1/21/15

ನರಜನ್ಮ

ತನುವೆಂಬ ಮನೆಯಲ್ಲಿ
ಸುಸ್ಥಿರ ನೆಲೆಯೇ ಇಲ್ಲ
ಬಾಡಿಗೆ ಕೊಡುವವರೆಗೆ
ವಾಸವಷ್ಟೆ,,,,,,,

ನಿನ್ನರಾಗ ಭೋಗಕ್ಕಾಗಿ
ಪರರ ಚಿಂತೆ ಬದಿಗಿಟ್ಟಾಗ
ಅಂದುಕೊಂಡ ಭೋಗ ಇಂದು
ಯಾರಿಗಾಯಿತು,,,,,,,

ಅಜ್ಞಾನ ಸುಜ್ಞಾನಗಳ
ಬೇಲಿದಾಟಿ ಹೋಗುವಾಗ
ಹೆತ್ತ ಕರುಳು ಹೊತ್ತ ಧರಣಿ
ಜೊತೆಗೆ ಬಾರದು,,,,,,,

ನಿನ್ನಿಷ್ಟ ಪರರ ಇಷ್ಟ
ಹೊತ್ತುಕೊಂಡು ನಡೆದೆ ನೀನು
ಸತ್ತುಹೋದ ಮೇಲೆ ಇಷ್ಟ
ಬಂದಿತಾವುದು,,,,,,,,


- ಲತೇಶ್.ಯು
ಪ್ರಥಮ ಎಂ.ಎಸ್ಸಿ. 
ಕಂಪ್ಯೂಟರ್ಸಯನ್ಸ್ ವಿಭಾಗ


No comments:

Post a Comment

  ಬಿತ್ತಿ ವಿಶೇಷಾಂಕ 2017