9/23/14

ಅನುಭವ


ಜೀವನವು ಅನುಭವದ ಮೂಟೆ
ಭಾರವೆಲ್ಲವೂ ಮನಸ್ಸಿನೊಳಗೆ
ನಗುವೊಂದು ಹೊರಹೊಮ್ಮುವುದು
ಮರುಭೂಮಿಯಲ್ಲಿರುವ ನೀರಿನಂತೆ

ಅನೇಕ ತಿರುವುಗಳು ಈ ಪಯಣದಲ್ಲಿ
ಬಾಲ್ಯ ಯೌವ್ವನ ಮುಪ್ಪುಗಳು
ಅದರಾಚೆಗಿರುವುದು ಸಾವು
ಯಾರು ತಿಳಿಯದ ಪ್ರಪಂಚವು

ಬಾಲ್ಯದಲ್ಲಿ ನಾವೇನೆಂದು ತಿಳಿಯದು
ಆಟ-ಪಾಠಗಳ ಕೂಟಗಳ ಸಮ್ಮಿಲನ
ಮುಗ್ದ ಮನಸ್ಸು ಭೇದ ಭಾವವಿಲ್ಲದೆ
ಎಲ್ಲರ ಜೊತೆಗೂಡಿ ಇರುವೆವು

ನಂತರ ಬರುವ ಯೌವ್ವನವು
ಅದು ಗೊಂದಲದ ಗೂಡಾಗಿಹುದು
ಮನಸ್ಸು ಜಾರಿದರೆ ಆಯಿತು,
ಜೀವನದ ಕನ್ನಡಿ ಚೂರು-ಚೂರು

ಈ ಜೀವನದಲ್ಲಿ ಬಂದೆ ಗೆಳತಿ ನೀನು
ನಿನ್ನಿಂದ ಕಲಿತೆ ನಾನು ಬದುಕಿನ ಅರ್ಥವ
ನೈಜ ಅನುಭವವು ನಿನ್ನದು....
ಅದ ಕೇಳುವ ಕಿವಿಗಳು ನಮ್ಮದು

ನಂತರ ಮುಪ್ಪಿನ ಕಾಲವು,
ಮಕ್ಕಳಾಟ ಯೌವ್ವನದ ಸವಿನೆನಪು...
ಮೆಲುಕುಹಾಕುವ ಸುವರ್ಣ ವೇದಿಕೆ..
ಕೊನೆಗೆ ಜೀವನ ಹೆಸರಿಲ್ಲದ ಅಂತ್ಯ.

ಪ್ರಭಾಶ್ರೀ ,ದ್ವಿತೀಯ ಎಂ.ಎಸ್ಸಿ.
ರಾಸಾಯನ ಶಾಸ್ತ್ರ





No comments:

Post a Comment

  ಬಿತ್ತಿ ವಿಶೇಷಾಂಕ 2017