10/17/14

ಸಮಾಜಶಾಸ್ತ್ರಕ್ಕೆ ಸಾಮಾಜಿಕ ಬೆಳವಣಿಗೆಯ ದೃಷ್ಠಿ ಅಗತ್ಯ

ಮಂಗಳಗಂಗೋತ್ರಿ ; ಸಮಾಜಶಾಸ್ತ್ರವು ಶುಷ್ಕ ಪಠ್ಯ ವಿಷಯವಾಗದೆ ಅದನ್ನು ಸಮಾಜದ ಬೆಳವಣಿಗೆಯ ದೃಷ್ಠಿಯಿಂದ ಅದ್ಯಯನ ಮಾಡಬೇಕು.ಈ ಸಾಮಾಜಿಕ ಪ್ರೀತಿಯ ದಾರಿಯ ಮೂಲಕ ಮಾತ್ರ ಸಾಮಾಜಿಕ ಬೆಳವಣಗೆ ಸಾದ್ಯ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ತ ಪ್ರೊ. ಗುರುಲಿಂಗಯ್ಯ ಅವರು ಅಭಿಪ್ರಾಯ ಪಟ್ಟರು.ಅವರು ಶುಕ್ರವಾರದಂದು ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ನಡೆಸುತ್ತಿರುವ ಸಮಾಜಶಾಸ್ತ್ರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜಶಾಸ್ತ್ರಕ್ಕೆ ಸಾಮಾಜಿಕ ಬೆಳವಣಿಗೆಯ ದೃಷ್ಠಿ ಅಗತ್ಯವಾಗಿದೆ. ಇದರ ಮೂಲಕ ಸಮಾಜವನ್ನು ನಾವು ಪ್ರೀತಿಸಬೇಕು.     ಸಮಾಜಶಾಸ್ತ್ರವನ್ನು ಅಭ್ಯಾಸಿಸುವವರು ಸಮಾಜವನ್ನು ಪ್ರೀತಿಸಿದರೆ ಮಾತ್ರವೆ ಅದರ ಬೆಳವಣಿಗೆ ಸಾದ್ಯ ಎಂದು ಅವರು ಹೇಳಿದರು.ವಿದ್ಯಾಥರ್ಿಗಳಿಗೆ ಸಾಮಾಜಿಕ ಜವಾಬ್ದರಿಯಿದ್ದು ಸಾಮಾಜಿಕ ಬೆಳವಣಿಗೆಯ ದೃಷ್ಠಿಯಿಂದ  ಕರ್ತವ್ಯ ನಿರತರಾಗಬೇಕು.ಸಮಾಜವನ್ನು ಪ್ರೀತಿಸುವುದರ ಜತೆಗೆ ಸೇವೆಯ ಮೂಲಕ ಅದರ ಬೆಳವಣಿಗೆಗೆ ಕಟಿಬದ್ದರಾಗಬೇಕು ಎಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ತ ಪ್ರೊ.ಜೋಗನ್ ಶಂಕರ್ ರವರು ವಹಿಸಿದ್ದರು. ವೇದಿಕೆಯಲ್ಲಿ  ಅತಿಥಿ ಮೈಸೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ತೆ ಪ್ರೊ. ಯಶೋಧ ಹಾಗು ಡಾ. ವಿನಯ್ರಜತ್, ಡಾ. ಗೋವಿಂದ್ರಾಜ್ ಮತ್ತು ಸಬಿತಾ ಉಪಸ್ಥಿತರಿದ್ದರು. ದಿವ್ಯಕುಮಾರಿ ಸ್ವಾಗತಿಸಿ ರಶ್ಮಿತ ವಂದಿಸಿದರು. ರಶ್ಮಿ ಕಾರ್ಯಕ್ರಮ ನಿರೂಪಿಸಿದರು.


ಕುಮಾರ .ಕೆ.ಎಸ್
ದ್ವಿತೀಯ ಎಂ.ಎ.ಸಮಾಜ ಶಾಸ್ತ್ರ ವಿಭಾಗ

No comments:

Post a Comment

  ಬಿತ್ತಿ ವಿಶೇಷಾಂಕ 2017