ದ್ವೇಷ
ಬೆಳೆಯಿರಿ ಬೆಳೆಸಿರಿ ನಾವು ನಮ್ಮವರ ಜಾತಿ ದ್ವೇಷವನ್ನು ಅಳಿಸಿರಿ.
ನಾವು ನೀವು ಒಂದೇ ಎಂಬ ಭಾವನೆಯನ್ನು ಬೆಳೆಸಿರಿ
ಎಷ್ಟೋ ಮಾತೆಯರ ಪ್ರೀತಿಯ ಕುಡಿಯದು ಕೊಂದಿತು
ವಿಧವೆ ಪಟ್ಟಕ್ಕೇರಿದವರ ಹೃದಯ ದುಃಖದಿ ಬೆಂದಿತು
ಎದುರಂಗಡಿಗೆ ಬೆಂಕಿ ಹಚ್ಚುವವರೆಲ್ಲಾ
ಲೂಟಿ ಮಾಡಲು ಜನರು ಕಾದರು ಕೋಮು ಗಲಭೆ ಎದ್ದೋಡನೆ!
ದುಡಿದು ತಿನ್ನುವ ಹೊಟ್ಟೆಗೆ ಸಿಗದಂತಾಯಿತು ಆಹಾರ
ವೈದ್ಯ ಸಿಗದೆ ರೋಗಿಗಳಿಗೆ ಏನಿದೆ ಹೇಳಪ್ಪ ಆಧಾರ
ಭಗವದ್ಗೀತೆ ಬೈಬಲ್ ಖುರಾನ್ ಕಲಿಸಿತೆ ಕಾದಾಡಲು?
ಜಾತಿ ಕೇಳಿ ಖಡ್ಗ ಬೀಸಲು ಹೇಳಿತೆ ಧರ್ಮ
ಸಾಕು ಜಗಳ ಸಾಕು ಗಲಭೆ ಹಿಂಸಾಚಾರವು ನಿಲ್ಲಲಿ
ಜಗದೆಲ್ಲೆಡೆ ಶಾಂತಿ ದೀಪವು ಅಹಿಂಸೆಯ ಪ್ರೀತಿ ಗೆಲ್ಲಲಿ
ಇದುವೆ ಭಾರತೀಯರ ಶಾಂತಿ ಮಂತ್ರ
ಜಗವೆಲ್ಲಾ ಬೆಳಗುವ ಜ್ಯೋತಿಯಾಗಲಿ
ಲೋಕೇಶ್ ಕುಂಚಡ್ಕ
ಪ್ರಥಮ ಎಂ.ಎ.
ಕನ್ನಡ ವಿಭಾಗ
No comments:
Post a Comment