10/17/14


 ಹನಿಗವನ
ಕನಸು
ಮನದಲ್ಲಿ ಅರಳುವುದು ಕನಸು
ವಾಸ್ತವದಲ್ಲಿ ಮುದುಡುವುದು ಕನಸು
ಎಂದೆಂದಿಗೂ ಆಗದು ನನಸು
ವ್ಯಥೆ ಪಡುವುದು ಮನಸು
ಜೀವನ
ಏಳುಬೀಳಿಗೆ ಜೀವನವಿದು
ಕಷ್ಟ-ಸುಖಗಳ ತಾಣವಿದು
ಮಧುರ ಭಾವನೆಗಳ ಸುಂದರ ಲೋಕವಿದು
ಕನಸು ನನಸಾಗಿಸುವ ರಂಗ ಭೂಮಿಯಿದು.
ಕಣ್ಣಿರು
ಹೃದಯ ನೋಯುವಾಗ
ಕಣ್ಣಲ್ಲಿ ಕಣ್ಣೀರು ಬರುತ್ತದೆ
ಕಣ್ಣಲ್ಲಿ ಕಣ್ಣೀರು ಬರುವಾಗ
ಹೃದಯ ನೋಯುತ್ತದೆ.
ಕವನ
ನಿಸರ್ಗದ ಚರಾಚರಗಳು
ಕವಿಯ ಮನಸ್ಸಿನಲ್ಲಿ
ಅರಳಿಸುವ ಭಾವನೆಗಳು
ಅಕ್ಷರ ರೂಪದಲ್ಲಿ ಜೀವ ತುಂಬಿದಾಗ
ಹುಟ್ಟುವುದೇ ಕವನ.

ಚೇತನ ಎಚ್.ಆರ್.
ಪ್ರಥಮ ಎಂ. ಎ

No comments:

Post a Comment

  ಬಿತ್ತಿ ವಿಶೇಷಾಂಕ 2017