9/23/14

ಪೂರ್ಣಚಂದ್ರ ತೇಜಸ್ವಿ
ಅಂತರ್ಜಾಲ ಚಿತ್ರ 

ಮತ್ತೆ ಮತ್ತೆ ತೇಜಸ್ವಿ ನೆನಪು


ಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪರಮೇಶ್ವರ್ ಭಟ್ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಸೆಪ್ಟಂಬರ್ 12 ರಂದು ಮತ್ತೆ-ಮತ್ತೆ ತೇಜಸ್ವಿ ಎಂಬ ಎರಡುವರೆ ಗಂಟೆಗಳ ಸಾಕ್ಷ್ಯಚಿತ್ರ     ಪ್ರದರ್ಶಿಸಲಾಯಿತು.
ಕನ್ನಡದ ಖ್ಯಾತ ಸಾಹಿತಿ, ಚಿಂತಕ, ವಿಮರ್ಶಕ, ಛಾಯಾಚಿತ್ರಗಾರ ಪೂರ್ಣಚಂದ್ರ ತೇಜಸ್ವಿಯವರ ಹುಟ್ಟುಹಬ್ಬದ ಪ್ರಯುಕ್ತ ಈ ಕಾರ್ಯಕ್ರಮವನ್ನು ವಿಶ್ವವಿದ್ಯಾನಿಲಯದ ಹಳೆ ಸೆನೆಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯಸ್ಥರಾದ ಪ್ರೊ.ಸಬಿಹಾ ಭೂಮಿಗೌಡರವರು ವಹಿಸಿದ್ದರು . ಮುಖ್ಯ ಅತಿಥಿಯಾಗಿ ಸಾಕ್ಷ್ಯ ಚಿತ್ರದ ನಿದರ್ೇಶಕರಾದ ಕೆ.ಪರಮೇಶ್ವರ್ ಆಗಮಿಸಿ ಸ್ನಾತಕೋತ್ತರ ವಿದ್ಯಾರ್ಥಿ
ಗಳೊಂದಿಗೆ ಸಂವಾದ ನಡೆಸಿದರು.
ಕನ್ನಡ ವಿಭಾಗದ ವಿದ್ಯಾರ್ಥಿನಿ
ಶೃತಿ ಅಮಿನ್ ಕಾರ್ಯಕ್ರಮವನ್ನು ನಿರೂಪಿಸಿ ,ಲೋಕೇಶ್ ಕುಕ್ಕುಜೆ ಸ್ವಾಗತಿಸಿ, ವಂದಿಸಿದರು 


ಮುಸ್ತಫ.ಕೆ. ಹಸೈನಾರ್
 ಪ್ರಥಮ ಎಂ.ಎ ಕನ್ನಡ                 


                                 

No comments:

Post a Comment

  ಬಿತ್ತಿ ವಿಶೇಷಾಂಕ 2017