9/23/14

ಯಕ್ಷಗಾನಕ್ಕೆ ವಿಶೇಷ ಪ್ರೋತ್ಸಾಹ ಪ್ರೊ.ಕೆ . ಬೈರಪ್ಪ ಭರವಸೆ


ಮಂಗಳಗಂಗೋತ್ರಿ: ಯಕ್ಷಗಾನಕ್ಕೆ ವಿಶೇಷ ಪ್ರೋತ್ಸಾಹ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಕಲೆಯ ಬಗ್ಗೆ ಅಸಕ್ತಿ ಮೂಡಿಸುವ ದೃಷ್ಟಿಯಿಂದ ಮಂಗಳೂರು ವಿಶ್ವವಿದ್ಯಾನಿಯದ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಸೆಪ್ಟಂಬರ್ 6ರಂದು ವೀರಮಣಿ ತಾಳ ಮದ್ದಳೆ ಕಾರ್ಯಕ್ರಮ ಅಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ವಿವಿಯ ಕುಲಪತಿಗಳಾದ ಸನ್ಮಾನ್ಯ ಪ್ರೊ.ಕೆ.ಬೈರಪ್ಪ  ಅವರು  ಯಕ್ಷಗಾನದ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿ ವಿದ್ಯಾರ್ಥಿಗಳಿಗೆ ಯುಜಿಸಿಯ ವತಿಯಿಂದ ಯಕ್ಷಗಾನ ತರಬೇತಿಗೆ ಪ್ರೋತ್ಸಾಹ ನೀಡುವಂತೆ ಮಾಡಲಾಗುವುದು ಎಂದು ನುಡಿದರು.
ವೀರಮಣಿ ತಾಳಮದ್ದಳೆಯನ್ನು ಡಾ ಪ್ರಭಾಕರ್ ಜೋಶಿ ತಂಡ ನಿರೂಪಿಸಿತು.
ಯಕ್ಷಗಾನ ಕೇಂದ್ರದ ಮುಖ್ಯಸ್ಥರಾದ ಪ್ರೊ.ಚಿನ್ನಪ್ಪ ಗೌಡ, ಕುಲಸಚಿವರಾದ ಯಡಪ್ಪಡಿತಾಯ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮುಸ್ತಫ.ಕೆ.ಹಸೈನಾರ್  ಪ್ರಥಮ ಎಂ.ಎ ಕನ್ನಡ

No comments:

Post a Comment

  ಬಿತ್ತಿ ವಿಶೇಷಾಂಕ 2017