Showing posts with label ಲೇಖನ. Show all posts
Showing posts with label ಲೇಖನ. Show all posts

1/21/15

ಗಾಂಧಿಯ ದೂರದೃಷ್ಠಿಯಲ್ಲಿ ಮೋಡಿ ನಡೆದಿತೆ?

       ಗಾಂಧಿ ಎಂದ ಕ್ಷಣ ನಾವೆಲ್ಲರೂ 'ರಾಷ್ಟ್ರಪಿತ' ಎನ್ನುವ ಕಲ್ಪನೆಯನ್ನು ಇಟ್ಟುಕೊಂಡಿದ್ದೇವೆ. ಮಾತ್ರವಲ್ಲ ಗಾಂಧಿಯವರ ದೂರದೃಷ್ಠಿ ಎಲ್ಲರಿಗೂ ಎಲ್ಲಾ ಸಮಯದಲ್ಲೂ ಅನ್ವಯವಾಗುವಂತದು. ಗಾಂಧೀಜಿಯವರು ಕಂಡ ಕನಸು ಸ್ವಾತಂತ್ರ್ಯೋತ್ತರ ಭಾರತವನ್ನು ಮಾದರಿ ರಾಜ್ಯವಾಗಿ ನಿರೂಪಿಸುವ ಮಹತ್ವಕಾಂಕ್ಷೆಯನ್ನು ಹೊಂದಿದವರು. ಸಾಕಷ್ಟು ಸುಧಾರಣೆಯ ಬಳಿಕ ರಾಮರಾಜ್ಯದ ಕಲ್ಪನೆಯ ಕನಸು ಹೊಂದಿದ್ದರು, ಇದನ್ನು ಇಂದಿನ ಯುವ ಜನಾಂಗಕ್ಕೆ ಊಹಿಸಲು ಅಸಾಧ್ಯ. ಯಾಕೆಂದರೆ ಗಾಂಧೀಜಿ ಯವರು ಕೆಲವರಿಗೆ ಆದರ್ಶ ವ್ಯಕ್ತಿಯಾದರೆ ಇನ್ನು ಕೆಲವರಿಗೆ ಗಾಂಧೀಜಿ ಯವರ ಬಗ್ಗೆ ತುಂಬಾ ಹಗುರವಾಗಿ ಮಾತನಾಡುವುದನ್ನು ನೋಡುತ್ತೇವೆ. ಯಾಕೆಂದರೆ ಇಂದಿನವರಿಗೆ ಗಾಂಧೀಜಿ ಬೇಡ, ಮೋದಿ ಬೇಕು. ಹೀಗಾಗಲು ಹಲವಾರು ಕಾರಣವಿರಬಹುದು. ಕೆಲವರು ' ಮೋದಿ ಎಂಬ ಎದೆಯೊಳಗಿನ ಕೂಸು' ಹೆಸರೆತ್ತಿದ ಕ್ಷಣ ಸಿಡಿಮಿಡಿಗೊಳ್ಳುವ, ಉರಿದು ಬೀಳುವ ಯುವ ಜನಾಂಗದ ಬಿಸಿನೆತ್ತರು ಉಕ್ಕುತ್ತಿದೆ. ಈ ಉಕ್ಕುವ ರಕ್ತವನ್ನು ಬಳಕೆ ಹೇಗೆ ಮಾಡಬೇಕು ಎನ್ನುವುದು ಗೊತ್ತಿಲ್ಲ? ಯಾಕೆಂದರೆ ಮೋದಿ ಬಗ್ಗೆ ತಿಳಿದಿರುವ ನಾವು ಮೋದಿ ಸರಕಾರ ರೂಪಿಸುತ್ತಿರುವ ಒಂದು ಮಹತ್ವಕಾಂಕ್ಷೆ ಯೋಜನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಲಬೇಕು. ಅದುವೆ 'ಸ್ವಚ್ಚ ಭಾರತ್' ಅಭಿಯಾನದಲ್ಲಿ ಯುವ ಜನಾಂಗದ ಪಾತ್ರ ಬಹಳ ಮಹತ್ತರವಾದದು. ಯಾಕೆಂದರೆ ಸಿಕ್ಕ ಸಿಕ್ಕ ಕಡೆಗಳಲ್ಲಿ ಕಸಗಳನ್ನು ಮತ್ತು ಬೇಡದ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುವ ಜಾಯಮಾನ ಇಂದಿನ ಯುವ ಪೀಳಿಗೆಯಲ್ಲಿದೆ. ಅಷ್ಟು ಮಾತ್ರವಲ್ಲ ಇಲ್ಲಿ ಕಸ ಹಾಕಬಾರದು ಎಂಬ ಸೂಚನ ಫಲಕ ಇದ್ದ ಜಾಗದಲ್ಲೆ ಉದ್ದೇಶ ಪೂರ್ವಕವಾಗಿ ಕಸವನ್ನು ಹಾಕುತ್ತೇವೆ. ಇದಕ್ಕೆ ಕಾರಣ ಅರಿವಿನ ಕೊರತೆ ಅಲ್ಲ, ಹೇಗಾದರೂ ಹೀಗೆ ಅಲ್ಲವೆ? ಎನ್ನುವ ಬೇಜಾವಬ್ದಾರಿ. ಈ ಯೊಜನೆಯನ್ನು ಜಾರಿಗೆ ತಂದ ಬಳಿಕ ಯುವ ಜನಾಂಗ ಬದಲಾದಿತು ಮತ್ತು ಸ್ವಚ್ಚ ದೇಶದ ಕಲ್ಪನೆಯು ಅವರ ಮನಸ್ಸುಗಳಲ್ಲಿ ಮೂಡಿತು ಎನ್ನುವ ಚಿಕ್ಕ ಆಸೆಯನ್ನು ಇಟ್ಟುಕೊಳ್ಳ ಬಹುದು.
       ಹಾಗೆ ಎಂದು ಜನತೆ ಕನಸು ಕಾಣುತ್ತಾ ಸುಮ್ಮನೆ ಕುಳಿತುಕೊಳ್ಳುವುದು ಸರಿಯಲ್ಲ. ಯಾಕೆಂದರೆ ತಮ್ಮ ಶ್ರಮ ಕೂಡ ದೇಶಕ್ಕೆ ಅಮೂಲ್ಯವಾದದ್ದು ಎನ್ನುವುದನ್ನು ಮರೆಯಬಾರದು 'ಸ್ವಚ್ಚ' ಎಂದ ಕ್ಷಣ ಎಲ್ಲವೂ ಅದರಲ್ಲಿಯೂ ದೇಹ, ಮನಸ್ಸು, ನದಿಮೂಲ, ಜಲಮೂಲ, ಮಣ್ಣು ಎಲ್ಲವೂ ಸ್ವಚ್ಚವಾಗಬೇಕಲ್ಲ ಮಾತ್ರವಲ್ಲ ಯೋಚನೆಯ ಧಾಟಿ, ಹೀಗೆನೆ ನಮ್ಮ ದೇಶ ಸುಭೀಕ್ಷ ದೇಶವಾಗಲು 2019ರ ಗುರಿಯನ್ನು ಹೊಂದಿರುವ ಪ್ರಜೆಗಳು, ಕಾರ್ಯಮಗ್ನರಾಗಬೇಕು ಈ ಕ್ಷಣದಿಂದ ಅಲ್ಲವೆ?
ಹೀಗೆ ಹೇಳಿದ ತಕ್ಷಣ ಇದಕ್ಕಾಗಿ ನಾವು ಏನು ಮಾಡಬೇಕು? ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಮೂಡಬಹುದು. ಇದಕ್ಕೆ ಉತ್ತರ ಕೂಡ ಯುವ ಜನಾಂಗದಲ್ಲಿ ಅಸ್ಪಷ್ಟವಾಗಿರಬಹುದು. ಯಾಕೆಂದರೆ ದೇಶದ ಕಲ್ಪನೆ ಅವರಿಗೆ ಇಲ್ಲದೆ ಇರಬಹುದು. ಆದರೆ ನಮ್ಮ ಮನೆ, ನಮ್ಮ ಊರು ಇವುಗಳ ಕಲ್ಪನೆ ಸಾಮಾನ್ಯವಾಗಿ ಇರುತ್ತದೆ. ಮೊದಲು ಯುವ ಜನಾಂಗ ಕೆಲವೊಂದು ಚಟಗಳನ್ನು ಬಿಡಬೇಕು. ಮಾತ್ರವಲ್ಲ ತಮ್ಮ ಮನೆಯ ಸುತ್ತಮುತ್ತ ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಸ್ವಚ್ಚ ಎಂದ ತಕ್ಷಣ ಗುಡಿಸುವುದು, ನೆಲ ಒರೆಸುವುದು ಅಲ್ಲ. ಮನೆಯ ಪರಿಸರವನ್ನು ಸ್ವಚ್ಚ ಗೊಳಿಸುವುದು ಬಳಿಕ ತಮ್ಮ ಸುತ್ತಮುತ್ತಲಿನ ಮನೆಯವರಲ್ಲಿ ಜಾಗೃತಿಯನ್ನು ಮೂಡಿಸುವುದು ಮುಖ್ಯ. ಬಳಿಕ ತಿಳುವಳಿಕೆಯನ್ನು ನೀಡುವುದು ಮಾತ್ರವಲ್ಲ ತಾವು ಕೂಡ ಅದರಲ್ಲಿ ಭಾಗವಹಿಸಬೇಕು. ಇಷ್ಟು ಎಂದ ಮಾತ್ರಕ್ಕೆ ಎಲ್ಲಾ ಜವಾಬ್ದಾರಿಗಳು ಮುಗಿಯಿತು ಎಂದು ತಿಳಿಯವಾರದು.
       ಇನ್ನಷ್ಟು ಕೆಲಸಗಳು ಬಾಕಿ ಉಳಿದಿವೆ. ಅದರಲ್ಲಿ ನದಿ ಮೂಲ ಸ್ವಚ್ಚಗೊಳಿಸುವುದು ಅದರಲ್ಲಿ ಗಂಗಾ ನದಿಯನ್ನು ಸ್ವಚ್ಚಗೊಳಿಸುವುದು ತುಂಬಾ ಗಂಭೀರವಾದ ವಿಚಾರ. ನದಿಯನ್ನು ಮಲಿನ ಮಾಡುವ ಮತ್ತು ಎಲ್ಲೆಂದರಲ್ಲಿ ಕಸ ಹಾಕುವವರಿಗೆ ತಡೆಯೊಡ್ದಲಾದಿತೇ? ಎನ್ನುವ ಪ್ರಶ್ನೆ ಮನಸಿನ ಆಳದಲ್ಲಿ ಮೂಡುತ್ತದೆ. ಯಾಕೆಂದರೆ ಇದಕ್ಕೆ ನಮ್ಮ ದೇಶದ ಇತಿಹಾಸ ಪುಟಗಳನ್ನು ತಿರುವಿ ಹಾಕುವಾಗ ಸಾಕಷ್ಟು ಘಟನೆಗಳು ಉದಾಹರಣೆಯಾಗಿ ಸಿಗುತ್ತವೆ. ಇದನ್ನೆಲ್ಲ  ಗಮನಿಸಿದಾಗ ಮುಂದೆ ಏನಾಗಬಹುದು ಎನ್ನುವ ತಿಮರ್ಾನಕ್ಕೆ ಕೆಲವರಂತೂ ಬಂದಿರಬಹುದು. ಇದನ್ನು ಪುಷ್ಠಿಕರಿಸಲು ಪ್ರಮುಖವಾದ ಘಟನೆಗಳು ಕಣ್ಣ ಮುಂದೆ ಗರಿಬಿಚ್ಚಿ ಕುಣಿಯುತ್ತದೆ. ಆ ಘಟನೆಗಳು ಮುಂದೆ ಏನಾದೀತು ಎನ್ನುವ ಬಗ್ಗೆ ಭವಿಷ್ಯವನ್ನು ನುಡಿಯಬಹುದು, ಹಾಗೆಂದ ಮಾತ್ರಕ್ಕೆ 'ಸ್ವಚ್ಚ ಭಾರತ ಅಭಿಯಾನ' ಯಶಸ್ವಿಯಾಗಲಿಕ್ಕಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಇದಕ್ಕಾಗಿಯೇ ಒಂದಷ್ಟು ಕಾಲಾವಧಿ ಹೆಚ್ಚು ತೆಗೆದುಕೊಳ್ಳಬಹುದು ಅಷ್ಟೆ. ಯಾಕೆಂದರೆ ನಮ್ಮ ದೇಶ ಮುಂದುವರಿಯುತ್ತಿರುವ ರಾಷ್ಟ್ರ. ಆದ್ದರಿಂದ ಇದು ಜನರ ಪಾಲುಗೊಳ್ಳುವಿಕೆಯನ್ನು ಒಳಗೊಂಡಿದೆ. ಇದರಲ್ಲಿ ಶೇಕಡ 20ರಷ್ಟು ಜನ ನಿಧಾನವಾಗಿ ಸೇರಿಕೊಳ್ಳುವವರು. ಇನ್ನು ಉಳಿದ ಜನರು ಭಾಗವಹಿಸದೇ ಇರಬಹುದು. ಇಷ್ಟೆಂದ ಮಾತ್ರಕ್ಕೆ ಸಾಧ್ಯವಿಲ್ಲ ಎಂದು ಅರ್ಥ ಅಲ್ಲ. ಅದಕ್ಕೆ ತಾಳ್ಮೆ, ಸಹನೆ, ಅಗತ್ಯ. ಈ ಎರಡು ಅಂಶಗಳು ಯುವ ಜನಾಂಗದಲ್ಲಿ ಇಲ್ಲ. ಆದ್ದರಿಂದ ಒಮ್ಮೆ ಭಾಗವಹಿಸಿದ ವ್ಯಕ್ತಿ ಮತ್ತೊಮ್ಮೆ ಭಾಗವಹಿಸೀಯಾನು ಎಂಬ ನಂಬಿಕೆ ಇಲ್ಲ. ಯಾಕೆಂದರೆ ಮಾನವನಿಗೆ ಇರುವ ಸ್ವಾರ್ಥ ಪ್ರಜ್ಞೆ ಎಲ್ಲವನ್ನು ನುಂಗಿ ನೀರು ಕುಡಿಯುತ್ತದೆ. ಇಂದಿನ ಯುವ ಜನಾಂಗ ಲಾಭದ ದೃಷ್ಟಿಯಿಂದ ನೋಡಿದರೆ, ಅದು ಯೋಜನೆ ಯಾವುದೇ ಇರಲಿ' ನೀರ ಮೇಲೆ ಮಾಡಿದ ಹೋಮವಾದೀತು' ಎಂದರೆ ತಪ್ಪಲ್ಲ. ಯಾಕೆಂದರೆ ಯುವ ಜನಾಂಗಕ್ಕೆ ಅಂಟಿರುವ ಮಹಾನ್ ವ್ಯಾಧಿ ಎಂದರೆ 'ಸ್ವಾರ್ಥ'. ಅದು ದೇಶವನ್ನು ಕೂಡ ಅಧೋಗತಿಗೆ ತಳ್ಳುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗೆನೆ ಇದರಿಂದ ಜನರನ್ನು ಬಂಧ ಮುಕ್ತಗೊಳಿಸಿದರೆ ಸ್ವಾರ್ಥ ಹೋಗಿ ದೇಶಾಭಿಮಾನ ಮೂಡಿತು. ಮಾತ್ರವಲ್ಲ ಆ ಶಕ್ತಿ ಇರುವುದು ಮೋದಿಯವರ ಭಾಷಣದಲ್ಲಿ ಎಂಬುದಂತು ಸತ್ಯ.  'ಭಾರತ ಸ್ವಚ್ಚವಾಗಲಿ' ನಾವೆಲ್ಲರೂ ಕೈ ಜೋಡಿಸೋಣ ಎಂದು ಇಷ್ಟು ಹೇಳಿದ ಮಾತ್ರಕ್ಕೆ ಯುವ ಜನಾಂಗಕ್ಕೆ ಅರ್ಥವಾಗಬೇಕಲ್ಲ? ಇವರುಗಳು ಅದರ ಬಗ್ಗೆ ಯೋಚಿಸಬೇಕಲ್ಲ. ಆದರೆ ಗಾಂಧೀಜಿ ಯವರ ಕನಸನ್ನು ನನಸು ಮಾಡಿಯಾರು ಎನ್ನುವ ಅಶಾಭಾವನೆಯಿಂದ ವಿರಾಮ ನೀಡುತ್ತಿದ್ದೇನೆ.

                                 ಲೋಕೇಶ್ ಕುಂಚಡ್ಕ
                                  ಪ್ರಥಮ ಎಂ.ಎ. ಕನ್ನಡ

ಲೈಫು ಇಷ್ಟೇನೆ!!
ಜೀವನ ಅಂದ್ರೇನೆ ಎಷ್ಟು ವಿಚಿತ್ರ ಅಲ್ವಾ!! ಜೀವನ; ಜೀವನ ಏನಿದು ಜೀವನ?? ಬರೀ ದುಃಖ!! ಬರೀ ಸುಖ!! ಸುಖ ದುಃಖಗಳ ಸಮ್ಮಿಲನ. ಬಹುಷಃ ಮೂರನೇ ವ್ಯಾಖ್ಯಾನ ಸರಿ ಅನಿಸುತ್ತೆ. ಮುಸ್ಸಂಜೆಯ ಈ ಹೊತ್ತಲ್ಲಿ ಜೀವನದ ಬಗ್ಗೆ ಬರಿತಿರೋ ನಾನು ಜೀವನದ ಬಗ್ಗೆ ತಿಳ್ಕೊಂಡಿರೋದಾದ್ರುನು ಎಷ್ಟು? ಬರೀ ಜೀವನದ ಯಾವುದೋ ಒಂದು ಮಜಲನ್ನು ಇದೇ ಜೀವನ ಅಂತ ತಿಳ್ಕೊಂಡಿರೋರು ಎಷ್ಟು ಜನನೋ! ಹಾಗೆ ಜೀವನದ ಬಾಗಿಲು ಮುಚ್ಚಿ ಹೋಗಿದೆ ಅಂತ ಸಾವಿನ ಮನೆಯ ಕದ ತಟ್ಟೋರು ಅದೆಷ್ಟು ಮಂದಿನೋ? ಏನೇ ಇರ್ಲಿ ಏಳು ಬೀಳಿನ ಹಾದಿಯಲ್ಲಿ ಏಳಿಗೆಯನ್ನೇ ಬಯಸೋ ಜನ ನಾವು; ಹಾಗೇ ಜನರೇಶನ್ ನಮ್ದು ಅಪ್ಪ ಅಮ್ಮನೇ ಕಿರಿ ಕಿರಿ ಅನ್ನೋ ಈ ಕಾಲದ ಮಕ್ಕಳಿಗೆ ಜೀವನ ಅಂದ್ರೆ ಏನು ಅಂತ ತಿಳಿಹೇಳುವಷ್ಟು ಟೈಮ್ ಇಲ್ದಿರೋ ಪೇರೆಂಟ್ಸ್! ಈ ನಾಲ್ಕು ದಿನಗಳ ನಮ್ಮ ಜೀವನದ ಆಟದಲ್ಲಿ ಎಷ್ಟೋ ಮಂದಿ ಬತರ್ಾರೆ; ಹೋಗ್ತಾರೆ; ಟಿ.ವಿ ಸೀರಿಯಲ್ ತರಾ! ಅಲ್ವಾ? ಇವೆಲ್ಲವುಗಳ ನಡುವೆ ಕಳೆದು ಹೋಗೋ ಈ ನಾಲ್ಕು ದಿನಗಳ ಲೈಫು......... ಲೈಫು ಇಷ್ಟೇನೆ!!!
ಸ್ವಾತಿ
ದ್ವಿತೀಯ ಎಂ.ಎ ಅರ್ಥಶಾಸ್ತ್ರ ವಿಭಾಗ
ವಿಧಿಯಾಟ
ಉಮಾ ಹುಟ್ಟುತ್ತಲೇ ಶ್ರೀಮಂತಳಾಗಿ ಬೆಳೆದಳು. ವಯಸ್ಸಿಗೆ ಸಹಜವಾಗಿ ಮದುವೆಯೂ ಆಯಿತು. ಆದರೆ ಅವಳ ಸುಖ ಸಂತೋಷ ಅವಳ ಸಾಂಸಾರಿಕ ಬದುಕಿನ ಆರಂಭದೊಂದಿಗೆ ಕೊನೆಯಾಯಿತು. ಅವಳ ದುರಾದೃಷ್ಟವೋ ಎಂಬಂತೆ ಯಾವುದೋ ಜ್ವರ ಕಾಣಿಸಿಕೊಂಡು ಕಿವಿಯಲ್ಲಿ ಗುಳ್ಳೆಗಳಾಗಿ ಅದು ಒಡೆದು ಕಿವಿ ಕೇಳಿಸದಾಯಿತು. ತಂದೆ- ತಾಯಿಯ ಮುದ್ದಿನ ಆರೈಕೆಯಲ್ಲಿ ಬೆಳೆದ ಉಮಾ ಗಂಡನ ಮನೆಯಲ್ಲಿ ನೋವು, ಕಷ್ಟ, ಅವಮಾನಗಳನ್ನು ಎದುರಿಸಬೇಕಾಯಿತು. ಗಂಡ ತನ್ನ ತಾಯಿಯ ಮಾತು ಕೇಳಿ ಅವಳಿಗೆ ಔಷಧವನ್ನು ಕೊಡಿಸದಾದ ಗಂಡನ ತಿರಸ್ಕಾರದ ನಡುವೆಯೂ ತನ್ನ ತವರು ಮನೆಯವರ ಆಶ್ರಯದಲ್ಲಿ ಬದುಕು ಸಾಗಿಸಲಾರಂಭಿಸಿದಳು. ವರ್ಷಕ್ಕೊಮ್ಮೆ ಬಂದು ಹೋಗುವ ಗಂಡನ ದರ್ಪದಾಟವೋ ಎಂಬಂತೆ ಹೆಣ್ಣು ಮಗುವೊಂದಕ್ಕೆ ತಾಯಿಯಾದಳು. ಸಾಯಲು ಮನಸ್ಸು ಮಾಡುತ್ತಿದ್ದ ಅವಳ ಜೀವ ಮಗುವಿಗಾಗಿ ಬದುಕಿ ಉಳಿಯಿತು. ಕಷ್ಟ ಪಟ್ಟು ಮಗುವನ್ನು ಬೆಳೆಸಿದಳು. ಅವಳ ತಂದೆ - ತಾಯಿ ಅಕ್ಕ ತಂಗಿ ಅವಳಿಗೆ ಆಸರೆಯಾಗಿ ನಿಂತರು. ತನ್ನ ಕಷ್ಟವನ್ನೆಲ್ಲಾ ನುಂಗಿ ಮಗಳಿಗೆ ಪ್ರೀತಿ ಧಾರೆಯೆರೆದು ಅವಳನ್ನು ಚೆನ್ನಾಗಿ ಬೆಳೆಸಿದಳು. ಮಗಳು ಬೆಳೆದು ದೊಡ್ಡವಳಾದಳು ಇನ್ನೇನು ತನ್ನ ಕಷ್ಟ ತೀರಿತು ಎನ್ನುವಾಗಲೇ ಕ್ರೂರ ವಿಧಿ ಅವಳ ಬಾಳಿನಲ್ಲಿ ಪುನಃ ಆಟವಾಡತೊಡಗಿತು. ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕೆಂದು ಬೆಳೆಸಿದ ತನ್ನ ಮಗಳು ಸ್ನೇಹಾ ಅವಳ ಕಲ್ಪನೆಯಂತೆ ಇದ್ದಳು. ಎಲ್ಲರ ಪ್ರೀತಿಗೆ ಪಾತ್ರಳಾಗಿ ಎಲ್ಲರನ್ನೂ ಗೌರವದಿಂದ ಕಾಣುತ್ತಾ, ಪರರ ಕಷ್ಟಕ್ಕೆ ಸ್ಪಂದಿಸುತಾ,್ತ ಎಲ್ಲರಿಗೂ ಒಳಿತನ್ನೆ ಬಯಸುತಾ,,್ತ ತನ್ನಿಂದಾದ ಸಹಾಯ ಮಾಡುತ್ತಾ ಸುಂದರ ಬದುಕು ಕಟ್ಟಿಕೊಂಡಿದ್ದ ಸ್ನೇಹಾಳ ಬಾಳಿಗೆ ಹುಟ್ಟಿಗೆ ಕಾರಣವಾದ ತಂದೆಯೇ ಮುಳುವಾದ. ವಿದ್ಯಾಭ್ಯಾಸಕ್ಕೆ ತೆರಳುವ ತನ್ನ ಮಗಳ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸತೊಡಗಿದ. ಅವಳು ಶೀಲಗೆಟ್ಟವಳು ಎಂಬ ಹಣೆಪಟ್ಟಿ ಕಟ್ಟಿದ, ಗುರು-ಶಿಷ್ಯರ ಸಂಬಂಧಕ್ಕೆ ಅಪಾರ್ಥ ಕಲ್ಪಿಸಿ, ಸ್ನೇಹ ಭಾಂದವ್ಯದ ಪದಗಳಿಗೆ ವ್ಯಭಿಚಾರದ ಅರ್ಥ ನೀಡಿ ಅಪಪ್ರಚಾರ ಮಾಡತೊಡಗಿದ. ಏನೂ ಅರಿಯದ, ಸಂಬಂಧಗಳನ್ನು ಗೌರವಿಸುತ್ತಿದ್ದ ಅವಳ ಬದುಕು ಗಾಳಿಗೆ ಸಿಕ್ಕ ತರೆಗೆಲೆಯಂತಾಯಿತು. ಸಾಯುವ ಮನಸ್ಸು ಮಾಡಿದಳು ಆದರೆ ತಾಯಿಯ ಬದುಕು ನೋಡಿ ತನ್ನ ಅಪವಾದವನ್ನು ಛಲವಾಗಿ ಸ್ವೀಕರಿಸಿದಳು. ಆಡುವ ಬಾಯಿಯನ್ನು ಮುಚ್ಚಿಸಬೇಕೆಂದು ಅವರ ಅವಮಾನದ ನುಡಿ ಲೆಕ್ಕಿಸದೆ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಉತ್ತಮ ಸ್ಥಾನಕ್ಕೇರಿದಳು. ಖಂಡಿಸಿದ ತಂದೆ ಮಾತ್ರವಲ್ಲ ಈ ಸಮಾಜವನ್ನು ಎದುರಿಸಿದಳು. ಮಹಿಳಾಪರ ಹೋರಾಟಕ್ಕಾಗಿ ನಿಂತು ಎಷ್ಟೋ ನೊಂದ ಮನಸ್ಸುಗಳ ಜೊತೆಯಾದಳು. ತಾಯಿಗಾದ ಕಷ್ಟ ನೋವು ಜೊತೆ ತನ್ನ ಅನುಭವ ಅವಮಾನ ಸೇರಿಸಿ ಛಲದಿಂದ ಬದುಕಿ ಸುಂದರ ಬದುಕು ಕಟ್ಟಿಕೊಂಡಳು. ಇಂದು ಅವಳನ್ನಾಡಿದ ಅದೇ ಬಾಯಿಗಳು ತೆಪ್ಪಗಿವೆ. ಕಾರಣ ಅವಳಿಗೆ ಸತ್ಯವನ್ನು ತಿಳಿಸುವ ಧೈರ್ಯವಿದೆ. ತಾಯಿಗಾದ ನೋವು ಬೇರೆಯವರ ಬಾಳಲ್ಲಿ ಬರಬಾರದು ಎಂದು ಆಶಿಸುತ್ತಾಳೆ. ಉಮಾಳಿಗೂ ಇಂದು ತೃಪ್ತಿಯಿದೆ. ಸ್ನೇಹಾಳನ್ನು ಬೆಳೆಸಿದ ಸಾರ್ಥಕ್ಯ ಭಾವವಿದೆ. ತನ್ನಂತೆ ನೋವುಂಡ ತಾಯಿಯರಿಗೆ ಸ್ನೇಹಾಳಂತ ಮಗಳನ್ನು ರೂಪಿಸಿ ಎಂಬ ಕಿವಿಮಾತು ನೀಡುತ್ತಾಳೆ. ಇಂತಹ ನೋವುಗಳು ಎಷ್ಟೋ ಹೆಣ್ಣುಮಕ್ಕಳ ಬಾಳಲ್ಲೂ ನಡೆಯಬಹುದು ಅಲ್ಲವೇ?
ಸ್ಪಂದಿಸಿ.....ಸಹಕರಿಸಿ......ಜೊತೆಯಾಗಿ.......

ಶ್ವೇತಾಶ್ರೀ
ದ್ವಿತೀಯ ಎಂ.ಎ. 
ಕನ್ನಡ ವಿಭಾಗ

9/23/14

ಮಾತು..!

ಪೃಥಿವ್ಯಾಂ ತ್ರೀಣಿರತ್ನಾನಿ ಜಲಮಾನ್ಯಂ ಸುಭಾಷಿತಂ
ಮೂಢೈ ಪಾಶಾಣ ಖಂಡೇಷು ರತ್ನ ಸಂಜ್ಞಾ
ವಿಧೀಯತೇ
ಭೂಮಿಯ ಮೇಲೆ ಮೂರು ವಸ್ತುಗಳನ್ನು ಶ್ರೇಷ್ಟವೆಂದು ಪರಿಗಣಿಸಲಾಗಿದೆ. ಅವೆಂದರೆ ಅನ್ನ, ನೀರು ಮತ್ತು ಒಳ್ಳೆಯ ಮಾತು. ಆದರೆ ಮೂರ್ಖರು ಕಲ್ಲಿನ ಚೂರನ್ನು ಶ್ರೇಷ್ಟ ರತ್ನವೆಂದು ಭಾವಿಸಿದ್ದಾರೆಂದು ಸುಭಾಷಿತವೊಂದು ಹೇಳುತ್ತದೆ.
ಮಾತು ಎನ್ನುವುದು ನಮ್ಮ ಅನಿಸಿಕೆಗಳನ್ನು ಅಭಿವ್ಯಕ್ತಿಗೊಳಿಸುವ ಮಾಧ್ಯಮ ಮಾತ್ರವಲ್ಲ ವ್ಯಕ್ತಿತ್ವದ ಕೈಗನ್ನಡಿಯೂ ಹೌದು. ಅದು ಮಧುರವಾಗಿರಬೇಕು, ಇನ್ನೊಬ್ಬರನ್ನು ನೋಯಿಸುವಂತಿರಬಾರದು. ಬಸವಣ್ಣ ತನ್ನ ವಚನವೊಂದರಲ್ಲಿ ಹೇಳುವಂತೆ ನುಡಿದರೆ ಮುತ್ತಿನ ಹಾರದಂತೆ, ಮಾಣಿಕ್ಯದ ದೀಪ್ತಿಯಂತೆ, ಸ್ಫಟಿಕದ ಸಲಾಕೆಯಂತಿರಬೇಕು. ಕಠಿಣವಾದ ನುಡಿಗಳಿಗಿಂತ ಮೃದುವಾದ, ಹಿತವಾದ ನುಡಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತದೆ. ಕೆಲವೊಂದು ಒಳ್ಳೆಯ ಮಾತುಗಳು ಇನ್ನೊಬ್ಬರ ಜೀವನವನ್ನೇ ಬದಲಿಸಬಹುದು. ನಾವಾಡುವ ಮಾತು ನಮ್ಮ ಸಂಸ್ಕಾರವನ್ನು ಪ್ರತಿನಿಧಿಸುತ್ತದೆ. ಸರ್ವಜ್ಞ ಕವಿ ಮಾತಿನ ಬಗ್ಗೆ - ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ, ರಸಿಕನಲ್ಲದವನ ಬರಿ ಮಾತು ಕಿವಿಯೊಳ್ ಕೂರ್ದಸಿಯ ಬಡಿದಂತೆ ಎನ್ನುತ್ತಾರೆ.
ಮಾತುಗಾರಿಕೆ ಎನ್ನುವುದು ಒಂದು ಕಲೆ. ಈ ಕಲೆಯನ್ನು ಕರಗತ ಮಾಡಿಕೊಳ್ಳುವುದು ತುಂಬಾ ಕಷ್ಟ. ಮಾತನಾಡುವವರು ನಿಜವಾಗಿಯೂ ಜ್ಞಾನವುಳ್ಳವರಾಗಿರಬೇಕು. ಹದವರಿತು, ಸಂದರ್ಭವನ್ನರಿತು ಮಾತನಾಡಬೇಕು. ವ್ಯಾಸಸ್ಮೃತಿಯಲ್ಲಿ ಹೀಗೆ ಉಲ್ಲೇಖಿಸಲಾಗಿದೆ : ನೂರರಲ್ಲಿ ಒಬ್ಬ ಮಾತ್ರ ಶೂರನಾಗುತ್ತಾನೆ. ಸಾವಿರದಲ್ಲಿ ಒಬ್ಬ ಮಾತ್ರ ವಿದ್ವಾಂಸ, ಹತ್ತು ಸಾವಿರದಲ್ಲಿ ಒಬ್ಬ ಮಾತ್ರ ಚತುರ ಮಾತುಗಾರನಾಗಬಲ್ಲ.
ಆದುದರಿಂದ ಮಾತುಗಾರಿಕೆ ಚತುರತೆಯ ಪ್ರದರ್ಶನವೂ ಹೌದು. ಮಾತಿನ ಕೌಶಲ್ಯದಿಂದ ಕುಳಿತಲ್ಲೇ, ನಿಂತಲ್ಲೇ ಜಗವನ್ನು ಆಳಬಹುದು.
ನುಡಿದ ಮಾತಿಂಗೆ ತಡಬಡ ಬಂದಲ್ಲಿ ನುಡಿದ ಭಾಷೆಗೆ ಭಂಗ ನೋಡ, ಹಿಡಿದ ಕುಲಕ್ಕೆ ಹಾನಿ ಬಂದಲ್ಲಿ ಒಡಲವಿರಿಸುವುದೆ ಭಂಗ ನೋಡಯ್ಯ, ಇದು ಕಾರಣ ನಡೆನುಡಿ ಶುದ್ದವಿಲ್ಲದಿದ್ದೆಡೆ ಚಂಡೇಶ್ವರ ಲಿಂಗವಾದರೂ ತಪ್ಪಿನೊಪ್ಪಿಗೊಳ್ ಮಡಿವಾಳಯ್ಯ. ಇದು ವಚನಕಾರ ಚಂದ್ರಯ್ಯನ ನುಡಿ. ಅವರ ಪ್ರಕಾರ ಮಾತು ಪ್ರಿಯವಾಗಿ, ಪ್ರಾಸಂಗಿಕವಾಗಿ, ಮೃದುವಾಗಿ,
ಪ್ರಯೋಜನಕಾರಿಯಾಗಿರಬೇಕು. ಮಾತಿಗೆ ಹೊತ್ತುಗೊತ್ತುಗಳಿರಬೇಕು, ಮನಸ್ಸಲ್ಲಿ ಲಕ್ಷ್ಯ ಮತ್ತು ನಾಲಿಗೆ ಹತೋಟಿಯಲ್ಲಿರಬೇಕು. ಮಾತು ಮಾಣಿಕ್ಯದಂತೆ ಒಮ್ಮೆ ಆಡಿದ ಮಾತು ಮತ್ತೆ ಸಿಗುವುದಿಲ್ಲ. ಆದರೆ ಅವು ನಾಶವಾಗುವುದು ಇಲ್ಲ. ಮಾತು ಮಾತಿಗೆ ಸೇರಿ ಜನಿಸಿದ್ದು ಪ್ರೀತಿ, ಮಾತು ಮಾತಿಗೆ ತಾಗಿ ಹುಟ್ಟಿದ್ದು ಭೀತಿ, ಮಾತು ಅರಿದಾತನಿಗೆ ಮಾನ ಮಯರ್ಾದೆ, ಮಾತನರಿಯದ ಮನಕೆ ನಾನಾ ತಗಾದೆ. ನಾವು ಆಡುವ ಮಾತು ಹೀಗಿರಲಿ ಗೆಳೆಯಾ, ಮೃದು ವಚನ ಮೂಲರ್ೊಕ ಜಯಿಸುವುದು ತಿಳಿಯಾ, ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ, ಮೂರು ಗಳಿಗೆಯ ಬಾಳು ಘಮ ಘಮಿಸುತಿರಲಿ ಎಂದು ಕವಿ ದಿನಕರ ದೇಸಾಯಿಯವರು ಹೇಳುತ್ತಾರೆ.
ಆತ್ಮ ಸಂಸ್ಕಾರದ ಒಂದು ರೂಪವಾದ ಮಾತನಾಡುವ ಕಲೆಯು ಮಗು ಪ್ರಪಂಚಕ್ಕೆ ಬಂದಂದಿನಿಂದಲೂ ತನ್ನ ಜೀವನದ ಕೊನೆಯವರೆಗೂ ಅವಿರತವಾಗಿ ಸಾಗುವ ಒಂದು ಸಚೇತನ ಕ್ರಿಯೆ. ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ.


ಪವಿತ್ರ ಶೆಟ್ಟಿ
ಪ್ರಥಮ ಎಂ.ಎ. ಕನ್ನಡ
 


ಜೀವನ ರೂಪಿಸುವಲ್ಲಿ ತಾಯಿ ಪಾತ್ರ



ಮಕ್ಕಳ ಜೀವನವನ್ನು ರೂಪಿಸುವಲ್ಲಿ ತಾಯಿ ಪಾತ್ರ ಮಹತ್ವವಾದುದು. ಮಗುವಿಗೆ ಜನ್ಮ ಕೊಟ್ಟ ತಂದೆ - ತಾಯಿ ಮಕ್ಕಳ ಶ್ರೇಯಸ್ಸಿಗಾಗಿ ಹಗಲು ರಾತ್ರಿಯೆನ್ನದೆ ದುಡಿಯುತ್ತಾರೆ. ತಾಯಿಯಂತು ಕರುಳ ಬಳ್ಳಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕುತ್ತಾಳೆ.
ತಾಯಿ ತನ್ನ ಅಸೆ - ಆಕಾಂಕ್ಷೆಗಳನ್ನು ಬದಿಗೊತ್ತಿ ಮಕ್ಕಳ ಭವಿಷ್ಯದ ಕಡೆಗೆ ಗಮನ ಕೊಡುತ್ತಾಳೆ. ಮನೆಯಲ್ಲಿ ಎಷ್ಟೇ ಕಷ್ಟ ಇದ್ದರೂ ಮಕ್ಕಳಿಗೆ ತಾಯಿ  ಮಾತ್ರ ಏನೂ ಕೊರತೆ ಆಗದಿರುವ ಹಾಗೆ ಅವರ ಇಷ್ಟದಂತೆ ನೋಡಿಕೊಳ್ಳುತ್ತಾಳೆ.
ಏಕೆಂದರೆ ಮಕ್ಕಳು ಯೋಚಿಸಿ ಜೀವನವನ್ನು ಹಾಳು ಮಾಡಿ ಕೊಳ್ಳಬಾರದೆಂಬ ಕಾರಣದಿಂದಾಗಿ. ಮಕ್ಕಳಿಗೆ ಒಂದು ನೆಲೆಯನ್ನು ರೂಪಿಸಿಕೊಡುತ್ತಾಳೆ ತಾಯಿ.ಆದರೆ ಮಕ್ಕಳು ತಾಯಿಯ ಬಳಿ ಕೇಳುವುದು ನೀನು ಏನು ಮಾಡಿದ್ದೀಯ ನಮಗೆ, ನಿನ್ನ ಮಕ್ಕಳಾಗಿ ಹುಟ್ಟಿದ್ದೇ ತಪ್ಪಾಯಿತು ಎಂಬ ಮಾತನ್ನು ಹೇಳಿ ತಾಯಿಯನ್ನು ನಿಂದಿಸುತ್ತಾರೆ.  ಹೆತ್ತವರಿಗೆ ಹೆಗ್ಗಣ ಕೂಡ ಮುದ್ದು ಎನ್ನುವ ಹಾಗೆ ಮಕ್ಕಳು ಏನೇ ಹೇಳಿದರು ತಾಯಿ ಅವರನ್ನು ಪ್ರೀತಿಯಿಂದಲೇ ಕಾಣುತ್ತಾಳೆ,ಅದರಿಂದಲೇ ಕ್ಷಮಯಾಧರಿತ್ರಿ ಎನ್ನುವುದು.

ಅಂತರ್ಜಾಲ ಚಿತ್ರ

ತಾಯಿ ಕಷ್ಟ - ಪಟ್ಟು ದುಡಿಯುವುದು ಮಕ್ಕಳಿಗಾಗಿಯೆ, ತಾನು ಊಟ ಮಾಡದೆ ಇರುತ್ತಾಳೆ ಆದರೆ ಮಕ್ಕಳನ್ನು ಉಪವಾಸ ಕೆಡುವುದಿಲ್ಲ. ಎಲ್ಲರಂತೆ ತಮ್ಮ ಮಕ್ಕಳು ವಿದ್ಯೆಯನ್ನು ಪಡೆಯಬೇಕು ಎಂದು ತಾಯಿ ಆಸೆ ಪಡುತ್ತಾಳೆ, ಒಂದು ನೆಲೆ ಎಂಬುದು ಸಿಗುವವರೆಗೂ ಹೋರಾಡುತ್ತಾಳೆ. ಆದರೆ ಮಕ್ಕಳು ಅವರಿಗೆ ನೆಲೆ ಎಂಬುದು ಆದ ನಂತರ ಹೆತ್ತ ತಾಯಿಯನ್ನೇ ಮರೆಯುತ್ತಾರೆ. ಇದೇ ಕಾರಣದಿಂದ ಹೇಳುವುದು ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರಬಹುದೆ ಹೊರತು ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ .ಅಮ್ಮನ ಪ್ರೀತಿಯೆಂಬ ಗಾಳಕ್ಕೆ ನಾವು - ನೀವು ಎಲ್ಲರೂ ಕೂಡ ಸಿಕ್ಕಿಬಿದ್ದಿದ್ದೇವೆ. ತಾಯಿಯ ವಾತ್ಸಲ್ಯ ಯಾರೂ ನೀಡಲು ಸಾಧ್ಯವಿಲ್ಲ. ಭೂಮಿಯ ಮೇಲಿರುವ ದೇವರು ತಾಯಿ. ತಾಯಿಯನ್ನು ಪೂಜಿಸಿ, ಗೌರವಿಸಿ . ನಮಗೆ ಜನ್ಮ ನೀಡಿದ ತಾಯಿಗೆ ಇಷ್ಟು ಮಾಡಲು ಆಗುವುದಿಲ್ಲವೆ. ತಾಯಿಯನ್ನು ಕಡೆಯ ಕಾಲದವರೆಗೂ ಕಾಪಾಡಿ.
ಸೌಜನ್ಯ
ದ್ವಿತೀಯ ಎಂ.ಎ.
ಕನ್ನಡ ವಿಭಾಗ.

ಆ ಮೂರ್ತಿಯನ್ನೊಮ್ಮೆ  ನೆನಪಿಸಿದಾಗ

ಯು.ಆರ್. ಅನಂತಮೂರ್ತಿ
ಅಂತರ್ಜಾಲ ಚಿತ್ರ

ಓದುಗ ಸಮುದಾಯಕ್ಕೆ ಪ್ರಶ್ನೆಗಳನ್ನು ಮೂಡಿಸಿದ್ದ, ಹುಟ್ಟುಹಾಕಿದ್ದ ಕೀರ್ತಿ ಬಹುವಾಗಿ  ನವ್ಯದ ಕಾಲಘಟ್ಟದ ಬರಹಗಾರರಿಗೆ ಸಲ್ಲಬೇಕು. ಓದುಗರ ತಿಳುವಳಿಕೆಯನ್ನು ಒರೆಗೆ ಹಚ್ಚುವ ಕೆಲಸ ನವ್ಯ ಸಾಹಿತಿಗಳಿಂದ ನಡೆಯಿತು. ಸಾಹಿತ್ಯದ ಮೂಲ ರೂಪವಾಗಿ ಪ್ರಜ್ಞಾವಂತ ಓದುಗ ವರ್ಗವನ್ನು ರೂಪಿಸಿ ಬೆಳೆಸಿಕೊಂಡು ಬಂದಿರುವುದೇ   ನವ್ಯದ ನಾಯಕರ ಕಾಲದಲ್ಲಿ ಎಂದು ಹೇಳಬಹುದು. ಇಂಥ ಒಂದು ಓದುಗ ಅಭಿಮಾನಿಗಳ ವರ್ಗವನ್ನು ಹುಟ್ಟುಹಾಕಿ ಬೆಳೆಸುತ್ತಾ ಬಂದವರಲ್ಲಿ ಯು.ಆರ್. ಅನಂತಮೂರ್ತಿ  ಅವರು ಸಹ ಒಬ್ಬರು.
ಸಂಸ್ಕಾರ ,ಭಾರತೀಪುರ, ಘಟಶ್ರಾದ್ದ, ದಿವ್ಯ, ಭವ, ದಂತಹ ಕೃತಿಗಳ ಮೂಲಕ ಅದೆಷ್ಟು ತತ್ವ ವಿಚಾರಗಳನ್ನು ಬರೆಯುತ್ತಾ ಬಂದು ಬರಹದುದ್ದಕ್ಕೂ ವಿಮರ್ಶೆಯನ್ನು ಹುಟ್ಟು ಹಾಕುತ್ತಾ ಪ್ರಶ್ನೆಗಳನ್ನು ಮೂಡಿಸಿ ಓದುಗರಲ್ಲಿ ಕೊನೆಯವರೆಗೂ ಪ್ರಶ್ನೆಯಾಗಿಯೇ ಉಳಿದು ಬಿಡುವುದು ಅವರ ಬರಹದ ವಿಶೇಷ. ಇಂಗ್ಲೀಷ್ ಶಿಕ್ಷಣದ ಪ್ರಭಾವ, ತನ್ನ ಜಾತಿಯ ಕೆಲವು ಕುರುಡು ಆಚರಣೆಗಳು ಇವುಗಳ ಒಂದಕ್ಕೊಂದು ತಾಕಲಾಟಗಳ ಘರ್ಷಣೆಯ ಉರಿಯನ್ನು ತನ್ನ ಬರಹದುದ್ದಕ್ಕೂ ಮೂಡಿಸಿಕೊಂಡು ಹೋಗುವುದು, ಇವರು ಓದುಗನನ್ನು ಹಿಡಿದಿಟ್ಟುಕೊಳ್ಳುವ ಒಂದು ತಂತ್ರವು ಹೌದು.
ತನ್ನ ಜೀವನದ ಉದ್ದಕ್ಕೂ ಭಾರೀ ಚರ್ಚೆಗಳನ್ನು ಹುಟ್ಟು ಹಾಕಿದವರಲ್ಲಿ ಅನಂತಮೂರ್ತಿಯವರನ್ನು ಬಿಟ್ಟರೆ ಕನ್ನಡ ಸಾಹಿತಿಗಳಲ್ಲಿ ಇನ್ನೊಬ್ಬ ಸಿಗಲಾರರು. ತಮ್ಮ ಬರಹ, ಮಾತುಗಾರಿಕೆಯ ಕಲೆಯಿಂದ ಎಂಥವರನ್ನೂ ಮೋಡಿಗೋಳಿಸತ್ತಿದ್ದ ಅ ವಾಗ್ಮಿಗೆ ವಿರೋಧಗಳು ಕಡಿಮೆಯಿರಲಿಲ್ಲ.
ಅನಂತಮೂರ್ತಿಯವರಂತಹ ಸಾಹಿತಿಯೊಬ್ಬ ರಾಜಕಾರಣಿಯನ್ನು ಖಂಡಿಸಿ ನೀಡಿದ ಹೇಳಿಕೆಗಳು ಅತಿಶಯೋಕ್ತಿ ಎನಿಸಿದರೂ ಪ್ರಜಾಪ್ರಭುತ್ವ ದೇಶದಲ್ಲಿ ಅದು ತಪ್ಪೆಂದು ಕಾಣಿಸಲಾರದು.
 ಪ್ರತಿಯೊಂದನ್ನು ವೈಚಾರಿಕ ನೆಲೆಗಟ್ಟಲ್ಲಿ ವಿಮರ್ಶಿಸುವ ಅನಂತಮೂರ್ತಿಯವರು ತಮ್ಮ ಸಾವಿನಲ್ಲೂ ಸುದ್ದಿಯಾದರು. ವಿವಾದದ ಅಲೆಗಳನ್ನು ಹುಟ್ಟಿಹಾಕಿದರು. ದೇವರು, ನಂಬಿಕೆ, ಧರ್ಮ ಇವುಗಳ ಸಾಚಾತನದ ಬಗ್ಗೆ ಪ್ರಶ್ನೆಯನ್ನು ಮೂಡಿಸಿದರು. ಯಾವ ಕ್ರಿಯಾ ವಿಧಿಗಳನ್ನು ತಮ್ಮ ಬರಹದ ಮೂಲಕ ಅಲ್ಲಗಳೆದರೋ, ಯಾವ ಮಂತ್ರ ಘೋಷಗಳನ್ನು ತರ್ಕಿಸಿದರೊ ಕೊನೆಗೆ ಅದೆ ಮಂತ್ರ ಘೋಷಗಳ ಸದ್ದಿನಲ್ಲಿ ಅವರು ಲೀನವಾಗಿ ಹೋದದ್ದು ಒಂದು ವಿಪರ್ಯಸವಾಗಿ ನಮ್ಮನ್ನು ಕಾಡುತ್ತಿರುವುದು ಮಾತ್ರ ಸತ್ಯ.


ಲೋಕೇಶ್ ಕುಕ್ಕುಜೆ
ಸಂಪಾದಕರು 
ದ್ವಿತೀಯ ಎಂ.ಎ ಕನ್ನಡ                                                                        


  ಬಿತ್ತಿ ವಿಶೇಷಾಂಕ 2017