರುಗಳು....
ಬೆಳೆಸುವಾ ಕಲೆಗಳು
ತೋರುತಿಹವು ಇಂದು
ಮಾನವೀಯ ಮೌಲ್ಯವು ನಮ್ಮಲ್ಲಿ
ಪ್ರತಿಕ್ಷಣ... ಬಯಸುವಾ....
ಸುಖವನೂ ನಿಡುತಿರೋ....
ಈ ಪ್ರದರ್ಶನಕೇ ಸಾಕ್ಷಿಯು ಎಂದೂ
ಈ ಸಭಾಂಗಣಾ.....
ಮಂಗಳಾ ಸಭಾಂಗಣ
ಏನಾಗಲಿ ಪ್ರತಿಭೆ ಆತ್ಮ ವಿಶ್ವಾಸದಲಿ....ಹೋ
ಕಲೆಗೆಂದೂ ಕೊನೆ ಇಲ್ಲಾ ಬಾಳಲಿ ಆಹಾಹಾ....

ಆನಂದ ಆರ್. ಬಿ.
ಯೋಗ ವಿಜ್ಞಾನ ವಿಭಾಗ.
ಸಾಟಿ
ಮಾತೃವಾತ್ಸಲ್ಯಕ್ಕೆ
ಬೇರೆ ಇಲ್ಲ ಸಾಟಿ
ಖರೀದಿಸಲು ಸಾಧ್ಯವಿಲ್ಲ
ಕೊಟ್ಟರು ಕೋಟಿ-ಕೋಟಿ
ಸವಿತಾ
ಪ್ರಥಮ ಎಂ,ಎಸ್ಸಿ.ಯೋಗ ವಿಜ್ಞಾನ


ಕೊರತೆ
ತಾಯಿ ಇಲ್ಲದ ಬದುಕು ನಿಷ್ಪ್ರಯೋಜಕ
ಅದರಲ್ಲಿ ತಾಯಿಯ ಪ್ರೀತಿಯ ಕೊರತೆ
ತಂದೆ ಇಲ್ಲದ ಬದುಕು ಅರ್ಥಹೀನ
ಅಲ್ಲಿ ಜಾಗ್ರತೆ ಮಾಡುವ ಮನಸ್ಸಿನ ಕೊರತೆ
ಅಣ್ಣನಿಲ್ಲದ ಬದುಕು ನಿರರ್ಥಕ
ಅಲ್ಲಿ ಬಾಂಧವ್ಯದ ಕೊರತೆ
ಸ್ನೇಹಿತರಿಲ್ಲದ ಬದುಕು ನಶ್ವರ
ಅಲ್ಲಿ ನೆನಪುಗಳ ಕೊರತೆ
ಬಂಧುಗಳಿಲ್ಲದ ಬದುಕು ಅರ್ಥಹೀನ
ಅಲ್ಲಿ ಬಾಂಧವ್ಯದ ಕೊರತೆ.

ಶ್ರೀಲತಾ ಬಿ,ಸ್
ದ್ವಿತೀಯ ಎಂ,ಎ ಕನ್ನಡ
ಸಂಪಾದಕೀಯ
ನಾಡಗೀತೆಗೆ ಕತ್ತರಿ ಪ್ರಯೋಗದ ಸಿದ್ಧತೆ
ನಮ್ಮ ನಾಡಗೀತೆ ಅತೀ ಉದ್ದವಾದ ಸಾಲುಗಳನ್ನು ಹೊಂದಿದೆ. ಅದನ್ನು ಹಾಡಲು ತುಂಬ ಸಮಯ ಬೇಕು. ಮೂರರಿಂದ ಮೂರುವರೆ ನಿಮಿಷಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಅದರಿಂದ ಸಮಯ ಪೋಲಾಗುತ್ತದೆ. ನಮ್ಮ ರಾಷ್ಟ್ರಗೀತೆಯನ್ನು ಹಾಡುವುದಕ್ಕೆ ನಾವು ತೆಗೆದುಕೊಳ್ಳುವ ಸಮಯ ಐವತ್ತೆರಡು ಸೆಕೆಂಡುಗಳು ಮಾತ್ರ ಹೀಗಿರುವಾಗ ಈ ನಾಡಗೀತೆಯನ್ನು ಹಾಡಲು ಅದೇಕೆ ಅಷ್ಟು ಸಮಯವನ್ನು ವ್ಯರ್ಥಮಾಡುವುದು. ಇದರ ಬದಲು ಇನ್ಯಾವುದೋ ಒಳ್ಳೆಯ ಕೆಲಸಕ್ಕೆ ಈ ಸಮಯವನ್ನು ಉಪಯೋಗಿಸಬಹುದು ಎನ್ನುವ ಪೊಳ್ಳುವಾದವೊಂದು ಇತ್ತೀಚೆಗೆ ಹುಟ್ಟಿಕೊಂಡಿದೆ. ಇದು ಭಾರಿ ಚಚರ್ೆಗೆ ಎಡೆಮಾಡಿಕೊಟ್ಟಿದೆ.
    ಇಲ್ಲಿ ನಾಡಗೀತೆಯನ್ನು ಹಾಡಲು ತೆಗೆದುಕೊಳ್ಳುವ ಸಮಯದ ಕುರಿತು ಅಪಸ್ವರ ಎತ್ತಿ ನಾಡಗೀತೆಯ ಸ್ವರೂಪವನ್ನು ಬದಲಾಯಿಸುವ ನಿಟ್ಟಿನಲ್ಲಿ ಕತ್ತರಿ ಪ್ರಯೋಗವಾಗಬೇಕು ಎಂದು ಕೆಲವು ಜನರು ಹೇಳತೊಡಗಿದ್ದಾರೆ. ಅದಕ್ಕಾಗಿ ಅದರ ಕೆಲವು ಸಾಲುಗಳನ್ನು ತೆಗೆದುಹಾಕಬೇಕು. ಅವು ನಾಡಗೀತೆಗೆ ಅಗತ್ಯವಿಲ್ಲದ ಭಾಗಗಳಾಗಿವೆ ಎಂಬ ತಮ್ಮ ವಾದವನ್ನು ಮುಂದಿಡುತ್ತಿದ್ದಾರೆ. ಕನ್ನಡ ನೆಲದ ಭಾಷೆ ಸಂಸ್ಕೃತಿ ನಾಡು ಮತ್ತು ನುಡಿಯ ಇಡೀ ಕಲ್ಪನೆಯನ್ನು ಕಣ್ಣಮುಂದೆ ಬಿಂಬಿಸುವಂತೆ ಇರುವ ನಮ್ಮ ನಾಡಗೀತೆ ಅವರಿಗೆ ಸಮಯ ಹಾಳುಮಾಡುತ್ತಿರುವ ಒಂದು ಸಂಗತಿಯಾಗಿ ಗೋಚರಿಸಿದೆ. ಇಂದು ನಾವು ನಾಡಗೀತೆಯನ್ನು ಹಾಡುವುದು ಹೆಚ್ಚಾಗಿ ಕಾಣುವುದು ಕೆಲವು ಕನ್ನಡಪರ ಕಾರ್ಯಕ್ರಮಗಳಲ್ಲಿ ಮತ್ತು ಸಕರ್ಾರಿ ಶಾಲೆಗಳಲ್ಲಿ ಅಷ್ಟೇ. ಇತ್ತೀಚೆಗೆ ಇದು ಕೂಡ ಕಣ್ಮರೆಯಾಗಿ ಇಳಿಮುಖವಾಗುತ್ತಾ ಬಂದಿದೆ. ಇಂದಿನ ಯುವ ಜನಾಂಗವನ್ನು ಒಂದು ನಿಮಿಷ ನಿಲ್ಲಿಸಿ ಕೇಳಿದರೆ ಅವರಿಗೆ ಅದು ಪೂತರ್ಿಯಾಗಿ ಬರಲಾರದು. ಹೆಚ್ಚೇಕೆ ಕನರ್ಾಟಕದಲ್ಲಿ ರಾಜಕೀಯವಾಗಿ ಹಾಗು ಸಾಮಾಜಿಕವಾಗಿ ಮುಖ್ಯಸ್ಥಾನಗಳನ್ನು ಅಲಂಕರಿಸುವವರನ್ನು ಕೇಳಿದರು ಸಮರ್ಪಕವಾಗಿ ಅವರಿಂದ ಹೇಳಲು ಸಾಧ್ಯವಾಗದು. ಹೀಗಿರುವಾಗ ಕತ್ತರಿ ಪ್ರಯೋಗಕ್ಕೆ ಕೂಗು ಎಬ್ಬಿಸಿರುವ ಈ ಹಿತಾಸಕ್ತಿಗಳಿಗೆ ಏನು ಹೇಳಬೇಕು. ಒಂದುವರೆ ನಿಮಿಷಗಳಿಗೆ ಅವುಗಳನ್ನು ಇಳಿಸಬೇಕು ಅದಕ್ಕಾಗಿ ಅದರ ಸಾಲುಗಳನ್ನು ಕಡಿತಗೊಳಿಸಬೇಕು ಎಂಬ ಇವರ ವಾದ ಎಷ್ಟರ ಮಟ್ಟಿಗೆ ಸತ್ಯವಾಗಿದೆ. ಇದನ್ನು ನಾವು ಒಪ್ಪಿಕೊಳ್ಳಲು ಸಾಧ್ಯವೇ?.
   ಇಂದು ನಮ್ಮ ನಾಡಿನ ನಮ್ಮ ಮಣ್ಣಿನ ಮತ್ತು ಭಾಷೆಯ ಸಂಸ್ಕೃತಿಯನ್ನು ಹೊಸ ತಲೆಮಾರುಗಳಿಗೆ ಕಟ್ಟಿಕೊಡುವ ಜವಾಬ್ದಾರಿ ನಮಗಿದೆ. ಹೀಗಿರುವಾಗ ಚರಿತ್ರೆಯನ್ನು ತಿರುಚುವ ಅಥವಾ ಸಂಸ್ಕೃತಿಯನ್ನು ಮುಚ್ಚಿಹಾಕುವ ಮತ್ತು ಸಾಹಿತ್ಯಗಳನ್ನು ಕತ್ತರಿ ಪ್ರಯೋಗಕ್ಕೆ ಒಳಪಡಿಸುವ ಈ ಕ್ರಮಗಳು ಎಷ್ಟರ ಮಟ್ಟಿಗೆ ಸಮಂಜಸವಾದುದು. ನಿಜವಾಗಿಯು ಇದರ ಅಗತ್ಯವಿದೆಯೆ ಎಂಬ ಕಳವಳ ನಮಗೆ ಉಂಟಾಗುತ್ತದೆ. ರಾಜಕೀಯವಾಗಿ ಅಥವಾ ಸಾಮಾಜಿಕವಾಗಿ ಯಾವುದೇ ಸಭೆ ಸಮಾರಂಭಗಳನ್ನು ಹಮ್ಮಿಕೊಂಡು ಅವುಗಳಲ್ಲಿ ಒಂದನ್ನು ಸರಿಯಾಗಿ ನಿಭಾಯಿಸದೆ ಪೊಳ್ಳು ಭರವಸೆಗನ್ನು ನೀಡಿ ಜನರಿಗೆ ಮಂಕುಬೂದಿ ಎರಚುವ ಈ ಗಣ್ಯರುಗಳಿಗೆ ನಮ್ಮ ನಾಡಗೀತೆ ಮಾತ್ರ ಭಾರವಾಗಿ ಕಾಣುತ್ತದೆ. ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಸ್ವಾರ್ಥಕ್ಕಾಗಿ ಓಟ್ ಬ್ಯಾಂಕಿಂಗ್ ನಡೆಸುವ ಇವರುಗಳಿಗೆ ಅಲ್ಲಿ ಹಾಳುಮಾಡುವ ಸಮಯದ ಕುರಿತು ಚಿಂತೆ ಇರುವುದಿಲ್ಲ. ಆದರೆ ಮೌನವಾಗಿ ಎಲ್ಲರೂ ಅರೆ ಕ್ಷಣ ಎದ್ದು ನಿಂತು ಗೌರವದಿಂದ ಬಾಯಿ ತುಂಬ ಹಾಡುವ ನಮ್ಮ ನಾಡಗೀತೆಯು ಅವರಿಗೆ ನುಂಗಲಾರದ ತುತ್ತಾಗಿ ಕಾಡುತ್ತಿರುವುದು ನಮ್ಮ ಕನ್ನಡ ನಾಡಿನ ವಿಪಯರ್ಾಸ.
 ಇಂದು ಇಂತಹ ಒಂದು ಉತ್ತಮ ವ್ಯವಸ್ಥೆಯ ಗೌರವದ ಈ ನಾಡಗೀತೆಯನ್ನು ಹಾಡುವುದು ಅತೀ ಉದ್ದವಾಗಿದೆ. ಹೀಗಿರುವಾಗ ಅದನ್ನು ಈ ರೀತಿಯ ಕತ್ತರಿ ಪ್ರಯೋಗಕ್ಕೆ ಒಳಪಡಿಸುವುದು ಎಷ್ಟು ಸರಿ. ಹೀಗೆ ಒಳಪಡಿಸುವುದರಿಂದ ಈ ವಾದಿಗಳಿಗೆ ಆಗುವ ಪ್ರಯೋಜನವಾದರು ಏನು. ಇದನ್ನು ನಮ್ಮ ಜನತೆ ಪ್ರಶ್ನಿಸಬೇಕಾಗಿದೆ. ಯುವಜನರು ನಮ್ಮ ನಾಡಗೀತೆಯನ್ನು ಪೂತರ್ಿಯಾಗಿ ಉಳಿಸಿಕೊಳ್ಳುವಲ್ಲಿ ಹೋರಾಡಬೇಕಾಗಿದೆ. ಇದು ಒಬ್ಬ ವ್ಯಕ್ತಿ ಅಥವಾ ಗುಂಪು ಧರ್ಮಕ್ಕೆ ಸಂಬಂಧಪಟ್ಟರುವುದಲ್ಲ. ನಮ್ಮ ನಾಡು ನುಡಿ ಮತ್ತು ಮಣ್ಣಿಗೆ ಸಂಬಂಧಿಸಿರುವುದು ಆಗಿದೆ.
    ಅಂದಹಾಗೆ ನಾವು ಮೊದಲ ಹಾಗು ತೃತೀಯ ಚತುಮರ್ಾಸವನ್ನು ಮುಗಿಸಿ ನಾಲ್ಕನೇಯ ಮತ್ತು ಎರಡನೇಯ ಚತುಮರ್ಾಸದಲ್ಲಿ ತೊಡಗಿಸಿಕೊಂಡಿದ್ದೇವೆ. ಮುಂದೆ ಬರುವ ದಿನಗಳು ಬಹಳ ತರಾತುರಿಯ ದಿನಗಳು. ಹಲವಾರು ಕಾರ್ಯಕ್ರಮಗಳು, ಪರೀಕ್ಷೆಗಳು, ಪ್ರವಾಸಗಳು ಮತ್ತು ಅದರೊಂದಿಗೆ ಹೊರಜಗತ್ತಿಗೆ ಕಾಲಿಡುವ ಅನಿವಾರ್ಯತೆಯು ಕೂಡ ಬಂದೊದಗಲಿದೆ. ಅದಕ್ಕಾಗಿ ನಮ್ಮ ಕನ್ನಡ ಬಿತ್ತಿ ಪತ್ರಿಕಾ ಮಂಡಳಿಯು ಬಿತ್ತಿಯ ಓದುಗ ವರ್ಗಕ್ಕೆ ಹಾಗು ಎಲ್ಲಾ ವಿದ್ಯಾಥರ್ಿ ಗೆಳೆಯ-ಗೆಳತಿಯರಿಗೆ ಶುಭಹಾರೈಸುತ್ತಿದೆ. ಪರೀಕ್ಷೆಗಳು ನಮ್ಮ ಶ್ರಮಕ್ಕೆ ಫಲಕೊಡುವಂತಿರಲಿ. ಈ ಚತುಮರ್ಾಸದ ಮೊದಲ ಸಂಚಿಕೆಯನ್ನು ಮತ್ತೆ ನಿಮ್ಮ ಕೈಗಿಡಲು ಬಿತ್ತಿಮಂಡಳಿಗೆ ಸಂತೋಷವಾಗುತ್ತಿದೆ. ನಿಮ್ಮ ಸಹಕಾರ ಮತ್ತು ಓದುವ ಮನಸ್ಸು ಹೀಗೆ ಮುಂದುವರೆಯಲಿ.
ಸಂಪಾದಕರು 

ಆಕೆ ಸಿಕ್ಕಾಗ
ಅವಳು ನಡೆಯುತ್ತಿದ್ದಾಳೆ.......ಕೈಯಲ್ಲೊಂದು ಕೋಲು, ಕೆದರಿದ ಕೂದಲು, ಅಸ್ತವ್ಯಸ್ತಗೊಂಡಿರುವ ಬಟ್ಟೆ, ಕೊಳೆಗಟ್ಟಿದ ಶರೀರವನ್ನು ಮೆಲ್ಲನೆ ಎಳೆಯುತ್ತಾ ಸಾಗುತ್ತಿದ್ದಾಳೆ. ಸಿಕ್ಕವರನ್ನು ಬೈಯತ್ತಿದ್ದಾಳೆ, ಕೆಲವರನ್ನು ಮಾತಾಡಿಸುತ್ತಿದ್ದಾಳೆ. ಆದರೂ ಯಾರು ಅವಳ ಬಳಿ ಬರಲೇ ಇಲ್ಲ. ಭಯದಿಂದ ದೂರ ಸರಿಯುತ್ತಿದ್ದಾರೆ, ಓಡುತ್ತಿದ್ದಾರೆ, ಛೀ ಥೂ ಎಂದು ಉಗಿಯುತ್ತಿದ್ದಾರೆ.
ದೂರದಲ್ಲಿ ಬಸ್ಸ್ಗಾಗಿ ಗೆಳೆಯರೊಂದಿಗೆ ಕಾಯುತ್ತಿದ್ದ ಶ್ಯಾಂ ತನ್ನ ಗೆಳೆಯ ರಮೇಶನೊಂದಿಗೆ ಅವಳ ಬಗ್ಗೆ ಹೇಳಿ ಕನಿಕರ ಪಡುತ್ತಿದ್ದಾನೆ. ಚಿಕ್ಕ ಪ್ರಾಯದಲ್ಲಿಯೇ ತನ್ನ ಕಣ್ಣೆದುರು ಅನಾರೋಗ್ಯದಿಂದ ತೀರಿಕೊಂಡ ತಾಯಿಯ ಮೌಲ್ಯ ಅವನಿಗೆ ಅರಿವಾಗಿತ್ತು. ಆದರೆ ರಮೇಶ್ ಅವನ ಆಲೋಚನೆಯನ್ನು ಒಪ್ಪಲಿಲ್ಲ. ಇವನು ತನ್ನ ತಾಯಿಯನ್ನು ಕಳೆದುಕೊಂಡಿದ್ದ ಅವಳ ಯಾವ ಪ್ರೀತಿಯು ಅವನಿಗೆ ದೊರೆತಿರಲಿಲ್ಲ. ಅದರ ಅನುಭವವೂ ಅವನಿಗಿಲ್ಲ. ಕೊನೆಗೂ ಗೆಳೆಯ ಶ್ಯಾಂನ ಒತ್ತಾಯದ ಮೇರೆಗೆ ಒಲ್ಲದ ಮನಸ್ಸಿನಿಂದ ಆ ಮುದುಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ. ಹುಡುಗರ ಆಸಕ್ತಿ ವೈದ್ಯರಿಗೂ ಖುಷಿ ನೀಡಿತು. ಅತೀ ಶೀಘ್ರದಲ್ಲಿ ಆ ವೃದ್ಧೆ ಗುಣಮುಖ ಹೊಂದಿದಳು. ಆದರೆ ಮುಂದೇನು ಎಂಬ ಪ್ರಶ್ನೆಗೆ ಶ್ಯಾಂನ ಮನೆಯೇ ದಿಕ್ಕಾಯಿತು.
ಸಮಯ ಕಳೆಯಿತು ಶ್ಯಾಂ ಮತ್ತು ರಮೇಶನಿಗೆ ಉದ್ಯೋಗ ದೊರಕಿತು. ಇಬ್ಬರೂ ತಮ್ಮ ಕಾಲ ಮೇಲೆ ನಿಂತಿದ್ದರು. ಅನಾಥನಾಗಿ ಬೆಳೆದ ರಮೇಶ ತನ್ನನ್ನು ಸಾಕಿ ಬೆಳೆಸಿದ ಅನಾಥಾಶ್ರಮಕ್ಕೆ ಬಂದು ತನ್ನ ವಿವಾಹದ ಕುರಿತಾಗಿ ಹೇಳಿಕೊಂಡಾಗ ಅಲ್ಲಿನ ಮುಖ್ಯಸ್ಥರು ಅವನನ್ನು ಆಶೀರ್ವದಿಸಿ ಅವರ ಬಳಿಯಲ್ಲಿದ್ದ ಕೆಲವು ಇವನ ಕುರಿತಾದ ದಾಖಲೆಗಳನ್ನು ಹುಡುಕಿ ಕೊಟ್ಟರು. ಅದರಲ್ಲಿ ಅವನ ಕಾಣೆಯಾದ ತಾಯಿ ತಂದೆಯರ ಭಾವಚಿತ್ರವು ಇತ್ತು. ಅದನ್ನು ನೋಡಿದವನೇ ನಿಧಿಯೊಂದು ಸಿಕ್ಕಿದವನಂತೆ ಆನಂದದ ಕಣ್ಣಿರೊಡನೆ ಶ್ಯಾಂನ ಮನೆಗೆ ಧಾವಿಸಿದ.

-ಲೋಕೇಶ್ ಕುಕ್ಕುಜೆ
ದ್ವಿತೀಯ ಎಂ.ಎ.
ಕನ್ನಡ ವಿಭಾಗ

ನಿನ್ನದೇ ನೆನಪು
ಈ ಮನಸ್ಸಿನ ತುಂಬಾ ನಿನ್ನದೇ ನೆನಪು...
ಈ ಹೃದಯದ ಬಡಿತವಾಗಿರುವುದು
ನಿನ್ನದೇ ನೆನಪು.....
ನನ್ನ ಕಣ್ಣುಗಳಲ್ಲಿ ಕಂಬನಿಯಾಗಿರುವುದು
ನಿನ್ನದೇ ನೆನಪು.....
ನನ್ನ ಉಸಿರಲ್ಲಿ ಉಸಿರಾಗಿ ಹಸಿರಾಗಿರುವುದು
ನಿನ್ನದೇ ನೆನಪು......
ಏಕಾಂತದಲ್ಲಿ ನನ್ನ ಸ್ನೇಹಿತನಾಗುವುದು
ನಿನ್ನದೇ ನೆನಪು......
ಮೌನದಲ್ಲೂ ನನ್ನ ಜೊತೆ
ನೂರಾರು ಮಾತುಗಳನ್ನಾಡುವುದು
ನಿನ್ನದೇ ನೆನಪು......
ಒಂಟಿಯಾಗಿ ನಾ ನಡೆದರೆ
ನೆರಳಾಗಿ ಹಿಂಬಾಲಿಸುವುದು
ನಿನ್ನದೇ ನೆನಪು......
ನಾ ಎಲ್ಲೇ ಹೋದರು
ನನ್ನ ಪ್ರತಿಬಿಂಬವಾಗಿ ಜೊತೆಯಾಗಿರುವುದು
ನಿನ್ನದೇ ನೆನಪು......
ನಿದಿರೆಯ ಮಂಪರಿನಲ್ಲಿ
ಕನಸಾಗಿ ಸುಳಿದಾಡುವುದು
ನಿನ್ನದೇ ನೆನಪು......
ನೋವಲ್ಲಿ ನಲಿವಾಗಿ,
ನಲಿವಲ್ಲಿ ಮುದ್ದು ನಗುವಾಗಿ,
ನನ್ನ ನಗಿಸುವುದು
ನಿನ್ನದೇ ನೆನಪು.....
ಒಲವಿನ ಭಾವನೆಗಳು
ನನ್ನಲ್ಲೇ ಹುಟ್ಟಿ, ನನ್ನಲ್ಲೇ ಸಾಯುವಾಗ
ಕಾಡುವುದು ಕೇವಲ
ನಿನ್ನದೇ ನೆನಪು......
ಈ ಹೃದಯ
ಪ್ರೀತಿಯ ಸಾಮಿಪ್ಯ ಬಯಸಿದಾಗ
ನೆನಪಾಗುವುದು
ನಿನ್ನದೇ ನೆನಪು......

ದೀಪಿಕಾ. ಎನ್. ಸಿ.
ದ್ವಿತೀಯ ಎಂ.ಕಾಂ ವಿಭಾಗ

ಬಿತ್ತಿ ಬಿತ್ತಿ
ಅದೊಂದು ದಿನ ಮನದ ತವಕ
ಎಲ್ಲರಲ್ಲೂ ಬಿತ್ತಿ ಬ್ಲಾಗ್ ನ ಪುಳಕ
ವಾಚಿಸುತ್ತಿದ್ದರು ಕವನ
ಅವರಿಗೆ ನನ್ನ ಕೋಟಿ ನಮನ
ಪ್ರಾರಂಭವಾಯಿತು ಕವಿಗೋಷ್ಠಿ
ನನ್ನ ಕೈಗಳಿತ್ತು ಮುಷ್ಠಿ
ಮನದೊಳಗೆ ಮಿಡಿಯುತ್ತಿತ್ತು ಬಿತ್ತಿ ಬಿತ್ತಿ
ನಾ ಗೀಚಿದೆ ಪೆನ್ನನ್ನು ಒತ್ತಿ ಒತ್ತಿ
ರಂಜಿತ್  ಪ್ರಥಮ ಎಂ.ಎ. 
    ಕನ್ನಡ ವಿಭಾಗ
ಗೆಳೆಯನೇ, ನಿನ್ನೊಲವ ನಾ ಹೇಗೆ ಬಣ್ಣಿಸಲಿ?

ಕವಿಯಲು ಮನದಲ್ಲಿ
ನೋವಿನ ಮುಗಿಲು
ಪ್ರೀತಿಯ ಮಾತಲ್ಲಿ
ನೀ ತರುವೆ ಸಂತಸದ ಹೊನಲು
ನನ್ನ ಕನಸಲ್ಲೂ ಪ್ರೀತಿಸುವೆ
ಈ ಕಣ್ಣಿಗೆ ರೆಪ್ಪೆಯಾಗಿ
ಕಾಯುವೆ ಕಂಬನಿಯ
ಕಿರುಬೊಗಸೆಯಲ್ಲಿ ಹಿಡಿದು....
ಈ ಬಾಳದಾರಿಯಲ್ಲಿ
ಏಕಾಂಗಿ ಯಾನದಲ್ಲಿ
ಮನಸೆಂಬ ಮಲ್ಲಿಗೆಯು
ಮೌನದಲ್ಲಿ ಬಾಡಿರಲು
ನೀ ತುಂತುರು ಹನಿಯಾಗಿ
ತುಂಟ ನಗುವಲ್ಲಿ
ನನ್ನ ನಗಿಸುವೆ
ಒಲವಿನ ಹೂ ಮಳೆ ಸುರಿದು.....

- ದೀಪಿಕಾ ಎನ್. ಸಿ.
   ದ್ವಿತೀಯ ಎಂ.ಕಾಂ ವಿಭಾಗ
ಜೀವನ
ಹಸಿರು ಹಾದಿಯಲ್ಲಿ ನೆಟ್ಟ ಹೆಜ್ಜೆಯನ್ನು
ಬೆಳೆಸುತ ಸಾಗೋಣ.....ನಾವು
ಮುಂದೆ ಮುಂದೆ ಹೋಗುತ್ತಾ...
ಎಲ್ಲರನ್ನು ಸ್ಮರಿಸುತ್ತಾ....
ಮೊದಲಿಟ್ಟ ಹೆಜ್ಜೆಯನ್ನು 
ಹಿಂದಕ್ಕೆ ಹಾಕದೆ
ಮುಂದಿನ ದಾರಿಯ ತುಳಿಯೋಣ
ಎಲ್ಲರನ್ನು ಕೂಡಿಕೊಂಡು
ಜೊತೆ-ಜೊತೆಯಲಿ ಸಾಗೋಣ....
ಸಾಗುತ್ತಾ ಸಾಗುತ್ತಾ ಹಸಿರ ಹಾದಿಯ
ಬೆಳೆಸೋಣ ನಾವು ಬೆಳೆಸೋಣ....

ಅಕ್ಷತಾ
ದ್ವಿತೀಯ ಎಂ.ಎ. 
ಕನ್ನಡ ವಿಭಾಗ
 ಜೀವನ
ಮೂಡುವನು ಸೂರ್ಯನು ಪೂರ್ವದಲ್ಲಿ
ಜನರ ಕಾಯಕವು ಆರಂಭ
ಖಗ - ಮೃಗಗಳ ಆಟೋಟ...
ಭಗವಂತ ತಿರುಗಿಸಿದ ಬುಗುರಿಯಂತೆ...
       ಮಕ್ಕಳ ಶಾಲೆಗೆ ಪಯಣ
       ಆಟಪಾಠಗಳ ಸಮ್ಮಿಲನ
       ಮುಗ್ಧ ಮನಸ್ಸಿನ ಪುಟಾಣಿಗಳು
       ಭಗವಂತನ ಇನ್ನೊಂದು ರೂಪದಂತೆ
ರಾತ್ರಿಯ ನಿಶ್ಯಬ್ಧ ವಾತಾವರಣ
ಕಲುಷಿತವಾಗಲು ಶುರುವಾಯ್ತು...
ಮನುಷ್ಯ - ಮನುಷ್ಯರ ನಡುವೆ ಕಲಹ
ಕಟ್ಟಾಟ ಹೊಡೆದಾಟ ಜಗಳವಯ್ಯ...
       ತಾನು ಆಡಿಸಿದ ಆಟವನು
       ನೋಡಿ ಭಗವಂತ ನಗುವನು...
       ಇಹದ ಮೋಹದಲ್ಲಿರುವ ಜನರು...
       ಆಡುವರು ಪರದ ಜ್ಞಾನವಿಲ್ಲದಂತೆ...
ಒಂದೊಂದು ಕಡೆಯಲ್ಲಿ ಬಡತನ,
ತಿನ್ನಲು ಗತಿಯಿಲ್ಲದ ಜನ,
ಇನ್ನೊಂದು ಕಡೆಯಲ್ಲಿಹರು ಸಿರಿವಂತ ಜನ
ಮೋಜು ಮಸ್ತಿಯ ಮಾಡುತಿಹರು...
       ಹಣವಿಲ್ಲವೆಂಬ ಚಿಂತೆ ಬಡವನಿಗೆ
       ಹಣವಿದ್ದರೂ ಚಿಂತೆ ಸಿರಿವಂತನಿಗೆ
       ಚಿಂತೆಯೆನ್ನುವುದು ಕರೆದೊಯ್ಯುವುದು....
       ಮನುಷ್ಯರನ್ನು ಚಿತೆಯೆಡೆಗೆ
ರವಿಯು ಮುಳುಗಿದನು ಪಶ್ಚಿಮದಲ್ಲಿ
ನೆಲೆಸಿಹುದು ಪ್ರಕೃತಿಯ ಮಡಿಲಲ್ಲಿ ಶಾಂತಿ...
ಖಗ - ಮೃಗಗಳೆಲ್ಲವೂ...
ತಮ್ಮ ಕನಸಿನ ಲೋಕಕೆ ಜಾರಿಹುದು..
       ಇದುವೇ ದಿನದ ಅಂತ್ಯ...
       ಹೀಗೆ ಉರುಳುವುದು...
       ದಿನ - ತಿಂಗಳು ವರುಷಗಳು...
       ಈ ಬಂಧನ ಮುಗಿಯುವುದು....
      
                           ಪ್ರಭಾಶ್ರೀ
                           ದ್ವಿತೀಯ ಎಂ. ಎಸ್ಸಿ. ಕೆಮಿಸ್ಟ್ರಿ
  ಆ ನೆನಪುಗಳು
ಓ ಮುದ್ದು ಗೆಳತಿ
ನೆನಪಿದೆಯೇ ನಿನಗೆ
ಬಾಲ್ಯದ ಆ ಸುಂದರ
ಮುಂಜಾವುಗಳು
ಮುಗ್ಧ ಮನಸಿನ ನಿರ್ಮಲ ನಗುವಿನಲಿ
ಒಂದಾಗಿ ಬೆರೆತು ಓಡಾಡಿದ
ತುಂಟಾಟದ ಬಾಲ್ಯ ದಿನಗಳು
ಎಂದೆಂದಿಗೂ ಅಚ್ಚಳಿಯದೇ ಉಳಿಯುವ
ಸಿಹಿ ನೆನಪುಗಳು ನನ್ನೆದೆಯಲ್ಲಿ
ಆ ದಿನಗಳ ಕೂಗಿ ಮತ್ತೇ ಕರೆದರೂ
ಮರಳಿ ಬಾರದ ಅಮೂಲ್ಯ ಕ್ಷಣಗಳು

                                  ಸೌಜನ್ಯ
                                  ದ್ವಿತೀಯ ಎಂ.ಎ.

ದಾನ

ಧರ್ಮ ಶಾಸ್ತ್ರದಲ್ಲಿ ಹೇಳಿದೆ
ದಾನದಲ್ಲಿ ಶ್ರೇಷ್ಠ ಅನ್ನದಾನ
ಸಂವಿಧಾನದಲ್ಲಿ ಬರೆದಿದೆ
ಪ್ರಜಾಪ್ರಭುತ್ವದಲ್ಲಿ ಮತದಾನ
ಮನಃಶಾಸ್ತ್ರದಲ್ಲಿ ತಿಳಿಸಿದೆ
ಮನುಷ್ಯನ ಬುದ್ಧಿಗೆ ಸಮಾಧಾನ


ಲೋಕೇಶ್ ಕುಂಚಡ್ಕ
ಪ್ರಥಮ ಎಂ.ಎ.
ಕನ್ನಡ ವಿಭಾಗ

ಚುಟುಕುಗಳು
ನನ್ನವಳು
ಊಟದಲ್ಲಿದ್ದಂತೆ ಹೋಳಿಗೆ
ನೀನು ನನ್ನ ಬಾಳಿಗೆ ಎನ್ನದಿದ್ದರೆ,
ಹಬ್ಬಕ್ಕೆ ಮಾಡಿಟ್ಟ ಹೋಳಿಗೆ
ಬಡಿಸುವುದೇ ಇಲ್ಲ ಅವಳು ನನ್ನ ಬಾಳೆಗೆ..

ಹಗುರ - ಭಾರ
ಕೆಲವೊಮ್ಮೆ ಹಗುರ ವಿಚಾರಗಳೂ
ಅನಿಸುತ್ತವೆ ಬಲು ಭಾರ
ಪರ್ವತವನ್ನೇರಿ ಕುಳಿತವನು
ಸೂಜಿಯ ಮೇಲೆ ಕೂರಲಾರ

ಪ್ರಾಣಿಪ್ರಿಯ !
ಪ್ರಾಣಿಗಳು ಅವನ
ಪ್ರೀತಿಗೆ ಪಾತ್ರ
      ಆದರೆ ಅವುಗಳು
      ಸತ್ತು ಹೋಗಿದ್ದರೆ ಮಾತ್ರ...!

       ರಾತ್ರಿಯ ನಲ್ಲೆ
ರಾತ್ರಿ ಹಾಡು ಹಾಡುತ್ತಾ,
       ಕೆನ್ನೆಗೆ ಮುತ್ತಿಕ್ಕುವ ನಲ್ಲೆ...
       ಅಪಾರ್ಥ ಮಾಡ್ಕೋಬೇಡಿ ಸ್ವಾಮಿ
       ಅದು ಹೆಣ್ಣು ಸೊಳ್ಳೆ....!!!

                                         ವಿಶ್ವನಾಥ್. ಎನ್.
                                         ಪ್ರಥಮ ಎಂ. ಎ. ಕನ್ನಡ
ರೈಟ್
ಅಂದು 17/05/2014. ನಾನು ಪರೀಕ್ಷೆಗೆ ಹೋಗುತ್ತಿದ್ದೆ. ಉಳ್ಳಾಲದಿಂದ ಬಸ್ಸ್ ಹತ್ತಿ ತೊಕ್ಕೊಟ್ಟುವಿನಲ್ಲಿ ಇಳಿದು, ಪುನಃ ತೊಕ್ಕೊಟ್ಟುವಿನಲ್ಲಿ ಕೊಣಾಜೆಯ ಬಸ್ಸ್ ಹತ್ತಿ ಕೂತೆ. ಸುಮಾರು 70 ವರ್ಷದ ಮುದುಕ ಮೊಬೈಲ್ ಹಿಡಿದುಕೊಂಡು ಬಹಳ ಜೋರಾಗಿ ಮಾತನಾಡುತ್ತಿದ್ದ. ಬಸ್ ಕೊಣಾಜೆಗೆ ಹೋಗುವ ಆಚೆ ಟನರ್್ ಆಗಿ ನಿಂತಿತು. ಕೆಲವು ಪ್ರಯಾಣಿಕರು ಬಸ್ಸ್ ಹತ್ತಿದ ಕೂಡಲೇ ಒರ ಪೋಯಿ ಮಾರಯಾ ರೈಟ್ ಎಂದ ಮುದುಕ. ಬಸ್ಸ್ ಚಾಲಕ ಬಸ್ಸನ್ನು ಮುಂದುವರಿಸಿದ. ಕೂಡಲೆ ಕಂಡಕ್ಟರ್ ವಿಝಲ್ ಹಾಕಿ ನಿಲ್ಲಿಸಿದ. ಕೂಡಲೇ ಆ ಮುದುಕ ಹೊರಗೆ ನೋಡಿ ಪ್ರಯಾಣಿಕರಿಗೆ ನಿಗ್ಲೆಗ್ ಬೇಗ ಬರ್ರೆ ಆಪುಜಾ, ಎಂಕ್ ಪೊತರ್ಾಂಡ್ ಎಂದು ಬೈದ. ಅವರು ಬಸ್ಸ್ ಹತ್ತಿದ ಕೂಡಲೇ ರೈಟ್ ಎಂದ ಮುದುಕ. ಪುನಃ ಬಸ್ಸ್ ಚಾಲಕ ಬಸ್ಸ್ನ್ನು ಮುಂದುವರಿಸಿದ ಕೂಡಲೇ ಕಂಡಕ್ಟರ್ ವಿಝಲ್ ಹೊಡೆದು ಬಸ್ಸ್ ನಿಲ್ಲಿಸಿದ.
ಇದನ್ನು ನೋಡಿ ನನಗೆ ಜೋರು ನಗು ಬಂತು. ನಗುವನ್ನು ನಿಯಂತ್ರಿಸಲು ನಾನು ಹರಸಾಹಸಪಟ್ಟೆ. ನನ್ನ ಪಕ್ಕದಲ್ಲಿದ್ದ ಪ್ರಯಾಣಿಕ ಬಹಳ ಗಂಭೀರವಾಗಿ ಆ ಮುದುಕನನ್ನೊಮ್ಮೆ ನನ್ನನ್ನೊಮ್ಮೆ ನೋಡಿದ. ನಾನು ಕೂಡಲೇ ಪುಸ್ತಕ ತೆಗೆದು ಓದಲು ಆರಂಭಿಸಿ ನನ್ನ ಗಮನ ಬೇರೆಡೆ ಬದಲಾಯಿಸಿದೆ. ಹೀಗೆ ಕ್ಲಾಸಿಗೆ ಬಂದಾಗ ಯಾರು ಇರಲಿಲ್ಲ. ಸಮಯ  ಕಳೆಯುತ್ತಿದ್ದಂತೆ ಒಬ್ಬೊಬ್ಬರೇ ಬಂದರು. ನಾನು ಅವರಲ್ಲಿ ನಡೆದ ವಿಷಯವನ್ನು ತಿಳಿಸಿದೆ. ಕೆಲವರು ಬಾಯಿ ತುಂಬಾ ನಗಾಡಿದರು. ಮತ್ತೆ ಕೆಲವರು ತುಟಿಯಲ್ಲಿ ನಗಾಡಿದರು, ಇನ್ನೂ ಕೆಲವರು ತುಟಿಯ ಒಂದು ಬದಿಯಲ್ಲಿ ನಗಾಡಿದರು. ಕೂಡಲೇ ನನ್ನ ಆತ್ಮೀಯ ಸ್ನೇಹಿತೆ ನಿನ್ಗೆ ನಗು ಬಾರದ್ದು ಯಾವಾಗ ಹೇಳು ಎಂದು ತನ್ನ ಮೂವತ್ತೆರಡು ಹಲ್ಲಿನೊಂದಿಗೆ ಹಲ್ಲಿಗೆ ಹಾಕಿದ ಕ್ಲಿಪ್ಪನ್ನು ಪ್ರದಶರ್ಿಸಿದಳು. ನಾನು ಪ್ರತಿ ನಗು ಬೀರಿ ಓದಲು ಆರಂಭಿಸಿದೆ.
ಮಧ್ಯಾಹ್ನ ಹಾಸ್ಟೇಲ್ಗೆ ಹೋಗಿ ಊಟ ಮಾಡಿ ಅವತ್ತೇ ಮನೆಗೆ ಹೊರಟೆ. ಉಳ್ಳಾಲದಿಂದ ಬಸ್ ಹತ್ತಿ ಸ್ಟೇಟ್ ಬ್ಯಾಂಕ್ನಲ್ಲಿ ಇಳಿದು ಮೀನು ಮಾರುಕಟ್ಟೆಯ ಒಳಗಿಂದ ಬಸ್ಸ್ ಸ್ಟ್ಯಾಂಡ್ಗೆ ನಡೆದುಕೊಂಡು ಬರುವಾಗ, ಅವರ ವ್ಯಾಪಾರದ ಮೇಲೆ ನನ್ನ ಕಣ್ಣು, ಕಿವಿಯನ್ನು ಹರಿಬಿಟ್ಟೆ. ಖರೀದಿಸಲು ಬಂದ ಹೆಣ್ಣನ್ನು ಕುರಿತು, ಬಲ ಮಗಾ ಆಲ್ 40 ಅತ್ತ, ಯಾನ್ 50 ಮೀನ್ ಕೊಪರ್ೆ, ಬಲ ಎಂದಳು. ನಾನು ನಗಾಡಿಕೊಂಡೆ ಮುಂದೆ ಬಂದೆ, ಬಸ್ಸ್ ಹತ್ತಿ ಕೂತೆ.
ಪಸರ್್ ವ್ಯಾಪಾರಿ ಬಸ್ಸ್ನಲ್ಲಿದ್ದ ಎಲ್ಲರಲ್ಲೂ ಪಸರ್್ ಬೋಡ ಎಡ್ಡೆ ಉಂಡು....ಬೋಡ ಎಂದು ಕೇಳುತ್ತಾ ನನ್ನ ಬಳಿಯೂ ಬಂದ. ನಾನು ತಲೆ ಅಲ್ಲಾಡಿಸಿ ಬೇಡ ಎಂಬಂತೆ ಸೂಚಿಸಿದೆ. ಆತ ಪುನಃ ಬಂದು ನನ್ನ ಹೆಗಲ ಮೇಲೆ ಕೈ ಹಾಕಿ, ಬಹಳ ನಗು ಮುಖದಿಂದಲೇ ಉಂದು ಪಸರ್್ ದೆತೊನ್ಯಗುಲು ಎಡ್ಡೇ ಆತೆರ್ ಎಂದ. ನಾನು ಕೂಡ ನಗುಮುಖದಿಂದಲೇ ಏತೋ ಜನ ಪಸರ್್ ದೆತ್ತ್ದ್ ಹಾಳಾತೆರ್ ಎಂದೆ. ನನ್ನ ಹತ್ತಿರದ ಪ್ರಯಾಣಿಕ ಜೋರಾಗಿ ನಗಾಡಿದ. ನಾನು ಅವನನ್ನು ಗಾಂಭೀರ್ಯದಿಂದಲೇ ನೋಡುತ್ತಾ ಅವನಲ್ಲಿ ನನ್ನನ್ನು ಕಂಡೆ.

ದೀಪಕ್ ಎನ್. ದುರ್ಗ
ದ್ವಿತೀಯ ಎಂ.ಎ. ಕನ್ನಡ ವಿಭಾಗ

ವಿಧಿಯಾಟ
ಉಮಾ ಹುಟ್ಟುತ್ತಲೇ ಶ್ರೀಮಂತಳಾಗಿ ಬೆಳೆದಳು. ವಯಸ್ಸಿಗೆ ಸಹಜವಾಗಿ ಮದುವೆಯೂ ಆಯಿತು. ಆದರೆ ಅವಳ ಸುಖ ಸಂತೋಷ ಅವಳ ಸಾಂಸಾರಿಕ ಬದುಕಿನ ಆರಂಭದೊಂದಿಗೆ ಕೊನೆಯಾಯಿತು. ಅವಳ ದುರಾದೃಷ್ಟವೋ ಎಂಬಂತೆ ಯಾವುದೋ ಜ್ವರ ಕಾಣಿಸಿಕೊಂಡು ಕಿವಿಯಲ್ಲಿ ಗುಳ್ಳೆಗಳಾಗಿ ಅದು ಒಡೆದು ಕಿವಿ ಕೇಳಿಸದಾಯಿತು. ತಂದೆ- ತಾಯಿಯ ಮುದ್ದಿನ ಆರೈಕೆಯಲ್ಲಿ ಬೆಳೆದ ಉಮಾ ಗಂಡನ ಮನೆಯಲ್ಲಿ ನೋವು, ಕಷ್ಟ, ಅವಮಾನಗಳನ್ನು ಎದುರಿಸಬೇಕಾಯಿತು. ಗಂಡ ತನ್ನ ತಾಯಿಯ ಮಾತು ಕೇಳಿ ಅವಳಿಗೆ ಔಷಧವನ್ನು ಕೊಡಿಸದಾದ ಗಂಡನ ತಿರಸ್ಕಾರದ ನಡುವೆಯೂ ತನ್ನ ತವರು ಮನೆಯವರ ಆಶ್ರಯದಲ್ಲಿ ಬದುಕು ಸಾಗಿಸಲಾರಂಭಿಸಿದಳು. ವರ್ಷಕ್ಕೊಮ್ಮೆ ಬಂದು ಹೋಗುವ ಗಂಡನ ದರ್ಪದಾಟವೋ ಎಂಬಂತೆ ಹೆಣ್ಣು ಮಗುವೊಂದಕ್ಕೆ ತಾಯಿಯಾದಳು. ಸಾಯಲು ಮನಸ್ಸು ಮಾಡುತ್ತಿದ್ದ ಅವಳ ಜೀವ ಮಗುವಿಗಾಗಿ ಬದುಕಿ ಉಳಿಯಿತು. ಕಷ್ಟ ಪಟ್ಟು ಮಗುವನ್ನು ಬೆಳೆಸಿದಳು. ಅವಳ ತಂದೆ - ತಾಯಿ ಅಕ್ಕ ತಂಗಿ ಅವಳಿಗೆ ಆಸರೆಯಾಗಿ ನಿಂತರು. ತನ್ನ ಕಷ್ಟವನ್ನೆಲ್ಲಾ ನುಂಗಿ ಮಗಳಿಗೆ ಪ್ರೀತಿ ಧಾರೆಯೆರೆದು ಅವಳನ್ನು ಚೆನ್ನಾಗಿ ಬೆಳೆಸಿದಳು. ಮಗಳು ಬೆಳೆದು ದೊಡ್ಡವಳಾದಳು ಇನ್ನೇನು ತನ್ನ ಕಷ್ಟ ತೀರಿತು ಎನ್ನುವಾಗಲೇ ಕ್ರೂರ ವಿಧಿ ಅವಳ ಬಾಳಿನಲ್ಲಿ ಪುನಃ ಆಟವಾಡತೊಡಗಿತು. ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕೆಂದು ಬೆಳೆಸಿದ ತನ್ನ ಮಗಳು ಸ್ನೇಹಾ ಅವಳ ಕಲ್ಪನೆಯಂತೆ ಇದ್ದಳು. ಎಲ್ಲರ ಪ್ರೀತಿಗೆ ಪಾತ್ರಳಾಗಿ ಎಲ್ಲರನ್ನೂ ಗೌರವದಿಂದ ಕಾಣುತ್ತಾ, ಪರರ ಕಷ್ಟಕ್ಕೆ ಸ್ಪಂದಿಸುತಾ,್ತ ಎಲ್ಲರಿಗೂ ಒಳಿತನ್ನೆ ಬಯಸುತಾ,,್ತ ತನ್ನಿಂದಾದ ಸಹಾಯ ಮಾಡುತ್ತಾ ಸುಂದರ ಬದುಕು ಕಟ್ಟಿಕೊಂಡಿದ್ದ ಸ್ನೇಹಾಳ ಬಾಳಿಗೆ ಹುಟ್ಟಿಗೆ ಕಾರಣವಾದ ತಂದೆಯೇ ಮುಳುವಾದ. ವಿದ್ಯಾಭ್ಯಾಸಕ್ಕೆ ತೆರಳುವ ತನ್ನ ಮಗಳ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸತೊಡಗಿದ. ಅವಳು ಶೀಲಗೆಟ್ಟವಳು ಎಂಬ ಹಣೆಪಟ್ಟಿ ಕಟ್ಟಿದ, ಗುರು-ಶಿಷ್ಯರ ಸಂಬಂಧಕ್ಕೆ ಅಪಾರ್ಥ ಕಲ್ಪಿಸಿ, ಸ್ನೇಹ ಭಾಂದವ್ಯದ ಪದಗಳಿಗೆ ವ್ಯಭಿಚಾರದ ಅರ್ಥ ನೀಡಿ ಅಪಪ್ರಚಾರ ಮಾಡತೊಡಗಿದ. ಏನೂ ಅರಿಯದ, ಸಂಬಂಧಗಳನ್ನು ಗೌರವಿಸುತ್ತಿದ್ದ ಅವಳ ಬದುಕು ಗಾಳಿಗೆ ಸಿಕ್ಕ ತರೆಗೆಲೆಯಂತಾಯಿತು. ಸಾಯುವ ಮನಸ್ಸು ಮಾಡಿದಳು ಆದರೆ ತಾಯಿಯ ಬದುಕು ನೋಡಿ ತನ್ನ ಅಪವಾದವನ್ನು ಛಲವಾಗಿ ಸ್ವೀಕರಿಸಿದಳು. ಆಡುವ ಬಾಯಿಯನ್ನು ಮುಚ್ಚಿಸಬೇಕೆಂದು ಅವರ ಅವಮಾನದ ನುಡಿ ಲೆಕ್ಕಿಸದೆ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಉತ್ತಮ ಸ್ಥಾನಕ್ಕೇರಿದಳು. ಖಂಡಿಸಿದ ತಂದೆ ಮಾತ್ರವಲ್ಲ ಈ ಸಮಾಜವನ್ನು ಎದುರಿಸಿದಳು. ಮಹಿಳಾಪರ ಹೋರಾಟಕ್ಕಾಗಿ ನಿಂತು ಎಷ್ಟೋ ನೊಂದ ಮನಸ್ಸುಗಳ ಜೊತೆಯಾದಳು. ತಾಯಿಗಾದ ಕಷ್ಟ ನೋವು ಜೊತೆ ತನ್ನ ಅನುಭವ ಅವಮಾನ ಸೇರಿಸಿ ಛಲದಿಂದ ಬದುಕಿ ಸುಂದರ ಬದುಕು ಕಟ್ಟಿಕೊಂಡಳು. ಇಂದು ಅವಳನ್ನಾಡಿದ ಅದೇ ಬಾಯಿಗಳು ತೆಪ್ಪಗಿವೆ. ಕಾರಣ ಅವಳಿಗೆ ಸತ್ಯವನ್ನು ತಿಳಿಸುವ ಧೈರ್ಯವಿದೆ. ತಾಯಿಗಾದ ನೋವು ಬೇರೆಯವರ ಬಾಳಲ್ಲಿ ಬರಬಾರದು ಎಂದು ಆಶಿಸುತ್ತಾಳೆ. ಉಮಾಳಿಗೂ ಇಂದು ತೃಪ್ತಿಯಿದೆ. ಸ್ನೇಹಾಳನ್ನು ಬೆಳೆಸಿದ ಸಾರ್ಥಕ್ಯ ಭಾವವಿದೆ. ತನ್ನಂತೆ ನೋವುಂಡ ತಾಯಿಯರಿಗೆ ಸ್ನೇಹಾಳಂತ ಮಗಳನ್ನು ರೂಪಿಸಿ ಎಂಬ ಕಿವಿಮಾತು ನೀಡುತ್ತಾಳೆ. ಇಂತಹ ನೋವುಗಳು ಎಷ್ಟೋ ಹೆಣ್ಣುಮಕ್ಕಳ ಬಾಳಲ್ಲೂ ನಡೆಯಬಹುದು ಅಲ್ಲವೇ?
ಸ್ಪಂದಿಸಿ.....ಸಹಕರಿಸಿ......ಜೊತೆಯಾಗಿ.......

ಶ್ವೇತಾಶ್ರೀ
ದ್ವಿತೀಯ ಎಂ.ಎ. 
ಕನ್ನಡ ವಿಭಾಗ
ಕನ್ನಡ ರಾಜ್ಯೋತ್ಸವ ಮತ್ತು ಸರ್ಕಾರಿ ರಜೆ
ನವೆಂಬರ್ 1 ಕನ್ನಡ ರಾಜ್ಯೋತ್ಸವ. 1956 ರಲ್ಲಿ ಭಾಷಾವಾರು ಪ್ರಾಂತ್ಯಗಳಿಗೆ ಅನುಗುಣವಾಗಿ ಏಕೀಕರಣಗೊಂಡಿತು. ಮೈಸೂರು ರಾಜ್ಯಕ್ಕೆ ಅಂದರೆ ರಾಜಸಂಸ್ಥಾನಕ್ಕೆ ಕೊಡುವ ಗೌರವವನ್ನು ಹಾಗೇ ಉಳಿಸಿಕೊಂಡು ಬರಲಾಗಿತ್ತು. ಏಕೀಕರಣದ ಸಂದರ್ಭದಲ್ಲಿ ಕನ್ನಡ ನಾಡುನುಡಿಯ ಪರಿಕಲ್ಪನೆಯ ಕಿಚ್ಚು ಹರಡಿತ್ತು. ನಂತರದಲ್ಲಿ ನವೆಂಬರ್ 1/ 1973ರಲ್ಲಿ ಡಿ.ದೇವರಾಜ್ ಅರಸುರವರು ಕನರ್ಾಟಕ ಎಂಬ ಹೆಸರನ್ನು ನಾಮಕರಣಗೊಳಿಸಿದರು. ಇದರ ನೆನಪಿನಲ್ಲಿ ಪ್ರತಿವರ್ಷವೂ ಆ ದಿನವನ್ನು ಆಚರಿಸಿ ಸಂಭ್ರಮಿಸುವುದು ಸಾಮಾನ್ಯವಾದರೂ ಕನ್ನಡಿಗರಾದ ನಮ್ಮ ಆದ್ಯ ಕರ್ತವ್ಯವೂ ಹೌದು.
ಕನ್ನಡ ರಾಜ್ಯೋತ್ಸವ ಮುಂತಾದ ಹಲವಾರು ವಿಶೇಷ ದಿನಗಳ ನೆನಪಿನಲ್ಲಿ ನಮಗೆ ಸಕರ್ಾರಿ ರಜೆಗಳು ಇವೆ. ಆದರೆ ಇಂದು ಅವುಗಳ ಮಹತ್ವ ಮರೆತು ಹೋಗಿ ಇನ್ಯಾವುದೋ ಅನಾವಶ್ಯಕ ಕಾರಣಗಳಿಗಾಗಿ ಕಳೆದು ಇದರ ಮಹತ್ವ ಮರೆತು ಹೋಗುತ್ತವೆ. ಕನ್ನಡದ ಏಳಿಗೆ, ನಾಡು, ಭಾಷೆ ಮತ್ತು ಸಾಹಿತ್ಯಕ್ಕೆ ದುಡಿದವರನ್ನು ನಾವು ನೆನಪಿಸಿ ಗೌರವಿಸಿಕೊಂಡು ಬರುತ್ತಿದ್ದರೂ ಇನ್ನೂ ಅದೆಷ್ಟೋ ಪ್ರತಿಭೆಯ ಜನರು ಎಲೆಮರೆಯಾಗಿ ಉಳಿದು ಕೊಂಡು ಬಿಟ್ಟಿದ್ದಾರೆ.
ಸುಮಾರು ನಾಲ್ಕನೆಯ ಶತಮಾನದಿಂದಲೇ ಕನ್ನಡದ ಕುರಿತು ಉಲ್ಲೇಖವಿರುವುದು ಸಾಹಿತ್ಯ ಮತ್ತು ಚರಿತ್ರೆಗಳಲ್ಲಿ ಕಂಡುಬಂದರೂ ನಂತರದಲ್ಲಿ ಬೆಳೆದು ನವೋದಯ, ನವ್ಯ, ಪ್ರಗತಿಶೀಲ, ದಲಿತ-ಬಂಡಾಯ ಮತ್ತು ಸ್ತ್ರೀ ಸಂವೇದನೆಗಳೊಂದಿಗೆ ಹರಡಿ ನಿಂತಿದೆ. ಇಂಗ್ಲೀಷ್ ಎಂಬ ಹೊಸ ನೀರು ಅದೆಲ್ಲಿಂದಲೋ ಕನ್ನಡಕ್ಕೆ ಹರಿದು ಬಂದು ಕನ್ನಡ ಸಾಹಿತ್ಯದಲ್ಲಿ ಬಂದು ಹೊಸ ಸಂಚಲನ ಉಂಟು ಮಾಡಿತು ಆದರೇ ಕಾಲಕ್ರಮೇಣ ಇದರ ಪ್ರಾಭಲ್ಯ ಸಾಹಿತ್ಯ ಮತ್ತು ಭಾಷೆಯ ಮೇಲೆ ಹೆಚ್ಚು ಆವರಿಸಿಕೊಂಡಿತು.
ಆಧುನಿಕ ತಲೆಮಾರುಗಳಾದ ಯುವ ಜನರು ಇಂದು ಮಾತನಾಡುವ ಕನ್ನಡ ಭಾಷೆಯನ್ನು ಗಮನಿಸಿದರೆ ಕಸಿವಿಸಿಯಾಗುತ್ತದೆ. ಇಂದು ನಾವು ಮಾತನಾಡುವ ಕನ್ನಡ ಭಾಷೆಯ ನೂರರಲ್ಲಿ ನಾಲ್ವತ್ತರಿಂದ ಐವತ್ತು ಭಾಗದಷ್ಟು ಇಂಗ್ಲೀಷ್  ಪದಗಳ ಬಳಕೆಯಾಗುತ್ತಿದೆ. ಇದಕ್ಕೆ ನಿದರ್ಶನವೆಂಬಂತೆ ನಮಗೆ ಕಾಣಸಿಕ್ಕುವುದು ಮಾಧ್ಯಮಗಳು. ಇಂದು ದೃಶ್ಯ ಶ್ರವ್ಯ ಮಾಧ್ಯಮಗಳು ತಮ್ಮಲ್ಲಿ ಜನರನ್ನು ಮುಟ್ಟುವ ಸಲುವಾಗಿ ಬಳಸಿಕೊಳ್ಳುವ ಭಾಷೆಯು ಇದಕ್ಕೆ ಉದಾಹರಣೆಯಾಗಿದೆ. ಪ್ರಸಾರ ಮಾಡುವ ಧಾರಾವಾಹಿಗಳಾಗಲೀ ಇತರ ಕಾರ್ಯಕ್ರಮಗಳಾಗಲೀ ಅದು ಜನರಿಗೆ ನೀಡುವ ಸಾಮಾಜಿಕ ಕಳಕಳಿ ಮತ್ತು ಮೌಲ್ಯಗಳು ಇಂದು ಕಡಿಮೆಯಾಗುತ್ತಾ ಬರುತ್ತಿದೆ. ಆಕರ್ಷಣೆಯನ್ನು ಕೇಂದ್ರವಾಗಿರಿಸಿ ತಮ್ಮ ಟಿ.ಆರ್.ಪಿ. ಬೆಲೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಆಸಕ್ತಿ ವಹಿಸುತ್ತಿವೆ. ಮಾಧ್ಯಮವು ಇಂದು ಭಾಷೆಯನ್ನು ಮುಖ್ಯವಾಗಿ ಕನ್ನಡ ಭಾಷೆಯನ್ನು ಶುದ್ಧತೆಯಿಂದ , ಸರಳವಾಗಿ ಇನ್ನೂ ಹೆಚ್ಚಿನ ಎತ್ತರಕ್ಕೆ ಬೆಳೆಸಬಲ್ಲವು. ಅವುಗಳಿಗೆ ಅದರ ಸಾಮಾರ್ಥ್ಯವಿದೆ.
ಭಾಷೆ ಮತ್ತು ಉದ್ಯೋಗಕ್ಕೆ ಇಂದು ಸಂಬಂಧವನ್ನು ಕಲ್ಪಿಸಲಾಗುತ್ತದೆ. ಹಾಗಾಗಿ ಅನ್ಯಭಾಷೆಗಳು ಇಂದು ತಮ್ಮ ಮೂಲ ಭಾಷೆಯನ್ನು ಮರೆಯುವಂತೆ ಮಾಡಿದೆ. ಉದ್ಯೋಗ ಅವಕಾಶಗಳು ಇಂದು ಹೊಟ್ಟೆಪಾಡಿಗಾಗಿ ಅನಿವಾರ್ಯವಾದ ಕಾರಣ ಇದು ಎಲ್ಲರನ್ನು ಆವರಿಸಿಬಿಟ್ಟಿದೆ. ಇದರ ಅರ್ಥ ಇತರ ಭಾಷೆಗಳು ಕೆಟ್ಟದು ನಮ್ಮ ಭಾಷೆ ಉತ್ತಮವೆಂದಾಗಲಿ ಅಲ್ಲ. ನಮ್ಮ ಭಾಷೆಯನ್ನು ಉಳಿಸಿ ಬೆಳೆಸಿ ಇತರ ಭಾಷೆಗಳನ್ನು ಕಲಿತುಕೊಂಡು ಅವುಗಳಲ್ಲಿ ಒಳ್ಳೆಯದನ್ನು ಸ್ವೀಕರಿಸಬೇಕು ಮತ್ತು ಅವುಗಳನ್ನು ನಮ್ಮ ಭಾಷೆಗೆ ಕೊಡುಗೆಯಾಗಿಸಬೇಕು. ಆದರೆ ಅವುಗಳು ನಮ್ಮನ್ನು ಆಳುವಂತಾಗಬಾರದು ನಮ್ಮ ಭಾಷೆ ನಮ್ಮ ಸಂಸ್ಕೃತಿಯನ್ನು ಬೆಳೆಸುವ ಜವಾಬ್ದಾರಿ ನಮಗಿದ.ೆ ಅನ್ಯ ಭಾಷೆಗಳನ್ನು ನಮ್ಮ ಉದ್ಯೋಗ ಮತ್ತು ಜ್ಞಾನಾರ್ಜನೆಗಾಗಿ ಬಳಸಿಕೊಂಡರೆ ಕನ್ನಡವನ್ನು ನಮ್ಮ ಉಸಿರಾಗಿ ಬೆಳೆಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಕನ್ನಡ ರಾಜ್ಯೋತ್ಸವವು ಸಕರ್ಾರಿ ರಜೆಯ ಕಾಲಹರಣದ ದಿನವಾಗಿ ಬಳಸದೆ ಕನ್ನಡಕ್ಕೆ ಒಂದು ಕೊಡುಗೆಯಾಗಿ ಬಳಸಿಕೊಳ್ಳೋಣ. ಕನ್ನಡ ಭಾಷೆಯ ಉಳಿಸುವಿಕೆ ಮತ್ತು ಬೆಳೆಸುವಿಕೆಗೆ ಕಟಿಬದ್ಧರಾಗೋಣ.
ಸಂಪಾದಕ.








ನರಜನ್ಮ

ತನುವೆಂಬ ಮನೆಯಲ್ಲಿ
ಸುಸ್ಥಿರ ನೆಲೆಯೇ ಇಲ್ಲ
ಬಾಡಿಗೆ ಕೊಡುವವರೆಗೆ
ವಾಸವಷ್ಟೆ,,,,,,,

ನಿನ್ನರಾಗ ಭೋಗಕ್ಕಾಗಿ
ಪರರ ಚಿಂತೆ ಬದಿಗಿಟ್ಟಾಗ
ಅಂದುಕೊಂಡ ಭೋಗ ಇಂದು
ಯಾರಿಗಾಯಿತು,,,,,,,

ಅಜ್ಞಾನ ಸುಜ್ಞಾನಗಳ
ಬೇಲಿದಾಟಿ ಹೋಗುವಾಗ
ಹೆತ್ತ ಕರುಳು ಹೊತ್ತ ಧರಣಿ
ಜೊತೆಗೆ ಬಾರದು,,,,,,,

ನಿನ್ನಿಷ್ಟ ಪರರ ಇಷ್ಟ
ಹೊತ್ತುಕೊಂಡು ನಡೆದೆ ನೀನು
ಸತ್ತುಹೋದ ಮೇಲೆ ಇಷ್ಟ
ಬಂದಿತಾವುದು,,,,,,,,


- ಲತೇಶ್.ಯು
ಪ್ರಥಮ ಎಂ.ಎಸ್ಸಿ. 
ಕಂಪ್ಯೂಟರ್ಸಯನ್ಸ್ ವಿಭಾಗ


ನಿನ್ನೊಲವ ನಾ ಹೇಗೆ ಬಣ್ಣಿಸಲಿ
ಕಣ್ಣಿನೊಳಗೆ ಕನಸಾಗಿ, 
ಮನಸಿನೊಳಗೆ ನೆನಪಾಗಿ,
ಹೃದಯದೊಳಗೆ ಪ್ರೀತಿಯ ಹೂವಾಗಿ
ಈ ಜೀವದ ಉಸಿರಾಗಿ 
ಸದಾ ನನ್ನ ಜೊತೆಯಿರುವ

ನನ್ನಮ್ಮ
ಹಾಲುಣಿಸಿ ಮಾತು ಕಲಿಸಿ, ನಡೆಸಿ
ಬಂಗಾರದ ಬದುಕನ್ನು ನೀಡಿದ ಜೀವ
ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಜೀವ
ಕಷ್ಟ ಬಂದರೂ, ನೋವುಂಡರೂ ನಲುಗದ ಜೀವ
ಅವಳೇ ನನ್ನಮ್ಮ
ಕಷ್ಟಗಳು ಬಂದರೂ ಮಕ್ಕಳಿಗಾಗಿ
ಮರುಗುವ
ಸರ್ವಸ್ವವನ್ನೇ ಜೀವನದುದ್ದಕ್ಕೂ
ಧಾರೆಯೆರೆವ
ಎಲೆ ಮರೆಯ ಕಾಯಿಯಂತೆ
ದುಡಿಯುವ
ಅವಳೇ ನನ್ನಮ್ಮ
ದಣಿದು, ಸೋತು ಬಂದಾಗ ಮೈದಡವಿ
ಸಾಂತ್ವನ ನೀಡುವ
ಬಿದ್ದಾಗ ಪೆಟ್ಟು ಕೊಟ್ಟು ನಿಲ್ಲಿಸುವ
ಆರೈಕೆ ಪ್ರೀತಿಕೊಟ್ಟು ಪ್ರತಿಫಲ
ನಿರೀಕ್ಷಿಸದ ಜೀವ 
ಅವಳೇ ನನ್ನಮ್ಮ
ಗಂಡನ ಹುಟ್ಟುಹಬ್ಬಕ್ಕೆ
ಶುಭಾಶಯ ಹೇಳುವ
ಮಕ್ಕಳ ಹುಟ್ಟುಹಬ್ಬಕ್ಕೆ 
ಪಾಯಸ ಮಾಡುವ
ಆ ಬಡಪಾಯಿ ಜೀವದ ಋಣ
ತೀರಿಸಲಾಗುತ್ತದೆಯೇ?
ಅವಳೇ ನನ್ನಮ್ಮ....

-ರಂಜಿತ್
 ಪ್ರಥಮ ಎಂ.ಎ.
 ಕನ್ನಡ ವಿಭಾಗ.

   ಮನೋಧರ್ಮ
ಓ ಗಂಡಸೇ ನೀನೆಂಥಹ ಗಂಡು
ನಿನ್ನದೆಂಥಹ ಮನಸ್ಸು
ನಿನ್ನನ್ನು ನಿನ್ನ ತಾಯಿ ಹಡೆಯಲಿಲ್ಲವೇ?
ನೀನು ತುಂಟಾಟದಿಂದ ಮಾಡಿದ ಚೇಷ್ಟೆಯನ್ನು ಸಹಿಸಲಿಲ್ಲವೇ?
ನೀನು ಕೊಟ್ಟ ಉಪದ್ರದಿಂದ ಬದುಕಲಿಲ್ಲವೇ?
ನಿನ್ನನ್ನು ನಿನ್ನ ತಾಯಿ ಸಾಕಿ ಸಲಹಲಿಲ್ಲವೇ?
ನಿನಗೆ ಬುದ್ಧಿ ಬಂದಾಗ ನಿನ್ನ ತಾಯಿ ಬೇಡವಾದಳೇ?
ಏಕೆ ಮೂಢನ ಹಾಗೆ ವತರ್ಿಸುವೇ?
ಹಿಂದೆ ನಿನ್ನ ತಾಯಿ ನಿನ್ನಲ್ಲಿ ನೀನಾಗಿ ಬದುಕಲಿಲ್ಲವೇ?
ನಿನಗೆ ಸಂಗಾತಿ ಬೇಕೆಂದು
ನೀನು ವಿವಾಹವಾದೆ!
ಎರಡು ವರ್ಷದಲ್ಲಿ ಸಾಕಾಯಿತೆ ಈ ಸಂಸಾರ!
ನಿನ್ನ ಆಸೆಯಿಂದ ದೇವರಂತಹ
ಮಗು ಈ ಜಗತ್ತಿಗೆ ಕಾಲಿಟ್ಟಿತು.
ನೀನು ಮುಗುವಾಗಿದ್ದಾಗ ಮಾಡಿದ
ಚೇಷ್ಟೆಯ ಹಾಗೆ ನಿನ್ನ ಮಗು ಮಾಡಿದಾಗ
ಸಹಿಸಲಾಗುವುದಿಲ್ಲವೇ???
ಏನು ಅರಿಯದ ಮಗು ಮಾಡಿದ
ತಪ್ಪಿಗೆ ಅದಕ್ಕೆ ಕ್ಷಮೆ ಇಲ್ಲವೇ?
ನಿನಗೆ ಸಂಗಾತಿ ಹೇಗೆ ಮುಖ್ಯವೋ
ಹಾಗೆ ನಿನ್ನ ಮಗು ಮುಖ್ಯವಾಗುವುದಿಲ್ಲವೇ?
ಆ ಮಗುವಿನ ಆಟ ಪಾಠ ನಿನಗೆ ಬೇಡವಾಯಿತೆ?
ಏಕೆ ಈ ತಾತ್ಸಾರ!
ಸಂಸಾರದ ಹೊರೆ ಹೊರುವುದು
ನಿನ್ನ ಕರ್ತವ್ಯವಲ್ಲವೇ?
ಸಂಗಾತಿ ಬೇಡ! ಮಗು ಬೇಡ! ತಾಯಿ ಬೇಡ!
ಏಕೆ ಈ ತಿರಸ್ಕಾರ?
ನೀನು ಒಂಟಿಯಾಗಿದ್ದು ಏನು ಸಾಧಿಸುವೆ?
ಏನೂ ಬೇಡವಾದ ನಿನಗೆ
ಏಕೆ ಬೇಕಿತ್ತು ಈ ಸಂಬಂಧ?
ಸಂಬಂಧದ ಬೆಲೆ ಗೊತ್ತಿದೆಯೆ ನಿನಗೆ?
ನಿನ್ನ ವರ್ತನೆಯಿಂದ ನೀನು ಹಾಳಾಗಿ
ನಿನ್ನವರನ್ನೆಲ್ಲಾ ಏಕೆ ಹಾಳು ಮಾಡುವೆ?
ಓ ಗಂಡಸೇ ಬದಲಾಯಿಸಿಕೋ
ನೀ, ನಿನ್ನ ವರ್ತನೆಯನ್ನು
ನಿನ್ನಲ್ಲಿ ನೀನಾಗಿ ಬದುಕು
ಸಾಧಿಸು, ಜಗತ್ತಿನಲ್ಲಿ ಒಬ್ಬನಾಗಿ
ಸುಖದಿಂದ ಬಾಳ್ವೆಯನ್ನು ನಡೆಸು...
                    
                           ಶ್ರುತಿ ಬಿ.ಬಿ.
                           ದ್ವಿತೀಯ ಎಂ. ಎ. ಕನ್ನಡ ವಿಭಾಗ


  ನಿನ್ನ ಪ್ರೇಮದಲ್ಲಿ
ಬರೆದುಕೊಡು ಮುನ್ನುಡಿ
ನನ್ನ ಜೀವನದ ಏಳಿಗೆಗೆ
ನಾಚುತ್ತಿದೆ ಕನ್ನಡಿ
ನೀ ನೋಡುವ ವೇಳೆಗೆ
ಕಣ್ಣಿನ ಕೊಳದಲ್ಲಿ ಈಜುವ
ಮೀನು ನೀನು,
ಎಂದಿಗೂ ನಿನ್ನನ್ನೇ
ಪ್ರೀತಿಸುವ ಪ್ರೇಮಿ ನಾನು...

-     ಡಿ. ಬಿ. ಹಳ್ಳದ
                                      ಪ್ರಥಮ ಎಂ. ಎ. ಕನ್ನಡ.





  ದ್ವೇಷ

ಬೆಳೆಯಿರಿ ಬೆಳೆಸಿರಿ ನಾವು ನಮ್ಮವರ ಜಾತಿ ದ್ವೇಷವನ್ನು ಅಳಿಸಿರಿ. 
ನಾವು ನೀವು ಒಂದೇ ಎಂಬ ಭಾವನೆಯನ್ನು ಬೆಳೆಸಿರಿ
ಎಷ್ಟೋ ಮಾತೆಯರ ಪ್ರೀತಿಯ ಕುಡಿಯದು ಕೊಂದಿತು 
ವಿಧವೆ ಪಟ್ಟಕ್ಕೇರಿದವರ ಹೃದಯ ದುಃಖದಿ ಬೆಂದಿತು
ಎದುರಂಗಡಿಗೆ ಬೆಂಕಿ ಹಚ್ಚುವವರೆಲ್ಲಾ
ಲೂಟಿ ಮಾಡಲು ಜನರು ಕಾದರು ಕೋಮು ಗಲಭೆ ಎದ್ದೋಡನೆ!
ದುಡಿದು ತಿನ್ನುವ ಹೊಟ್ಟೆಗೆ ಸಿಗದಂತಾಯಿತು ಆಹಾರ 
ವೈದ್ಯ ಸಿಗದೆ ರೋಗಿಗಳಿಗೆ ಏನಿದೆ ಹೇಳಪ್ಪ ಆಧಾರ 
ಭಗವದ್ಗೀತೆ ಬೈಬಲ್ ಖುರಾನ್ ಕಲಿಸಿತೆ ಕಾದಾಡಲು?
ಜಾತಿ ಕೇಳಿ ಖಡ್ಗ ಬೀಸಲು ಹೇಳಿತೆ ಧರ್ಮ 
ಸಾಕು ಜಗಳ ಸಾಕು ಗಲಭೆ ಹಿಂಸಾಚಾರವು ನಿಲ್ಲಲಿ
ಜಗದೆಲ್ಲೆಡೆ ಶಾಂತಿ ದೀಪವು ಅಹಿಂಸೆಯ ಪ್ರೀತಿ ಗೆಲ್ಲಲಿ 
ಇದುವೆ ಭಾರತೀಯರ ಶಾಂತಿ ಮಂತ್ರ 
ಜಗವೆಲ್ಲಾ ಬೆಳಗುವ ಜ್ಯೋತಿಯಾಗಲಿ
ಲೋಕೇಶ್ ಕುಂಚಡ್ಕ
ಪ್ರಥಮ ಎಂ.ಎ.
ಕನ್ನಡ ವಿಭಾಗ



 

ಹೆಣ್ಣೇ ನೀನು ದೇವತೆ...!
ಇದು ನಮ್ಮ ಸಂಸ್ಕೃತಿ! ಇದು ನಮ್ಮ ಸಭ್ಯತೆ!
ಇರಲು ಸಾವಿರಾರು ಹಬ್ಬ ಹರಿದಿನಗಳು
ಪ್ರತಿವರುಷ ಬರುವ ಯುಗಾದಿ, ದೀಪಗಳ ಸಾಲಾವಳಿಯ ದೀಪಾವಳಿ
ಹೆಣ್ಣೇ ನೀನು ದೇವತೆ, ಶಕ್ತಿ ಸ್ವರೂಪಿಣಿ ಎನ್ನುವವರೇ,
ಹೆಣ್ಣನ್ನೇ ತುಳಿವರು, ಕೀಳಾಗಿ ಕಾಣುವರು.
ಗೃಹಲಕ್ಷ್ಮೀ ಎನ್ನುವವರು, ಬೆಂಕಿ ಜ್ವಾಲೆಗೆ ತಳ್ಳುವರು.
ಅತ್ಯಾಚಾರ ಮಾಡುವವರು ವ್ಯಭಿಚಾರಿ ಪಟ್ಟಕಟ್ಟುವರು.
ಓ ಹೆಣ್ಣೇ ನೀನೆಂದೂ ತಪ್ಪು ಮಾಡಿಲ ್ಲಎಂದು ಹೇಳುವವರೆ
ಇಲ್ಲಾ..
ಮಾತಾಡಿದರೂ ತಪ್ಪುಎನ್ನುವರು
ಮಾತಾಡದೇ ಮೌನವಾಗಿದ್ದರೂ ತಪ್ಪುಎನ್ನುವರು
ಒಟ್ಟಾರೇ ಈ ಪಾಪಿ ಪ್ರಪಂಚದಲ್ಲಿ ಹೆಣ್ಣಾಗಿ ಹುಟ್ಟಿ ಬದುಕುವುದೇ ಕಷ್ಟವೆನಿಸಿದೆ...
ಈ ರೀತಿಯ ಅನಿಸಿಕೆ ನನಗೆ ಮಾತ್ರವೋ ಅಥವಾ
ಪ್ರಪಂಚದಲ್ಲಿರುವ ಎಲ್ಲಾ ಹೆಣ್ಣಿಗೂ ಅನಿಸುತ್ತಿದೆಯಾ ಎಂಬುದೇ ಅರ್ಥವಾಗುತ್ತಿಲ್ಲ....
ಇದನ್ನೆಲ್ಲಾ ಪ್ರತಿಭಟಿಸಿ, ಧಿಕ್ಕರಿಸಿ ಕೂಗ ಬೇಕೆನಿಸುತ್ತಿದೆ.
ಹೆಣ್ಣಿಗೆ ದೇವತೆಗಳ ಪಟ್ಟಕೊಡಿ
ಅವಳದೇ ಆದ ಸ್ಥಾನ ನೀಡಿ
ಬದುಕಲು ಬಿಡಿ ಎಂದು ಕೂಗುತ್ತೇನೆ.
ಒಂದಲಾ ್ಲಒಂದು ದಿನ ಈ ಕೂಗು ದೇವಲೋಕಕ್ಕೆ ತೆರಳಿ
ನಿಜ ಸಂಸ್ಕೃತಿ ಅರಿವಾಗಿ ನನ್ನ ಜನ್ಮ ಸಾರ್ಥಕವಾಗಬಹುದು....

ಅರ್ಚನಾ ಎಸ್ ಶೆಟ್ಟಿ
ಪ್ರಥಮ ಎಂ.ಎ. 
ಕನ್ನಡ ವಿಭಾಗ

ದೀಪದ ಸ್ಫೂರ್ತಿ
ಅಂಧಕಾರವನ್ನೆಲ್ಲಾ ತನ್ನ ಕೆಳಗೆ ಹಿಡಿದಿಟ್ಟು ಸುತ್ತಲೂ ಬೆಳಕು ಕೊಡುವ ದೀಪವು ಮುಖ್ಯವಾಗಿ ಮಣ್ಣು/ಹಣತೆ, ಎಣ್ಣೆ, ಬತ್ತಿ/ಹತ್ತಿ, ಬೆಂಕಿಪೊಟ್ಟಣ ಮತ್ತು ಜ್ವಾಲೆ ಎಂಬ ಪಂಚ ಮೂಲಭೂತ ವಸ್ತುಗಳೊಂದಿಗೆ ಬೆಳಗುವ ಅಶಾಕಿರಣ. ಅದೇ ದೀಪಾವಳಿ ಶಬ್ದವನ್ನು ಬಿಡಿಸಿ ಬರೆದಾಗ ದೀಪ+ಆವಳಿ ಎಂಬ ಎರಡೂ ಅರ್ಥ ಉದ್ಭವಿಸುವುದು. ದೀಪಗಳ ಸಾಲು ಇವುಗಳ ಒಟ್ಟಿನ ಅರ್ಥ.
ಹದಿನಾಲ್ಕು ವರ್ಷ ವನವಾಸ ಮುಗಿಸಿ ಬಂದ ಅಯೋಧ್ಯೆಯ ಶ್ರೀರಾಮಚಂದ್ರನಿಗೋಸ್ಕರ ಅಲ್ಲಿಯ ಪ್ರಜೆಗಳು ಆರಂಭಿಸಿದ ಈ ಉತ್ಸವ  ಆಚರಣೆಯು ಅಶ್ವಯುಜ ಕೃಷ್ಣ ತ್ರಯೋದಶಿ(ಧನತ್ರಯೋದಶಿ), ಅಶ್ವಯುಜ ಕೃಷ್ಣ ಚತುರ್ದಶಿ(ನರಕ ಚತುರ್ದಶಿ), ಅಮಾವಾಸ್ಯೆ(ಲಕ್ಷ್ಮೀ ಪೂಜೆ) ಮತ್ತು ಕಾತರ್ಿಕ ಶುಕ್ಲ ಪ್ರತಿಪದೆ (ಬಲಿ ಪ್ರತಿಪದೆ) ಎಂದು ಇಂದಿಗೂ ನಾಲ್ಕು ದಿನಗಳ ಕಾಲ ಭಾರತದಾದ್ಯಂತ ವಿಶೇಷವಾಗಿ ಆಚರಿಸಲ್ಪಡುತ್ತಿದೆ. ಶ್ರೀಕೃಷ್ಣನು ಅಸುರೀ ವೃತ್ತಿಯ ನರಕಾಸುರರನ್ನು ವಧಿಸಿ ದೈವಿವಿಚಾರಗಳನ್ನು ಮೂಡಿಸಿ ಸಜ್ಜನ ಶಕ್ತಿಯನ್ನು ಮೆರೆಯುವ ಆಚರಣೆಯು ದೀಪಾವಳಿಯಾಗಿ ರೂಪುಗೊಂಡಿದೆ ಎಂಬ ಗೂಡಾರ್ಥವನ್ನು ಒಳಗೊಂಡಿದೆ.
ಒಟ್ಟಿನಲ್ಲಿ ದೀಪದಂತೆ ಮಾನವನು ತನ್ನಲ್ಲಿರುವ ಅಂಧಕಾರವನ್ನು, ಅಂದರೆ ದುಷ್ಟತನವನ್ನು ಕಡಿಮೆ ಗಾತ್ರಕ್ಕೆ ತಂದು ಒಳ್ಳೆಯ ಆಚಾರ, ವಿಚಾರ, ನಡತೆ ಎಂಬ ಬೆಳಕನ್ನು ನಮ್ಮ ಸುತ್ತಲಿರುವ ಎಲ್ಲರಿಗೂ ನಾವು ಹರಡಿಸುವಂತೆ ಮಾಡುವುದೇ ದೀಪಾವಳಿಯ ನಿಜವಾದ ಆಚರಣೆ ಅಲ್ಲವೇ ಸ್ನೇಹಿತರೇ?

ಆನಂದ್ ಬಿ. ಆರ್.
ದ್ವಿತೀಯ ಎಂ.ಎಸ್ಸಿ
ಯೋಗ ವಿಜ್ಞಾನ ವಿಭಾಗ
ಕೃತಜ್ಞರಾಗೋಣ...ಪ್ರಸನ್ನರಾಗಿರೋಣ!!

"ಶಾಂತಿಯಿರಲಿ,ನೆಮ್ಮದಿಯಿರಲಿ!!" ಇದು ಜಗತ್ತಿನಾದ್ಯಂತ ಪ್ರತಿಯೊಂದು ಜೀವಿಯ ಮನದಾಳದ ಮಾತಾಗಿದೆ. ಇಂತಿರಲು ಪ್ರತಿದಿನ ನನ್ನನ್ನು ಭೇಟಿಯಾಗುವ ಹಿರಿವಯಸ್ಸಿನ ಸರಳ ಜೀವನ ಶೈಲಿಯ ಪ್ರಾಮಾಣಿಕ ವ್ಯಕ್ಕ್ತಿಯೊಬ್ಬರು ಬಂದು ಹೀಗೆ ಹೇಳಿದರು. "ಇವತ್ತು ನನಗೆ ನಮ್ಮ ಬೀದಿಯ ಎರಡೂ ಬದಿಯಲ್ಲಿ ತುಂಬ ದೊಡ್ಡದಾಗಿ ಬೆಳೆದಿದ್ದ ಹಾಳು ಗಿಡಗಳನ್ನು ಕಡಿದು ಸ್ವಲ್ಪ ಸುಸ್ತಾಗಿದೆ" ಅಂದು ಸೂಯರ್ಾಸ್ತದ ಬಳಿಕದ ನಮ್ಮ ಭೇಟಿಯಾದಾಗ ಹೇಳಿ ಮುಗುಳ್ನಕ್ಕಿ ಕೈಕಾಲು ಚಾಚಿ ಮಲಗಿ ಸಂಭಾಷಣೆಯಲ್ಲಿ ತಮ್ಮ ಆನಂದ ಸವಿಯ ತೊಡಗಿದರು.
"ಹಾಯ್! ಊಟ ಆಯಿತ? ಏನಿವತ್ತು?" ಎಂದು ನಾನು ದಿನಂಪ್ರತಿ ಊಟದ ತಟ್ಟೆ ಹಿಡಿದು ನಮ್ಮ ಹಾಸ್ಟೆಲ್ನಲ್ಲಿ ಊಟದ ಕೋಣೆಯೆಡೆಗೆ ಹೋಗುತ್ತಿದ್ದಾಗ ನನ್ನ ಸ್ನೇಹಿತನನ್ನು ಕೇಳಿದಾಗ  "ಅದೇ ಮರಾಯ! ಅದೇ ಅನ್ನ, ಅದೇ ಸಾರು" ಎಂದು ಆತ ಉದಾಸೀನ ಮುಖ ಮಾಡಿ ಪ್ರತಿಕ್ರಿಯಿಸಿದ.
ಮೇಲಿನ ಎರಡು ಸನ್ನಿವೇಶಗಳನ್ನು ವಿವರಿಸಿರುವುದರಲ್ಲಿ ಈ ಲೇಖನದ ಉದ್ದೇಶವೇನೆಂಬುದನ್ನು ತಾವು ಈಗಾಗಲೇ ಮನದಟ್ಟು ಮಾಡಿದ್ದೀರಿ ಎಂಬುದು ನನ್ನ ಭಾವನೆ. ಮೊದಲು ವಿವರಿಸಿದಂತಹ ವ್ಯಕ್ತಿಗಳು ನಮ್ಮನ್ನು ಯಾವತ್ತಾದರೂ, ಎಲ್ಲಿಯಾದರೂ ಭೇಟಿಯಾದರೆ ನಾವೇ ಪುಣ್ಯವಂತರು ಎನಿಸಬೇಕು. ಯಾಕೆಂದರೆ ಕೃತಜ್ಞ ಮನೋಭಾವವುಳ್ಳ ವ್ಯಕ್ತಿಗಳ ಸಂಖ್ಯೆ ಈ ಪ್ರಪಂಚದಲ್ಲಿ ಬಹಳ ಕಡಿಮೆ. ಅವರಿಗೆ ನೂರಾರು ಕೋಟಿ ಸಂಪತ್ತು ಸಿಕ್ಕರೂ ಅವರ ದಾಹ ನೀಗುವುದಿಲ್ಲ, ಕೊನೆಗೆ ಶೇಖರಿಸಿದ ಎಲ್ಲ ಸಂಪತ್ತು ಭೂಮಿಯ ಮೇಲೆಯೇ ಬಿಟ್ಟು ಅವರು ಮಾತ್ರ ಮಾಯವಾಗುತ್ತಾರೆ.
ಕೃತಜ್ಞ ಮನೋಭಾವನೆ ಇರುವವರು ಚಿಲ್ಲರೆ ಕಾಸಿನಲ್ಲೂ ಆನಂದ ಮತ್ತು ತೃಪ್ತಿ ಅನುಭವಿಸುತ್ತಾರೆ ಎಂಬುದು ವಿಶ್ವ ಸೃಷ್ಟಿಕರ್ತನ ನಿಯಮ. "ಇರುವ ಭಾಗ್ಯವ ನೆನೆದು, ಬಾರನೆಂಬುದನ್ನು ಬಿಡು, ಹರುಷಕ್ಕಿದೆ ದಾರಿ" ಎಂದು ಪ್ರಸಿದ್ಧ ಕವಿ ಡಿ.ವಿ.ಜಿ. ಹೇಳಿರುವ ಮಾತು ನಮ್ಮ ಸರಕಾರ ಪ್ರತಿ ಬಸ್ಸಿನಲ್ಲಿ ಅಲಂಕರಿಸಿದರೂ, ಜನರಿಗೆ ಮನದಟ್ಟು ಮಾಡಲು ಪುರುಸೊತ್ತಿಲ್ಲ. ಯಾಕೆಂದರೆ ಅವರು ಇನ್ನು ತಮ್ಮ ಬಾರನೆಂಬುದರ ದಾಹದಿಂದ ಹೊರ ಬಂದಿಲ್ಲ. ಆದ್ದರಿಂದ ಗೆಳೆಯರೇ 'ಕೃತಜ್ಞರಾಗೋಣ, ಪ್ರಸನ್ನನಾಗಿರೋಣ!!'
ಮುಹಮ್ಮದ್ ಸೈಫುಲ್ಲಾಹ್
ದ್ವಿತೀಯ ಎಂ.ಎ., ಇಂಗ್ಲೀಷ್   

ಆಕಾಶಕ್ಕೆ - ಆಕಾಶವೇ ಸಾಟಿ
'ಆಕಾಶ' ಎಂಬ ಈ ಮೂರು ಅಕ್ಷರದಲ್ಲಿ ಅಡಗಿರುವ ಅರ್ಥ ವಿಸ್ಮಯ ಅದ್ಭುತ. 'ಆಕಾಶಕ್ಕೆ-ಆಕಾಶವೇ ಸಾಟಿ'. ನಾನು ಬಾಲ್ಯದಿಂದ ಬೆರಗು ಕಣ್ಣಿನಿಂದ ನೋಡಿದ ಮಾಯ ಲೋಕವೇ ಈ ಆಕಾಶ. ನನ್ನ ನೆನಪುಗಳನ್ನು ಮತ್ತೆ ಮತ್ತೆ ಮರುಕಳಿಸುವಂತೆ ಮಾಡಿರುವುದೇ ಈ ಆಕಾಶ. ಬಾನಿನಲ್ಲಿ ಇರುವ ಚಂದ್ರ ನಕ್ಷತ್ರ ಸೂರ್ಯ ಇವುಗಳನ್ನು ನೋಡಿ ಆಶ್ಚರ್ಯದಿಂದ ನನ್ನಲ್ಲಿಯೇ ನನ್ನನ್ನು ಪ್ರಶ್ನೆ ಮಾಡಿಕೊಂಡಿರುವುದಿದೆ. ಮೋಡದೊಂದಿಗೆ ಓಡುವಂತೆ ಕಾಣುವ ಚಂದ್ರನ ಆ ಕಣ್ಣಾಮುಚ್ಚಾಲೆ ಆಟವನ್ನು ಕಂಡು ನಮ್ಮಂತೆಯೇ ಚಂದ್ರನೂ ಆಟವಾಡುತ್ತಾನೆ ಎಂದುಕೊಂಡ ಬಾಲ್ಯ ನನ್ನದು. ರಾತ್ರಿಯ ಹೊತ್ತು ಸಾವಿರ ಸಾವಿರ ಹಣತೆಯನ್ನು ಯಾರೋ.. ಆಕಾಶದಲ್ಲಿ ತೇಲಿಬಿಟ್ಟಿದ್ದಾರೆ ಎಂಬಂತೆ ಕಾಣುವ ತಾರೆಗಳು ಫಳ ಫಳನೇ ಹೊಳೆಯುತ್ತದೆ. ಬಾನಿನ ಅಲಂಕಾರವನ್ನು ಮೀರಿಸಲು ಮಾನವನಿಗೆ ಸಾಧ್ಯವೇ? ತಾರೆಗಳನ್ನು ಎಣಿಸುತ್ತಾ ಎಣಿಸುತ್ತಾ ಸೋತ ಕೈ ನನ್ನದು. ಆದರೆ ಇಂದಿನ ಆಧುನಿಕ ಮಕ್ಕಳು  ಕಾಂಕ್ರಿಟ್ ಕತ್ತಡದಿಂದಾಗಿ ಬಾಲ್ಯದ ಆಕಾಶವೆಂಬ ಮಾಯ ಪ್ರಪಂಚದಿಂದ ವಂಚಿತರಾಗಿದ್ದಾರೆ. ಬಿಸಿಲಿನ ಸಂದರ್ಭದಲ್ಲಿ ಕಾಣುವ ಬಿಳಿಯ ಮೋಡಗಳು ಒಂದು ಭಾರಿ ಕುದುರೆಯಾಗಿ, ಇನ್ನೊಮ್ಮೆ  ಸಮುದ್ರ, ಮರ ಮತ್ತಾವುದೋ ಆಕರಗಳನ್ನು ಪಡೆಯುವ ಪರಿ ನಮ್ಮ ಕಲ್ಪನೆಗೆ ನಿಲುಕದ್ದು. ಬಾಲ್ಯದಲ್ಲಿ ಕರೆಂಟ್ ಹೋದಾಗ ಮನೆ ಜಗಲಿಯಲ್ಲಿ ಆಕಾಶವನ್ನು ನೋಡಿಕೊಂಡು ಪಟ್ಟಾಂಗ ಹೊಡೆಯುವ ನೆನಪುಗಳು ಇಂದು ಕೇವಲ ನೆನಪಾಗಿಯೇ ಉಳಿದಿದೆ. ಅದೆಷ್ಟೋ  ಸಂಬಂಧಗಳ ಛಾಯೆಗಳನ್ನು ಗಟ್ಟಿಗೊಳಿಸಲು ಸಹಾಯ ಈ ಆಕಾಶ ಎಂದು ನನ್ನ ನಿಲುವು. ಇದು ಒಂದು ಕಡೆಗೆ ಮಾತ್ರ ವ್ಯಾಪಿಸದೆ  ಎಲ್ಲೆಲ್ಲೋ ಸರ್ವ ವ್ಯಾಪಿಯಾಗಿದೆ. ಚಂದ್ರ- ಸೂರ್ಯ ಒಂದೇ ಇದ್ದರೂ ಯಾವುದೇ ಸ್ಥಳದಲ್ಲಿ ನೋಡಿದರೂ ಚಂದ್ರ ಸೂರ್ಯ ಕಂಡೆ ಕಾಣುತ್ತಾರೆ. ಇದುವೇ ಪ್ರಕೃತಿಯ ಮಾಯೆ. ದೇವರ ಸೃಷ್ಟಿಯ ಕೌಶಲ್ಯ ಪ್ರತಿಭೆ ಆಕಾಶವನ್ನು ಹಾಳು ಮಾಡದೆ ಸೂರ್ಯ ಚಂದ್ರರಿಗೆ ಕೋಪಬರದಂತೆ ನಮ್ಮ ಪ್ರಕೃತಿಯನ್ನು ಕಾಪಾಡೋಣ. 'ಆಕಾಶ' ಎಂಬ ಮಾಯೆಯನ್ನು ಪ್ರೀತಿಯಿಂದ ಸವಿಯೋಣ. 'ಆಕಾಶಕ್ಕೆ ಏಣಿ ನಿಮರ್ಿಸುವ ಹರಸಾಹಸವನ್ನು ಬಿಟ್ಟು ಬಿಡೋಣ'.

ಯತೀಶ್
 ದ್ವಿತೀಯ ಎಂ.ಎ. 
ಕನ್ನಡ ವಿಭಾಗ 

ಸ್ನೇಹ

ಸ್ನೇಹ ಎಂಬುದು ಒಂದು ಮಧುರವಾದ ಭಾವನೆ. ಅದನ್ನು ಮಾತಿನಲ್ಲಿ ವಿವರಿಸಲು ಸಾಧ್ಯವಿಲ್ಲ. ನಮ್ಮ ಜೀವನದಲ್ಲಿ ಸ್ನೇಹಕ್ಕೆ ಒಂದು ಮಹತ್ವದ ಸ್ಥಾನವನ್ನೇ ನಾವು ನೀಡಿದ್ದೇವೆ. ನಾವು ಹೆಚ್ಚಾಗಿ ಗೆಳೆಯರ ಸಾನಿಧ್ಯವನ್ನು ಬಯಸುತ್ತೇವೆ. ಅವರೊಂದಿಗೆ ಎಲ್ಲಾ ವಿಷಯಗಳನ್ನು ಹಂಚಿಕೊಂಡು ನಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳುತ್ತೇವೆ. ಸ್ನೇಹವು ಎಲ್ಲರ ಮನಸ್ಸಲ್ಲೂ ತನ್ನದೇ ಆದ ಒಂದು ಸ್ಥಾನವನ್ನು ಪಡೆದುಕೊಂಡಿದೆ. ಮುಂಜಾನೆಯ ವಾಕಿಂಗ್ ಹೋದಾಗ, ಸಂಜೆಯ ವಾಯುವಿಹಾರಕ್ಕೆ ಹೊರಟಾಗ ನಮ್ಮೊಂದಿಗೆ ಗೆಳೆಯರು ಇರಬೇಕು. ಅವರೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತಾ ಯಾರನ್ನಾದರೂ ರೇಗಿಸುತ್ತಾ ಕಾಲಹರಣ ಮಾಡಲು ನಮಗೆ ಬಹಳ ಖುಷಿ. ಬೆಳಗ್ಗೆ ಕಾಲೇಜಿಗೆ ಹೋಗುವಾಗಲೂ, ಸಂಜೆ ಮನೆಗೆ ಮರಳುವಾಗಲೂ ನಮ್ಮೊಂದಿಗೆ ಗೆಳೆಯರಿರಬೇಕು. ಇಂತಹ ಮಧುರವಾದ ಸಂದರ್ಭಗಳನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಗೆಳೆಯರೊಂದಿಗೆ ಐಸ್ ಕ್ರೀಂ ಪಾರ್ಲರಿಗೆ ಹೋದಾಗ ಅಥವಾ ಹೊಟೇಲಿಗೆ ಹೋಗಿ ತಮಗೆ ಇಷ್ಟವಾದ ತಿನಿಸುಗಳನ್ನು ತರಿಸಿ ಹಂಚಿ ತಿನ್ನುವುದರಲ್ಲಿ ಏನೋ ಒಂದು ಸಂತೋಷ. ಮನೆಯ ಸದಸ್ಯರೊಂದಿಗೆ ಹೇಳಿಕೊಳ್ಳಲಾಗದಂತಹ ವಿಷಯಗಳನ್ನು ಗೆಳೆಯರೊಂದಿಗೆ ಫ್ರೀಯಾಗಿ ಹೇಳಿಕೊಳ್ಳಬಹುದು. ನಮ್ಮ ಜನ್ಮದಿನ ಬಂದಾಗ ಗೆಳೆಯರಿಗೆ ಪಾಟರ್ಿ ನೀಡುವುದು, ಸಿಹಿತಿಂಡಿಗಳನ್ನು ಹಂಚಿ ಹಣವನ್ನು ನೀರಿನಂತೆ ಪೋಲು ಮಾಡಲು ಯಾವುದೇ ಬೇಸರವಿರುವುದಿಲ್ಲ. ಗೆಳೆಯರೊಂದಿಗೆ ಸ್ನೇಹ ಸಂಬಂಧ ಗಟ್ಟಿಯಾಗಿದ್ದರೆ, ಪ್ರೀತಿ, ವಿಶ್ವಾಸ ಎಂಬ ಸರಪಳಿಯಿಂದ ಬಂಧಿಯಾಗಿದ್ದರೆ ಅದನ್ನು ಯಾರಿಂದಲೂ ಒಡೆಯಲು ಸಾಧ್ಯವಿಲ್ಲ.
ಕ್ಲಾಸಿನಲ್ಲಿ ಪಾಠ ಮಾಡುತ್ತಿರುವಾಗ ಪಿಸುದನಿಯಲ್ಲಿ ಸ್ನೇಹಿತರೊಂದಿಗೆ ಮಾತನಾಡುವಾಗ ಅಧ್ಯಾಪಕರಿಂದ ಬೈಸಿಕೊಳ್ಳುವುದು ಮರೆಯಲಾಗದ ನೆನಪು. ಸ್ಪೆಷಲ್ ಕ್ಲಾಸ್ ಇದೆಯೆಂದು ಹೇಳಿ ರಜಾದಿನಗಳಲ್ಲಿ ಗೆಳೆಯರೊಂದಿಗೆ ತಿರುಗಾಡಲು ಹೋಗಿ, ಅದು ಮನೆಯಲ್ಲಿ ಗೊತ್ತಾಗಿ ಅಪ್ಪ ಅಮ್ಮನಿಂದ ಬೈಸಿಕೊಂಡ ಸಂದರ್ಭಗಳು ಹಲವು. ಕಾಲೇಜುಗಳಲ್ಲಿ ಪ್ರೀತಿ ಮೊಳೆತಾಗ ಮೊದಲು ನಾವು ಹೇಳಿಕೊಳ್ಳುವುದು ನಮ್ಮ ಆಪ್ತ ಸ್ನೇಹಿತರಲ್ಲಿ, ಅದೇ ರೀತಿ ಪ್ರೀತಿ ಒಡೆದಾಗ ಆ ವೇದನೆಯನ್ನು ಹೇಳಿಕೊಳ್ಳುವುದು ನಮ್ಮ ಆಪ್ತರಲ್ಲಿಯೇ. ಮನೆಕೆಲಸ ಮಾಡದಿದ್ದಾಗ, ಅಸೈನ್ಮೆಂಟ್ಸ್ ಬರೆಯದಿದ್ದಾಗ ನಮಗೆ ಸಹಾಯ ಮಾಡಲು ಇರುವವರು ನಮ್ಮ ಸ್ನೇಹಿತರೇ ಹೀಗೆ ಒಂದಲ್ಲ ಒಂದು ಕಾರಣಕ್ಕೆ ನಾವು ಸದಾ ನಮ್ಮ ಸ್ನೇಹಿತರನ್ನು ಅವಲಂಬಿಸಿರುತ್ತೇವೆ. ಸ್ನೇಹಕ್ಕೆ ಯಾವುದೇ ವಯಸ್ಸಿನ ನಿರ್ಬಂಧವಿಲ್ಲ. ಹಿರಿಯರು- ಕಿರಿಯರು, ಶ್ರೀಮಂತ-ಬಡವ, ಗಂಡು-ಹೆಣ್ಣು ಎಂಬ ಯಾವುದೇ ಭೇದವಿಲ್ಲ.
ಸಂತೋಷವಾದಾಗಲೂ ದುಃಖವಾದಾಗಲೂ ನಾವು ಮೊದಲು ಗೆಳೆಯರಲ್ಲಿ ಅದನ್ನು ಹೇಳಿಕೊಳ್ಳಲು ಇಚ್ಛಿಸುತ್ತೇವೆ. ನಮಗೆ ಸ್ನೇಹಿತರು ಹಲವರು ಇರಬಹುದು ಆದರೆ, ನಮ್ಮ ಎಲ್ಲಾ ವಿಷಯಗಳನ್ನು ಎಲ್ಲರಲ್ಲೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ನಾವು ನಮಗೆ ಆಪ್ತರೆನಿಸಿದ ಒಬ್ಬರು ಅಥವಾ ಇಬ್ಬರಲ್ಲಿ ಮಾತ್ರ ನಮ್ಮ ಎಲ್ಲಾ ಭಾವನೆಗಳನ್ನು ಹಂಚಿಕೊಳ್ಳುತ್ತೇವೆ. ಸ್ನೇಹಿತರನ್ನು ಆರಿಸಿಕೊಳ್ಳುವಾಗ ನಾವು ತುಂಬ ಜಾಗೃತರಾಗಿರಬೇಕು. ಸ್ನೇಹಿತ ವರ್ಗದಲ್ಲೂ ಮೋಸ- ಕಪಟ ಮಾಡುವವರು ಇರುತ್ತಾರೆ. ಆದಷ್ಟು ಅವರಿಂದ ದೂರವಿರಲು ಪ್ರಯತ್ನಿಸಬೇಕು. ಈಗಿನ ಕಾಲದಲ್ಲಂತೂ ಒಬ್ಬ ಒಳ್ಳೆಯ ಸ್ನೇಹಿತೆ/ಸ್ನೇಹಿತನನ್ನು ಪಡೆಯಲು ತುಂಬಾ ಕಷ್ಟ. ನಮ್ಮ ಆಪ್ತ ಸ್ನೇಹಿತರಲ್ಲಿ ನಾವು ತುಂಬಾ ನಂಬಿಕೆ ವಿಶ್ವಾಸವನ್ನು ಇಟ್ಟಿರುತ್ತೇವೆ. ಅದಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದು ನಮ್ಮ ಕರ್ತವ್ಯ. ನಮ್ಮ ಜೀವನದುದ್ದಕ್ಕೂ ನಾವು ಸ್ನೇಹಿತರನ್ನು ಬಯಸುತ್ತಲೇ ಇರುತ್ತೇವೆ. ನಾಲ್ಕಾರು ಜನರಿಲ್ಲದಿದ್ದರೂ ಅಟ್ಲೀಸ್ಟ್ ಒಬ್ಬ. ಸ್ನೇಹಿತೆ/ಸ್ನೇಹಿತನಾದರೂ ನಮಗಿರಲೇ ಬೇಕು.

ಚೇತನಾ. ಎಚ್. ಆರ್.
ಪ್ರಥಮ ಎಂ. ಎ. 
ಕನ್ನಡ ವಿಭಾಗ

  ಬಿತ್ತಿ ವಿಶೇಷಾಂಕ 2017