Showing posts with label ಸಂಪಾದಕೀಯ. Show all posts
Showing posts with label ಸಂಪಾದಕೀಯ. Show all posts

1/21/15

ಸಂಪಾದಕೀಯ
ನಾಡಗೀತೆಗೆ ಕತ್ತರಿ ಪ್ರಯೋಗದ ಸಿದ್ಧತೆ
ನಮ್ಮ ನಾಡಗೀತೆ ಅತೀ ಉದ್ದವಾದ ಸಾಲುಗಳನ್ನು ಹೊಂದಿದೆ. ಅದನ್ನು ಹಾಡಲು ತುಂಬ ಸಮಯ ಬೇಕು. ಮೂರರಿಂದ ಮೂರುವರೆ ನಿಮಿಷಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಅದರಿಂದ ಸಮಯ ಪೋಲಾಗುತ್ತದೆ. ನಮ್ಮ ರಾಷ್ಟ್ರಗೀತೆಯನ್ನು ಹಾಡುವುದಕ್ಕೆ ನಾವು ತೆಗೆದುಕೊಳ್ಳುವ ಸಮಯ ಐವತ್ತೆರಡು ಸೆಕೆಂಡುಗಳು ಮಾತ್ರ ಹೀಗಿರುವಾಗ ಈ ನಾಡಗೀತೆಯನ್ನು ಹಾಡಲು ಅದೇಕೆ ಅಷ್ಟು ಸಮಯವನ್ನು ವ್ಯರ್ಥಮಾಡುವುದು. ಇದರ ಬದಲು ಇನ್ಯಾವುದೋ ಒಳ್ಳೆಯ ಕೆಲಸಕ್ಕೆ ಈ ಸಮಯವನ್ನು ಉಪಯೋಗಿಸಬಹುದು ಎನ್ನುವ ಪೊಳ್ಳುವಾದವೊಂದು ಇತ್ತೀಚೆಗೆ ಹುಟ್ಟಿಕೊಂಡಿದೆ. ಇದು ಭಾರಿ ಚಚರ್ೆಗೆ ಎಡೆಮಾಡಿಕೊಟ್ಟಿದೆ.
    ಇಲ್ಲಿ ನಾಡಗೀತೆಯನ್ನು ಹಾಡಲು ತೆಗೆದುಕೊಳ್ಳುವ ಸಮಯದ ಕುರಿತು ಅಪಸ್ವರ ಎತ್ತಿ ನಾಡಗೀತೆಯ ಸ್ವರೂಪವನ್ನು ಬದಲಾಯಿಸುವ ನಿಟ್ಟಿನಲ್ಲಿ ಕತ್ತರಿ ಪ್ರಯೋಗವಾಗಬೇಕು ಎಂದು ಕೆಲವು ಜನರು ಹೇಳತೊಡಗಿದ್ದಾರೆ. ಅದಕ್ಕಾಗಿ ಅದರ ಕೆಲವು ಸಾಲುಗಳನ್ನು ತೆಗೆದುಹಾಕಬೇಕು. ಅವು ನಾಡಗೀತೆಗೆ ಅಗತ್ಯವಿಲ್ಲದ ಭಾಗಗಳಾಗಿವೆ ಎಂಬ ತಮ್ಮ ವಾದವನ್ನು ಮುಂದಿಡುತ್ತಿದ್ದಾರೆ. ಕನ್ನಡ ನೆಲದ ಭಾಷೆ ಸಂಸ್ಕೃತಿ ನಾಡು ಮತ್ತು ನುಡಿಯ ಇಡೀ ಕಲ್ಪನೆಯನ್ನು ಕಣ್ಣಮುಂದೆ ಬಿಂಬಿಸುವಂತೆ ಇರುವ ನಮ್ಮ ನಾಡಗೀತೆ ಅವರಿಗೆ ಸಮಯ ಹಾಳುಮಾಡುತ್ತಿರುವ ಒಂದು ಸಂಗತಿಯಾಗಿ ಗೋಚರಿಸಿದೆ. ಇಂದು ನಾವು ನಾಡಗೀತೆಯನ್ನು ಹಾಡುವುದು ಹೆಚ್ಚಾಗಿ ಕಾಣುವುದು ಕೆಲವು ಕನ್ನಡಪರ ಕಾರ್ಯಕ್ರಮಗಳಲ್ಲಿ ಮತ್ತು ಸಕರ್ಾರಿ ಶಾಲೆಗಳಲ್ಲಿ ಅಷ್ಟೇ. ಇತ್ತೀಚೆಗೆ ಇದು ಕೂಡ ಕಣ್ಮರೆಯಾಗಿ ಇಳಿಮುಖವಾಗುತ್ತಾ ಬಂದಿದೆ. ಇಂದಿನ ಯುವ ಜನಾಂಗವನ್ನು ಒಂದು ನಿಮಿಷ ನಿಲ್ಲಿಸಿ ಕೇಳಿದರೆ ಅವರಿಗೆ ಅದು ಪೂತರ್ಿಯಾಗಿ ಬರಲಾರದು. ಹೆಚ್ಚೇಕೆ ಕನರ್ಾಟಕದಲ್ಲಿ ರಾಜಕೀಯವಾಗಿ ಹಾಗು ಸಾಮಾಜಿಕವಾಗಿ ಮುಖ್ಯಸ್ಥಾನಗಳನ್ನು ಅಲಂಕರಿಸುವವರನ್ನು ಕೇಳಿದರು ಸಮರ್ಪಕವಾಗಿ ಅವರಿಂದ ಹೇಳಲು ಸಾಧ್ಯವಾಗದು. ಹೀಗಿರುವಾಗ ಕತ್ತರಿ ಪ್ರಯೋಗಕ್ಕೆ ಕೂಗು ಎಬ್ಬಿಸಿರುವ ಈ ಹಿತಾಸಕ್ತಿಗಳಿಗೆ ಏನು ಹೇಳಬೇಕು. ಒಂದುವರೆ ನಿಮಿಷಗಳಿಗೆ ಅವುಗಳನ್ನು ಇಳಿಸಬೇಕು ಅದಕ್ಕಾಗಿ ಅದರ ಸಾಲುಗಳನ್ನು ಕಡಿತಗೊಳಿಸಬೇಕು ಎಂಬ ಇವರ ವಾದ ಎಷ್ಟರ ಮಟ್ಟಿಗೆ ಸತ್ಯವಾಗಿದೆ. ಇದನ್ನು ನಾವು ಒಪ್ಪಿಕೊಳ್ಳಲು ಸಾಧ್ಯವೇ?.
   ಇಂದು ನಮ್ಮ ನಾಡಿನ ನಮ್ಮ ಮಣ್ಣಿನ ಮತ್ತು ಭಾಷೆಯ ಸಂಸ್ಕೃತಿಯನ್ನು ಹೊಸ ತಲೆಮಾರುಗಳಿಗೆ ಕಟ್ಟಿಕೊಡುವ ಜವಾಬ್ದಾರಿ ನಮಗಿದೆ. ಹೀಗಿರುವಾಗ ಚರಿತ್ರೆಯನ್ನು ತಿರುಚುವ ಅಥವಾ ಸಂಸ್ಕೃತಿಯನ್ನು ಮುಚ್ಚಿಹಾಕುವ ಮತ್ತು ಸಾಹಿತ್ಯಗಳನ್ನು ಕತ್ತರಿ ಪ್ರಯೋಗಕ್ಕೆ ಒಳಪಡಿಸುವ ಈ ಕ್ರಮಗಳು ಎಷ್ಟರ ಮಟ್ಟಿಗೆ ಸಮಂಜಸವಾದುದು. ನಿಜವಾಗಿಯು ಇದರ ಅಗತ್ಯವಿದೆಯೆ ಎಂಬ ಕಳವಳ ನಮಗೆ ಉಂಟಾಗುತ್ತದೆ. ರಾಜಕೀಯವಾಗಿ ಅಥವಾ ಸಾಮಾಜಿಕವಾಗಿ ಯಾವುದೇ ಸಭೆ ಸಮಾರಂಭಗಳನ್ನು ಹಮ್ಮಿಕೊಂಡು ಅವುಗಳಲ್ಲಿ ಒಂದನ್ನು ಸರಿಯಾಗಿ ನಿಭಾಯಿಸದೆ ಪೊಳ್ಳು ಭರವಸೆಗನ್ನು ನೀಡಿ ಜನರಿಗೆ ಮಂಕುಬೂದಿ ಎರಚುವ ಈ ಗಣ್ಯರುಗಳಿಗೆ ನಮ್ಮ ನಾಡಗೀತೆ ಮಾತ್ರ ಭಾರವಾಗಿ ಕಾಣುತ್ತದೆ. ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಸ್ವಾರ್ಥಕ್ಕಾಗಿ ಓಟ್ ಬ್ಯಾಂಕಿಂಗ್ ನಡೆಸುವ ಇವರುಗಳಿಗೆ ಅಲ್ಲಿ ಹಾಳುಮಾಡುವ ಸಮಯದ ಕುರಿತು ಚಿಂತೆ ಇರುವುದಿಲ್ಲ. ಆದರೆ ಮೌನವಾಗಿ ಎಲ್ಲರೂ ಅರೆ ಕ್ಷಣ ಎದ್ದು ನಿಂತು ಗೌರವದಿಂದ ಬಾಯಿ ತುಂಬ ಹಾಡುವ ನಮ್ಮ ನಾಡಗೀತೆಯು ಅವರಿಗೆ ನುಂಗಲಾರದ ತುತ್ತಾಗಿ ಕಾಡುತ್ತಿರುವುದು ನಮ್ಮ ಕನ್ನಡ ನಾಡಿನ ವಿಪಯರ್ಾಸ.
 ಇಂದು ಇಂತಹ ಒಂದು ಉತ್ತಮ ವ್ಯವಸ್ಥೆಯ ಗೌರವದ ಈ ನಾಡಗೀತೆಯನ್ನು ಹಾಡುವುದು ಅತೀ ಉದ್ದವಾಗಿದೆ. ಹೀಗಿರುವಾಗ ಅದನ್ನು ಈ ರೀತಿಯ ಕತ್ತರಿ ಪ್ರಯೋಗಕ್ಕೆ ಒಳಪಡಿಸುವುದು ಎಷ್ಟು ಸರಿ. ಹೀಗೆ ಒಳಪಡಿಸುವುದರಿಂದ ಈ ವಾದಿಗಳಿಗೆ ಆಗುವ ಪ್ರಯೋಜನವಾದರು ಏನು. ಇದನ್ನು ನಮ್ಮ ಜನತೆ ಪ್ರಶ್ನಿಸಬೇಕಾಗಿದೆ. ಯುವಜನರು ನಮ್ಮ ನಾಡಗೀತೆಯನ್ನು ಪೂತರ್ಿಯಾಗಿ ಉಳಿಸಿಕೊಳ್ಳುವಲ್ಲಿ ಹೋರಾಡಬೇಕಾಗಿದೆ. ಇದು ಒಬ್ಬ ವ್ಯಕ್ತಿ ಅಥವಾ ಗುಂಪು ಧರ್ಮಕ್ಕೆ ಸಂಬಂಧಪಟ್ಟರುವುದಲ್ಲ. ನಮ್ಮ ನಾಡು ನುಡಿ ಮತ್ತು ಮಣ್ಣಿಗೆ ಸಂಬಂಧಿಸಿರುವುದು ಆಗಿದೆ.
    ಅಂದಹಾಗೆ ನಾವು ಮೊದಲ ಹಾಗು ತೃತೀಯ ಚತುಮರ್ಾಸವನ್ನು ಮುಗಿಸಿ ನಾಲ್ಕನೇಯ ಮತ್ತು ಎರಡನೇಯ ಚತುಮರ್ಾಸದಲ್ಲಿ ತೊಡಗಿಸಿಕೊಂಡಿದ್ದೇವೆ. ಮುಂದೆ ಬರುವ ದಿನಗಳು ಬಹಳ ತರಾತುರಿಯ ದಿನಗಳು. ಹಲವಾರು ಕಾರ್ಯಕ್ರಮಗಳು, ಪರೀಕ್ಷೆಗಳು, ಪ್ರವಾಸಗಳು ಮತ್ತು ಅದರೊಂದಿಗೆ ಹೊರಜಗತ್ತಿಗೆ ಕಾಲಿಡುವ ಅನಿವಾರ್ಯತೆಯು ಕೂಡ ಬಂದೊದಗಲಿದೆ. ಅದಕ್ಕಾಗಿ ನಮ್ಮ ಕನ್ನಡ ಬಿತ್ತಿ ಪತ್ರಿಕಾ ಮಂಡಳಿಯು ಬಿತ್ತಿಯ ಓದುಗ ವರ್ಗಕ್ಕೆ ಹಾಗು ಎಲ್ಲಾ ವಿದ್ಯಾಥರ್ಿ ಗೆಳೆಯ-ಗೆಳತಿಯರಿಗೆ ಶುಭಹಾರೈಸುತ್ತಿದೆ. ಪರೀಕ್ಷೆಗಳು ನಮ್ಮ ಶ್ರಮಕ್ಕೆ ಫಲಕೊಡುವಂತಿರಲಿ. ಈ ಚತುಮರ್ಾಸದ ಮೊದಲ ಸಂಚಿಕೆಯನ್ನು ಮತ್ತೆ ನಿಮ್ಮ ಕೈಗಿಡಲು ಬಿತ್ತಿಮಂಡಳಿಗೆ ಸಂತೋಷವಾಗುತ್ತಿದೆ. ನಿಮ್ಮ ಸಹಕಾರ ಮತ್ತು ಓದುವ ಮನಸ್ಸು ಹೀಗೆ ಮುಂದುವರೆಯಲಿ.
ಸಂಪಾದಕರು 

ಕನ್ನಡ ರಾಜ್ಯೋತ್ಸವ ಮತ್ತು ಸರ್ಕಾರಿ ರಜೆ
ನವೆಂಬರ್ 1 ಕನ್ನಡ ರಾಜ್ಯೋತ್ಸವ. 1956 ರಲ್ಲಿ ಭಾಷಾವಾರು ಪ್ರಾಂತ್ಯಗಳಿಗೆ ಅನುಗುಣವಾಗಿ ಏಕೀಕರಣಗೊಂಡಿತು. ಮೈಸೂರು ರಾಜ್ಯಕ್ಕೆ ಅಂದರೆ ರಾಜಸಂಸ್ಥಾನಕ್ಕೆ ಕೊಡುವ ಗೌರವವನ್ನು ಹಾಗೇ ಉಳಿಸಿಕೊಂಡು ಬರಲಾಗಿತ್ತು. ಏಕೀಕರಣದ ಸಂದರ್ಭದಲ್ಲಿ ಕನ್ನಡ ನಾಡುನುಡಿಯ ಪರಿಕಲ್ಪನೆಯ ಕಿಚ್ಚು ಹರಡಿತ್ತು. ನಂತರದಲ್ಲಿ ನವೆಂಬರ್ 1/ 1973ರಲ್ಲಿ ಡಿ.ದೇವರಾಜ್ ಅರಸುರವರು ಕನರ್ಾಟಕ ಎಂಬ ಹೆಸರನ್ನು ನಾಮಕರಣಗೊಳಿಸಿದರು. ಇದರ ನೆನಪಿನಲ್ಲಿ ಪ್ರತಿವರ್ಷವೂ ಆ ದಿನವನ್ನು ಆಚರಿಸಿ ಸಂಭ್ರಮಿಸುವುದು ಸಾಮಾನ್ಯವಾದರೂ ಕನ್ನಡಿಗರಾದ ನಮ್ಮ ಆದ್ಯ ಕರ್ತವ್ಯವೂ ಹೌದು.
ಕನ್ನಡ ರಾಜ್ಯೋತ್ಸವ ಮುಂತಾದ ಹಲವಾರು ವಿಶೇಷ ದಿನಗಳ ನೆನಪಿನಲ್ಲಿ ನಮಗೆ ಸಕರ್ಾರಿ ರಜೆಗಳು ಇವೆ. ಆದರೆ ಇಂದು ಅವುಗಳ ಮಹತ್ವ ಮರೆತು ಹೋಗಿ ಇನ್ಯಾವುದೋ ಅನಾವಶ್ಯಕ ಕಾರಣಗಳಿಗಾಗಿ ಕಳೆದು ಇದರ ಮಹತ್ವ ಮರೆತು ಹೋಗುತ್ತವೆ. ಕನ್ನಡದ ಏಳಿಗೆ, ನಾಡು, ಭಾಷೆ ಮತ್ತು ಸಾಹಿತ್ಯಕ್ಕೆ ದುಡಿದವರನ್ನು ನಾವು ನೆನಪಿಸಿ ಗೌರವಿಸಿಕೊಂಡು ಬರುತ್ತಿದ್ದರೂ ಇನ್ನೂ ಅದೆಷ್ಟೋ ಪ್ರತಿಭೆಯ ಜನರು ಎಲೆಮರೆಯಾಗಿ ಉಳಿದು ಕೊಂಡು ಬಿಟ್ಟಿದ್ದಾರೆ.
ಸುಮಾರು ನಾಲ್ಕನೆಯ ಶತಮಾನದಿಂದಲೇ ಕನ್ನಡದ ಕುರಿತು ಉಲ್ಲೇಖವಿರುವುದು ಸಾಹಿತ್ಯ ಮತ್ತು ಚರಿತ್ರೆಗಳಲ್ಲಿ ಕಂಡುಬಂದರೂ ನಂತರದಲ್ಲಿ ಬೆಳೆದು ನವೋದಯ, ನವ್ಯ, ಪ್ರಗತಿಶೀಲ, ದಲಿತ-ಬಂಡಾಯ ಮತ್ತು ಸ್ತ್ರೀ ಸಂವೇದನೆಗಳೊಂದಿಗೆ ಹರಡಿ ನಿಂತಿದೆ. ಇಂಗ್ಲೀಷ್ ಎಂಬ ಹೊಸ ನೀರು ಅದೆಲ್ಲಿಂದಲೋ ಕನ್ನಡಕ್ಕೆ ಹರಿದು ಬಂದು ಕನ್ನಡ ಸಾಹಿತ್ಯದಲ್ಲಿ ಬಂದು ಹೊಸ ಸಂಚಲನ ಉಂಟು ಮಾಡಿತು ಆದರೇ ಕಾಲಕ್ರಮೇಣ ಇದರ ಪ್ರಾಭಲ್ಯ ಸಾಹಿತ್ಯ ಮತ್ತು ಭಾಷೆಯ ಮೇಲೆ ಹೆಚ್ಚು ಆವರಿಸಿಕೊಂಡಿತು.
ಆಧುನಿಕ ತಲೆಮಾರುಗಳಾದ ಯುವ ಜನರು ಇಂದು ಮಾತನಾಡುವ ಕನ್ನಡ ಭಾಷೆಯನ್ನು ಗಮನಿಸಿದರೆ ಕಸಿವಿಸಿಯಾಗುತ್ತದೆ. ಇಂದು ನಾವು ಮಾತನಾಡುವ ಕನ್ನಡ ಭಾಷೆಯ ನೂರರಲ್ಲಿ ನಾಲ್ವತ್ತರಿಂದ ಐವತ್ತು ಭಾಗದಷ್ಟು ಇಂಗ್ಲೀಷ್  ಪದಗಳ ಬಳಕೆಯಾಗುತ್ತಿದೆ. ಇದಕ್ಕೆ ನಿದರ್ಶನವೆಂಬಂತೆ ನಮಗೆ ಕಾಣಸಿಕ್ಕುವುದು ಮಾಧ್ಯಮಗಳು. ಇಂದು ದೃಶ್ಯ ಶ್ರವ್ಯ ಮಾಧ್ಯಮಗಳು ತಮ್ಮಲ್ಲಿ ಜನರನ್ನು ಮುಟ್ಟುವ ಸಲುವಾಗಿ ಬಳಸಿಕೊಳ್ಳುವ ಭಾಷೆಯು ಇದಕ್ಕೆ ಉದಾಹರಣೆಯಾಗಿದೆ. ಪ್ರಸಾರ ಮಾಡುವ ಧಾರಾವಾಹಿಗಳಾಗಲೀ ಇತರ ಕಾರ್ಯಕ್ರಮಗಳಾಗಲೀ ಅದು ಜನರಿಗೆ ನೀಡುವ ಸಾಮಾಜಿಕ ಕಳಕಳಿ ಮತ್ತು ಮೌಲ್ಯಗಳು ಇಂದು ಕಡಿಮೆಯಾಗುತ್ತಾ ಬರುತ್ತಿದೆ. ಆಕರ್ಷಣೆಯನ್ನು ಕೇಂದ್ರವಾಗಿರಿಸಿ ತಮ್ಮ ಟಿ.ಆರ್.ಪಿ. ಬೆಲೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಆಸಕ್ತಿ ವಹಿಸುತ್ತಿವೆ. ಮಾಧ್ಯಮವು ಇಂದು ಭಾಷೆಯನ್ನು ಮುಖ್ಯವಾಗಿ ಕನ್ನಡ ಭಾಷೆಯನ್ನು ಶುದ್ಧತೆಯಿಂದ , ಸರಳವಾಗಿ ಇನ್ನೂ ಹೆಚ್ಚಿನ ಎತ್ತರಕ್ಕೆ ಬೆಳೆಸಬಲ್ಲವು. ಅವುಗಳಿಗೆ ಅದರ ಸಾಮಾರ್ಥ್ಯವಿದೆ.
ಭಾಷೆ ಮತ್ತು ಉದ್ಯೋಗಕ್ಕೆ ಇಂದು ಸಂಬಂಧವನ್ನು ಕಲ್ಪಿಸಲಾಗುತ್ತದೆ. ಹಾಗಾಗಿ ಅನ್ಯಭಾಷೆಗಳು ಇಂದು ತಮ್ಮ ಮೂಲ ಭಾಷೆಯನ್ನು ಮರೆಯುವಂತೆ ಮಾಡಿದೆ. ಉದ್ಯೋಗ ಅವಕಾಶಗಳು ಇಂದು ಹೊಟ್ಟೆಪಾಡಿಗಾಗಿ ಅನಿವಾರ್ಯವಾದ ಕಾರಣ ಇದು ಎಲ್ಲರನ್ನು ಆವರಿಸಿಬಿಟ್ಟಿದೆ. ಇದರ ಅರ್ಥ ಇತರ ಭಾಷೆಗಳು ಕೆಟ್ಟದು ನಮ್ಮ ಭಾಷೆ ಉತ್ತಮವೆಂದಾಗಲಿ ಅಲ್ಲ. ನಮ್ಮ ಭಾಷೆಯನ್ನು ಉಳಿಸಿ ಬೆಳೆಸಿ ಇತರ ಭಾಷೆಗಳನ್ನು ಕಲಿತುಕೊಂಡು ಅವುಗಳಲ್ಲಿ ಒಳ್ಳೆಯದನ್ನು ಸ್ವೀಕರಿಸಬೇಕು ಮತ್ತು ಅವುಗಳನ್ನು ನಮ್ಮ ಭಾಷೆಗೆ ಕೊಡುಗೆಯಾಗಿಸಬೇಕು. ಆದರೆ ಅವುಗಳು ನಮ್ಮನ್ನು ಆಳುವಂತಾಗಬಾರದು ನಮ್ಮ ಭಾಷೆ ನಮ್ಮ ಸಂಸ್ಕೃತಿಯನ್ನು ಬೆಳೆಸುವ ಜವಾಬ್ದಾರಿ ನಮಗಿದ.ೆ ಅನ್ಯ ಭಾಷೆಗಳನ್ನು ನಮ್ಮ ಉದ್ಯೋಗ ಮತ್ತು ಜ್ಞಾನಾರ್ಜನೆಗಾಗಿ ಬಳಸಿಕೊಂಡರೆ ಕನ್ನಡವನ್ನು ನಮ್ಮ ಉಸಿರಾಗಿ ಬೆಳೆಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಕನ್ನಡ ರಾಜ್ಯೋತ್ಸವವು ಸಕರ್ಾರಿ ರಜೆಯ ಕಾಲಹರಣದ ದಿನವಾಗಿ ಬಳಸದೆ ಕನ್ನಡಕ್ಕೆ ಒಂದು ಕೊಡುಗೆಯಾಗಿ ಬಳಸಿಕೊಳ್ಳೋಣ. ಕನ್ನಡ ಭಾಷೆಯ ಉಳಿಸುವಿಕೆ ಮತ್ತು ಬೆಳೆಸುವಿಕೆಗೆ ಕಟಿಬದ್ಧರಾಗೋಣ.
ಸಂಪಾದಕ.








9/23/14

ಬೆಳ್ಳಿ ಹಬ್ಬದ ಪೂರ್ವ ತಯಾರಿಯಲ್ಲಿ 



1991ರಲ್ಲಿ ಕೆಲವು ಜನರ ಕನಸಿನ ಕೂಸಾಗಿ ಬಿತ್ತಿಯ ಜನನವಾದಾಗ ಅನೇಕರ ಸಂತೋಷಕ್ಕೆ ಪಾರವೆ ಇರಲಿಲ್ಲ. ಕನ್ನಡ ವಿಭಾಗದ ಆಶ್ರಯದಲ್ಲಿ ಬೆಳೆಯುತ್ತಾ ಬಂದು ಈಗ 23ರ ಹರೆಯದ ನವ ತರುಣವಾಗಿ ಬಿತ್ತಿ ಬೆಳೆದು ನಿಂತಿದೆ. ಇದರ ಬಾಲ್ಯದ ಕಡೆಗೊಮ್ಮೆ ಕಣ್ಣು ಹಾಯಿಸಿದರೆ ಇದನ್ನು ಬೆಳೆಸುವಲ್ಲಿ ಅನೇಕರ ಶ್ರಮವಿರುವುದು ಕಂಡುಬರುತ್ತದೆ. ಮಾಧವ ಪೆರಾಜೆಯವರ ಸಂಪಾದಕತ್ವದಲ್ಲಿ, ಪೊ.ಬಿ.ಎ ವಿವೇಕರೈ ಅವರಮಾರ್ಗದರ್ಶನದಲ್ಲಿ, ಅರವಿಂದ ಮಾಲಗತ್ತಿಯವರ ಗೌರವ ಸಂಪಾದಕತ್ವದೊಂದಿಗೆ ಮುಂದೆ ಸಾಗುತ್ತಾ ಬಂದು ತದನಂತರ ಸುಚಿತ್ರ ಕೊಕ್ಕಡ ಅವರ ಸಂಪಾದಕತ್ವ ಮತ್ತು ಪ್ರೊ.ಸಬಿಹಾ ಭೂಮಿಗೌಡರ ಗೌರವ ಸಂಪಾದಕತ್ವದವರೆಗೆ ಅದೆಷ್ಟೋ ಸಂಪಾದಕರು ತಮ್ಮ ಹೆಜ್ಜೆ ಗುರುತುಗಳನ್ನು ಅಚ್ಚೊತ್ತಿ ಹೋಗಿದ್ದಾರೆ.
ಪ್ರಾರಂಭದ ದಿನಗಳಲ್ಲಿ ಗೋಡೆಯ ಬರಹವಾಗಿ ರೂಪು ತಳೆದ ಬಿತ್ತಿ ಸಾಪ್ತಾಹಿಕವು ತದನಂತರ ಎಲ್ಲಾ ವಿಭಾಗಗಳಿಗೂ ಹರಡಿಕೊಂಡ ಸಾಪ್ತಾಹಿಕ ಪತ್ರಿಕೆಯಾಗಿ ಜೀವ ತುಂಬಿ ವಿಶ್ವವಿದ್ಯಾನಿಲಯದಲ್ಲಿ ಹರಡಿಕೊಂಡಿತು. ಇದೀಗ ಬೆಳ್ಳಿಹಬ್ಬದ ಪೂರ್ವ ತಯಾರಿಯಲ್ಲಿ ಬಂದು ನಿಂತಿದೆ. ಆರಂಭದ ಮನ್ನಣೆ ಇಂದು ಪತ್ರಿಕೆಗಳಿಗೆ ಸಿಗುತ್ತಿಲ್ಲ. ಕಾಲ ಬದಲಾದಂತೆ ಬಿತ್ತಿಗು ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಿದೆ. ಬಿತ್ತಿಯು ಕೇವಲ ಗೋಡೆಯ ಮೇಲಿನ ಪ್ರತಿಯಾಗಿ, ಅಥವಾ ಇನ್ಯಾವುದೋ ನಾಲ್ಕು ಬಿಳಿ ಹಾಳೆಗಳ ನಡುವಿನ ಅಕ್ಷರವಾಗಿ ಉಳಿಯುವುದರಿಂದ ನಾಲ್ಕು ಹೆಜ್ಜೆ ಮುಂದೆ ಹೋಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಆಧುನಿಕ ವಿದ್ಯಮಾನಕ್ಕೆ ತೆರೆದುಕೊಳ್ಳುವ ಹೊಸ ಸವಾಲನ್ನು ಹೊಂದಿದೆ.
ಬಿತ್ತಿಯ ಸ್ವರೂಪವನ್ನು ಬದಲಾಯಿಸುವ ಪ್ರಯೋಗಕ್ಕೆ  ನಮ್ಮ ಬಿತ್ತಿ ತಂಡ ಪ್ರಯತ್ನಿಸುತ್ತಿದೆ. ಅದರ ಮೊದಲ ಪ್ರಯತ್ನವಾಗಿ ಬಿತ್ತಿಗೆ ಆಧುನಿಕ ಕಾಯಕಲ್ಪವೊಂದನ್ನು ನೀಡುವ ಉದ್ದೇಶದಿಂದ ಬ್ಲಾಗ್ ಒಂದನ್ನು ಆರಂಭಿಸಿ, ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಅದೇ ಸಮಯದಲ್ಲಿ ಓದುಗ ಆಸಕ್ತರ ಅಭಿರುಚಿಗೆ ತಕ್ಕಂತೆ ಬಿತ್ತಿ ಪತ್ರಿಕೆಯ ಸ್ವರೂಪವನ್ನು ಬದಲಾಯಿಸಿ ಹೊರ ತರುತ್ತಿದ್ದೇವೆ . ಬಿತ್ತಿ ಬಳಗದ ಸಂಪಾದಕೀಯ ತಂಡವು ಹೊಸ ಹುರುಪಿನಿಂದ ಕೆಲಸ ನಿರ್ವಹಿಸುತ್ತಿದ್ದು ಆಸಕ್ತ ಸಾಹಿತ್ಯ ಸಹೃದಯರ ಬೆಂಬಲವೂ ನಮಗೆ ದೊರೆಯುತ್ತಿದೆ. ಇದೇ ಬೆಂಬಲ ಮುಂದೆಯೂ ದೊರೆಯಲಿ ಎಂಬ ಆಶಯ ನಮ್ಮದು.
                                             

ಲೋಕೇಶ್ ಕುಕ್ಕುಜೆ
ಸಂಪಾದಕರು 
                                     

  ಬಿತ್ತಿ ವಿಶೇಷಾಂಕ 2017