1/21/15

ವಂಚನೆ
ಹನಿ ಹನಿಯಾಗಿ ಸುರಿದೆ, ಜೇನ ಮಳೆಯಂತೆ
ಕನಸು ಕಂಗಳಿಗೆ ನಿನ್ನೊಲುಮೆಯ ಧಾರೆಯ
ಹರೆಯದ ಮುಗ್ಧ ಮನಸಿಗೇನು ಗೊತ್ತು
ನೀನೊಂದು ಹಜ್ಜೇನೆಂದು
ಅಲೆ ಅಲೆಯಾಗಿ ತೇಲಿ ಬಂದೆ 
ನನ್ನೊಳಗೆ ತಂಗಾಳಿಯಂತೆ 
ಬಾಳೆಂಬ ಬೆಳದಿಂಗಳಲಿ
ಬೆಳಕ ಚೆಲ್ಲಿ ಮರೆಯಾದೆ
ಕೋಲ್ಮಿಂಚಿನಂತೆ
ಮುತ್ತಿನ ಸುರಿಮಳೆ
ನಿನ್ನೊಲುಮೆಯಾ... ಸವಿಕನಸಿಗೆ
ಅರಳಿದೆ ಆಸೆಯ ಹೊಂಗನಸು
ತಡಕಾಡುತಿದೆ ಕೈ ಜಾರಿದ... ಪ್ರೀತಿಗಾಗಿ 
ಜಯಶ್ರೀ ದಿನೇಶ್
ಆರೋಗ್ಯ ಕೇಂದ್ರ ಮಂಗಳೂರು ವಿ.ವಿ

No comments:

Post a Comment

  ಬಿತ್ತಿ ವಿಶೇಷಾಂಕ 2017