9/23/14


ಅಂತರ್ಜಾಲ ಚಿತ್ರ

ಮನಸ್ಸು

ಭಾವನೆಗಳ ಮೃದು ಮಧುರ ತಾಣ
ಕನಸುಗಳ ಸುಂದರ ಲೋಕ ಮನಸ್ಸು
ಹೂವಿನಂತೆ ಅರಳುವುದು
ಸಂತೋಷದಿ ಬಿರಿಯುತಿರುವುದು
ಹತೋಟಿಯಲ್ಲಿರದೆ ಒಂದೊಮ್ಮೆ ಈ ಮನಸ್ಸು
ಹುಚ್ಚು ಕುದುರೆಯಂತೆ ಓಡುವುದು,
ಈ ಮನಸ್ಸಿಗೆ ಕಡಿವಾಣ ಹಾಕಲಾಗದೆ
ಎಲ್ಲಿಯೋ ಕೈ ಜಾರಿ ಹೋಗುವುದು.
ಮನಸ್ಸೆಂಬ ಕನ್ನಡಿಯು ದುಃಖದ
ತೆರೆಗೆ ಬಡಿದು ಒಡೆದು ಹೋಗಬಾರದು
ಓಡುವ ಮನಸ್ಸನ್ನು ಹಿಡಿವ
ಸಾಹಸದಿ ಅದನ್ನು ಕಳೆದುಕೊಳ್ಳಬಾರದು.
ಮನಸ್ಸು ಬದುಕೆಂಬ ಹಗಲಲ್ಲಿ ದುಡಿದು
ಮೃತ್ಯುವೆಂಬ ಇರುಳಲ್ಲಿ ಅಮರವಾಗುವುದು.
ಆಸೆಯೆಡೆ ಆಕರ್ಷಿಸಲ್ಪಡುವಮನವ
ಹತ್ತಿಕ್ಕಿದರೆ ಜಯ ನಮ್ಮದಾಗುವುದು.

ಚೇತನಾ ಎಚ್. ಆರ್.
ಪ್ರಥಮ ಎಂ.ಎ. ಕನ್ನಡ

No comments:

Post a Comment

  ಬಿತ್ತಿ ವಿಶೇಷಾಂಕ 2017