10/17/14

ಮೂರರ ಮಹತ್ವ

ಈ ಮೂವರನ್ನುಆದರದಿಂದಕಾಣು :ತಂದೆ, ತಾಯಿ, ಗುರು.
ಈ ಮೂವರ ಬಗ್ಗೆ ಚೇಷ್ಟೆ ಮಾಡದಿರು : ಹುಚ್ಚ, ಮೂರ್ಖ, ಮುದುಕ.
ಈ ಮೂರನ್ನು ನಿಯಮದಿಂದ ಮಾಡು : ಭಜನೆ, ಭೋಜನ, ವ್ಯಾಯಾಮ.
ಈ ಮೂರಕ್ಕೆ ಯಾವಾಗಲೂ ಅಂಜುತ್ತಿರು : ಸುಳ್ಳು, ನಿಂದೆ, ಕಳ್ಳತನ.
ಈ ಮೂರು ನಿನ್ನ ವಶದಲ್ಲಿರಲಿ :ಇಂದ್ರಿಯ, ಮನಸ್ಸು, ಕೋಪ.
ಈ ಮೂರನ್ನು ಕೈ ಬಿಡಬೇಡ :ಕೊಟ್ಟಮಾತು, ಪ್ರೀತಿ, ಗೆಳೆತನ.
ಈ ಮೂರರ ಬಗ್ಗೆ ನಿಗಾ ಇರಲಿ : ಮಾತು, ನಡವಳಿಕೆ, ನೀತಿ.
ಈ ಮೂರರ ಗೆಳತನ ಮಾಡಬೇಡ :ಕುಡಿಯುವುದು, ಸೇದುವುದು, ಜೂಜಾಟ.
ಈ ಮೂರಕ್ಕೆ ಮನ್ನಣೆ ನೀಡು : ವೃದ್ಧಾಪ್ಯ, ಧರ್ಮ, ಕಾಯಿದೆ.
ಈ ಮೂರನ್ನು ಗೌರವಿಸು : ಹಿರಿತನ, ಧರ್ಮ, ಕಾನೂನು.
ಈ ಮೂರನ್ನು ಅಳವಡಿಸಿ : ಪ್ರಾಮಾಣಿಕತೆ, ನಿರ್ಮಲತ್ವ, ನಿಷ್ಠೆ.
ಈ ಮೂರನ್ನು ತ್ಯಜಿಸಿ :ಚಾಡಿ ಹೇಳುವುದು, ಸೋಮಾರಿತನ, ಸುಳ್ಳು.
ಈ ಮೂರನ್ನು ಅಳವಡಿಸು :ಕರುಣೆ, ಸಂತೋಷ, ಆಸಕ್ತಿ.
ಈ ಮೂರನ್ನು ಇಟ್ಟುಕೋ :ಧೈರ್ಯ, ವಿಶಾಲ ಮನಸ್ಸು, ದಯೆ
ಈ ಮೂರು ಮಿತವಾಗಿರಲಿ : ಪ್ರೀತಿ, ಪ್ರೇಮ, ಪ್ರಣಯ.
ಈ ಮೂರರ ಸಂಬಂಧ ಗೊತ್ತಿರಲಿ : ಗೆಳತಿ, ಪ್ರೇಯಸಿ, ಪತ್ನಿ.
ಜಯಂತಿ
ದ್ವಿತೀಯ ಎಂ.ಎ.ಕನ್ನಡ

No comments:

Post a Comment

  ಬಿತ್ತಿ ವಿಶೇಷಾಂಕ 2017