ದಾನ
ಧರ್ಮ ಶಾಸ್ತ್ರದಲ್ಲಿ ಹೇಳಿದೆ
ದಾನದಲ್ಲಿ ಶ್ರೇಷ್ಠ ಅನ್ನದಾನ
ಸಂವಿಧಾನದಲ್ಲಿ ಬರೆದಿದೆ
ಪ್ರಜಾಪ್ರಭುತ್ವದಲ್ಲಿ ಮತದಾನ
ಮನಃಶಾಸ್ತ್ರದಲ್ಲಿ ತಿಳಿಸಿದೆ
ಮನುಷ್ಯನ ಬುದ್ಧಿಗೆ ಸಮಾಧಾನ
ಲೋಕೇಶ್ ಕುಂಚಡ್ಕ
ಪ್ರಥಮ ಎಂ.ಎ.
ಕನ್ನಡ ವಿಭಾಗ
ಚುಟುಕುಗಳು
ನನ್ನವಳು
ಊಟದಲ್ಲಿದ್ದಂತೆ ಹೋಳಿಗೆ
ನೀನು ನನ್ನ ಬಾಳಿಗೆ ಎನ್ನದಿದ್ದರೆ,
ಹಬ್ಬಕ್ಕೆ ಮಾಡಿಟ್ಟ ಹೋಳಿಗೆ
ಬಡಿಸುವುದೇ ಇಲ್ಲ ಅವಳು ನನ್ನ ಬಾಳೆಗೆ..
ಹಗುರ - ಭಾರ
ಕೆಲವೊಮ್ಮೆ ಹಗುರ ವಿಚಾರಗಳೂ
ಅನಿಸುತ್ತವೆ ಬಲು ಭಾರ
ಪರ್ವತವನ್ನೇರಿ ಕುಳಿತವನು
ಸೂಜಿಯ ಮೇಲೆ ಕೂರಲಾರ
ಪ್ರಾಣಿಪ್ರಿಯ !
ಪ್ರಾಣಿಗಳು ಅವನ
ಪ್ರೀತಿಗೆ ಪಾತ್ರ
ಆದರೆ ಅವುಗಳು
ಸತ್ತು ಹೋಗಿದ್ದರೆ ಮಾತ್ರ...!
ರಾತ್ರಿಯ ನಲ್ಲೆ
ರಾತ್ರಿ ಹಾಡು ಹಾಡುತ್ತಾ,
ಕೆನ್ನೆಗೆ ಮುತ್ತಿಕ್ಕುವ ನಲ್ಲೆ...
ಅಪಾರ್ಥ ಮಾಡ್ಕೋಬೇಡಿ ಸ್ವಾಮಿ
ಅದು ಹೆಣ್ಣು ಸೊಳ್ಳೆ....!!!
ವಿಶ್ವನಾಥ್. ಎನ್.
ಪ್ರಥಮ ಎಂ. ಎ. ಕನ್ನಡ
No comments:
Post a Comment